ಆ್ಯಪ್ನಗರ

ಪುತ್ರಿ, ಆರೋಪಿ ಫೋಟೋ ವೈರಲ್: ಬೇಸರ ವ್ಯಕ್ತಪಡಿಸಿದ ಮಧು ಪತ್ತಾರ ತಾಯಿ

ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋವೊಂದನ್ನು ಕ್ರಾಪ್ ಮಾಡಿ ಹರಿಬಿಟ್ಟಿದ್ದಾರೆ. ಫೋಟೋಗಳನ್ನು ಹೇಗೆ ಬೇಕಾದರೂ ಎಡಿಟ್ ಮಾಡಬಹುದು. ಆದರೆ, ನನ್ನ ಮಗಳು ಆರೋಪಿ ಜತೆ ಇರುವ ಫೋಟೋ ಹರಿಬಿಟ್ಟಿದ್ದು ಮನಸಿಗೆ ಘಾಸಿ ಮಾಡಿದೆ ಎಂದು ವಿದ್ಯಾರ್ಥಿನಿಯ ತಾಯಿ ಕಣ್ಣೀರು ಸುರಿಸಿದ್ದಾರೆ.

Vijaya Karnataka Web 27 Apr 2019, 2:27 pm
ರಾಯಚೂರು: ನನ್ನ ಮಗಳು ಹಾಗೂ ಆರೋಪಿ ಇರುವ ಫೋಟೋ ವೈರಲ್ ಮಾಡಲಾಗಿದ್ದು, ಮನಸಿಗೆ ತುಂಬಾ ನೋವಾಗಿದೆ ಎಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ತಾಯಿ ಅಳಲು ತೊಡಿಕೊಂಡಿದ್ದಾರೆ.
Vijaya Karnataka Web madhu pattar mother demands justice for daughter
ಪುತ್ರಿ, ಆರೋಪಿ ಫೋಟೋ ವೈರಲ್: ಬೇಸರ ವ್ಯಕ್ತಪಡಿಸಿದ ಮಧು ಪತ್ತಾರ ತಾಯಿ


ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋವೊಂದನ್ನು ಕ್ರಾಪ್ ಮಾಡಿ ಹರಿಬಿಟ್ಟಿದ್ದಾರೆ. ಫೋಟೋಗಳನ್ನು ಹೇಗೆ ಬೇಕಾದರೂ ಎಡಿಟ್ ಮಾಡಬಹುದು. ಆದರೆ, ನನ್ನ ಮಗಳು ಆರೋಪಿ ಜತೆ ಇರುವ ಫೋಟೋ ಹರಿಬಿಟ್ಟಿದ್ದು ಮನಸಿಗೆ ಘಾಸಿ ಮಾಡಿದೆ ಎಂದು ವಿದ್ಯಾರ್ಥಿನಿಯ ತಾಯಿ ಕಣ್ಣೀರು ಸುರಿಸಿದ್ದಾರೆ.

ಬಳ್ಳಾರಿ ವಲಯದ ಐಜಿ ಎಂ.ನಂಜುಂಡಸ್ವಾಮಿ ಹಾಗೂ ಎಡಿಜಿಪಿ ಸಲೀಂ ಅವರ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಪೊಲೀಸ್ ಇಲಾಖೆ ಕೂಡ ಸಾಕಷ್ಟು ಸಹಕಾರ ನೀಡುತ್ತಿದೆ. ಉತ್ತಮ ರೀತಿಯಲ್ಲಿ ತನಿಖೆ ನಡೆಯುತ್ತದೆ ಎನ್ನುವು ನಂಬಿಕೆ ಇದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೇ ಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಕ್ರೈಂ ಎಡಿಜಿಪಿ ಸಭೆ

ಮಧು ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಕ್ರೈಂ ಎಡಿಜಿಪಿ ಡಾ.ಎಂ. ಎ. ಸಲೀಂ ಮತ್ತು ಬಳ್ಳಾರಿ ವಲಯ ಐಜಿಪಿ ನಂಜುಂಡ ಸ್ವಾಮಿ ಅವರು ವಿದ್ಯಾರ್ಥಿಗಳ ಜತೆ ಸಭೆ ನಡೆಸಿದರು. ಎಸ್‌ಪಿ ಕಚೇರಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡರು ಭಾಗಿಯಾಗಿದ್ದಾರೆ.

ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅಸಹಜ ಸಾವು ಪ್ರಕರಣ ಸಂಬಂಧ ಆರಂಭದ ತನಿಖೆಯಲ್ಲಿ ಪೊಲೀಸರು ಲೋಪ ಎಸಗಿದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ವರದಿ ಸಲ್ಲಿಸಲು ಸೂಚಿಸಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ಚರ್ಚಿಸಿ ಮಾಹಿತಿ ಕಲೆ ಹಾಕಲಾಗಿದೆ. ಸ್ಥಳೀಯ ಶಾಲಾ ಕಾಲೇಜ್ ವಿದ್ಯಾರ್ಥಿನಿಯರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ರೈಂ ಎಡಿಜಿಪಿ ಡಾ.ಎಂ.ಎ ಸಲೀಮ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ