ಆ್ಯಪ್ನಗರ

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವಸಂತೋತ್ಸವ ಹಾಗೂ ಮಹಾರಥೋತ್ಸವ

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಅಂಗವಾಗಿ ಗುರುವಾರ ಶ್ರೀಮಠದಲ್ಲಿ ವಸಂತೋತ್ಸವ ಹಾಗೂ ಮಹಾರಥೋತ್ಸವ ನೆರವೇರಿಸಲಾಯಿತು. ಮಹಾರಥೋತ್ಸವದ ವೇಳೆ ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದ ಮಹಾಮಾರಿ ಕೊರೊನಾತಂಕ ಕಳೆದು ಎಲ್ಲೆಡೆ ಶಾಂತಿ ನೆಮ್ಮದಿ ಹಾಗೂ ಸಮೃದ್ದಿ ಪುನಾ ಸ್ಥಾಪನೆಯಾಗಲಿ ಎಂದು ನುಡಿದರು.

Vijaya Karnataka Web 6 Aug 2020, 2:28 pm
ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಅಂಗವಾಗಿ ಗುರುವಾರ ಶ್ರೀಮಠದಲ್ಲಿ ವಸಂತೋತ್ಸವ ಹಾಗೂ ಮಹಾರಥೋತ್ಸವ ನೆರವೇರಿಸಲಾಯಿತು.
Vijaya Karnataka Web Mantralaya Rathotsava


ಮಹಾರಥೋತ್ಸವದ ವೇಳೆ ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದ ಮಹಾಮಾರಿ ಕೊರೊನಾತಂಕ ಕಳೆದು ಎಲ್ಲೆಡೆ ಶಾಂತಿ ನೆಮ್ಮದಿ ಹಾಗೂ ಸಮೃದ್ದಿ ಪುನಾ ಸ್ಥಾಪನೆಯಾಗಲಿ ಎಂದು ನುಡಿದರು.

ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ: ರಾಯರಿಗೆ ತಿಮ್ಮಪ್ಪನ ಶೇಷವಸ್ತ್ರ ಸಮರ್ಪಣೆ

ಈ ಸಲದ ಆರಾಧನೆ ಸರಳವಾಗಿ ಆಚರಿಸಲಾಗಿದೆ. ಆದರೆ ನವೆಂಬರ್ ನಲ್ಲಿ ಕೊರೊನಾ ಪರಿಸ್ಥಿತಿ ತಿಳಿಯಾದಲ್ಲಿ ಮೂರು ದಿನಗಳ ಕಾಲ ರಾಯರ ಆರಾಧನೆ ಸಂಸ್ಮರಣೋತ್ಸವ ಆಚರಿಸಲು ನಿರ್ಧರಿಸಿದೆ. ಅದೇ ವೇಳೆ ತುಂಗಭದ್ರಾ ಪುಷ್ಕರ(ಕುಂಭಮೇಳ)ವೂ ಬರುವುದರಿಂದ ಅದ್ದೂರಿಯಾಗಿ ಆಚರಿಸುವ ಮೂಲಕ ಈಗ ಆರಾಧನೆಗೆ ಆಗಮಿಸಲು ಆಗದ ಭಕ್ತರಿಗೆ ಅವಕಾಶ ನೀಡಲು ಯೋಜಿಸಲಾಗಿದೆ ಎಂದರು.

ಮಂತ್ರಾಲಯದ ರಾಯರ ಆರಾಧನೆಯ ವೇಳೆಯೇ ಅಯೋಧ್ಯೆ ರಾಮಮಂದಿರಕ್ಕೆ

ಮುಂದಿನ ವರ್ಷ ಶ್ರೀ ರಾಯರ 350 ನೇ ವರ್ಷದ ಆರಾಧನಾ ಮಹೋತ್ಸವ ನಡೆಯಲಿರುವುದರಿಂದ ವರ್ಷವಿಡೀ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದೇ ಆರಾಧನೆಯಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ‌ ಆಯೋಜಿಸ ಲಾಗುವುದು. ಹಾಗೆಯೇ ಶ್ರೀ ರಾಘವೇಂದ್ರಸ್ವಾಮಿಗಳ ಭಕ್ತಿ ರಥಯಾತ್ರೆ ಆಯೋಜಿಸಲೂ ಉದ್ದೇಶಿಸಲಾಗಿದೆ ಎಂದು ಹೇಳಿದರು.

50 ಭಕ್ತರ ಉಪಸ್ಥಿತಿಯಲ್ಲಿ ಮಂತ್ರಾಲಯ ಗುರುರಾಯರ ಆರಾಧನೆ: ಸಪ್ತ ರಾತ್ರೋತ್ಸವಕ್ಕೆ

ಇದಕ್ಕೂ ಮೊದಲು ಶ್ರೀಗಳು ಬೆಳಗ್ಗೆ ರಾಯರಿಗೆ ಹಾಗೂ ಪ್ರಹ್ಲಾದರಾಜರ ಉತ್ಸವ ಮೂರ್ತಿಗೆ ಬಣ್ಣ ಎರಚಿ ಸಂಭ್ರಮಿಸಿ ವಸಂತೋತ್ಸವಕ್ಕೆ ಚಾಲನೆ ನೀಡಿ ಆನಂತರ ಮಹಾರಥೋತ್ಸವ ಪ್ರಾಕಾರದಲ್ಲಿ ನೆರವೇರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ