ಆ್ಯಪ್ನಗರ

ಮತಯಂತ್ರದ ಅಸಮರ್ಪಕ ಮಾಹಿತಿ: ಡಿಸಿ ತರಾಟೆ

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳು ವಿದ್ಯುನ್ಮಾನ ಮತಯಂತ್ರದ ಸಲಕರಣೆ ಮತ್ತು ಸಮಗ್ರ ಮಾಹಿತಿ ನೀಡುವಾಗ ತಡವರಿಸಿದ್ದನ್ನು ಕಂಡು ತರಬೇತಿ ನೀಡುವ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಗಾದಿ ಗೌತಮ್‌ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಜರುಗಿತು.

Vijaya Karnataka 23 Apr 2018, 5:00 am
ಲಿಂಗಸುಗೂರು : ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳು ವಿದ್ಯುನ್ಮಾನ ಮತಯಂತ್ರದ ಸಲಕರಣೆ ಮತ್ತು ಸಮಗ್ರ ಮಾಹಿತಿ ನೀಡುವಾಗ ತಡವರಿಸಿದ್ದನ್ನು ಕಂಡು ತರಬೇತಿ ನೀಡುವ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಗಾದಿ ಗೌತಮ್‌ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಜರುಗಿತು.
Vijaya Karnataka Web RAC-RCH22LNG06


ಅಸಮಾಧಾನ: ಇಲ್ಲಿನ ಸಂಗಮೇಶ್ವರ ಪದವೀ ಪೂರ್ವ ಕಾಲೇಜಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ನೌಕರರಿಗೆ ವಿದ್ಯುನ್ಮಾನ ಮತಯಂತ್ರದ ಕುರಿತ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಭೇಟಿ ನೀಡಿ, ಕರ್ತವ್ಯನಿರತ ನೌಕರರನ್ನು ಮತಯಂತ್ರದ ಕುರಿತು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಸಿಗಲಿಲ್ಲ. ಆಗ ತರಬೇತಿ ನೀಡುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಡಿಸಿದರು.

ಎಚ್ಚರಿಕೆ: ತರಬೇತಿದಾರರು, ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ನಿಯೋಜನೆಗೊಂಡ ನೌಕರರಿಗೆ ಮಾಹಿತಿ ಲಭಿಸದಿದ್ದರೆ ತರಬೇತುದಾರರೇ ಹೊಣೆಗಾರರೆಂದು ಎಚ್ಚರಿಸಿದರು. ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆಯ ಮಾಹಿತಿ ಪುಸ್ತಕ ಆಂಗ್ಲ ಭಾಷೆಯಲ್ಲಿ ಮುದ್ರಿತವಾಗಿದ್ದು, ಎಷ್ಟು ನೌಕರರಿಗೆ ಸಮರ್ಪಕವಾಗಿ ಇಂಗ್ಲಿಷ್‌ ಅರ್ಥವಾಗಲು ಸಾಧ್ಯ. ನೌಕರರಿಗೆ ಕನ್ನಡದಲ್ಲಿ ಮುದ್ರಿಸಿದ ಪ್ರತಿ ನೌಕರರಿಗೆ ನೀಡಿ ಪ್ರಾತ್ಯಕ್ಷಿಕೆ ನೀಡಲು ಗಮನ ಹರಿಸುವಂತೆ ಸೂಚಿಸಿದರು.

ಷರಾ: ನಿಯೋಜಿತ ಅಧಿಕಾರಿ, ಸಿಬ್ಬಂದಿಗಳಿಗೆ ಮೂರು ಬಾರಿ ಪರೀಕ್ಷೆ ನಡೆಸಲಾಗುವುದು. ಎರಡನೇ ಬಾರಿಯೂ ಸರಿಯಾದ ಉತ್ತರ ಸಿಗದಿದ್ದರೆ ಅಂತಹ ನೌಕರರ ಸರ್ವಿಸ್‌ ಪುಸ್ತಕದಲ್ಲಿ ಷರಾ ಬರೆಯಲಾಗುವುದು. ಈ ಬಗ್ಗೆ ಜವಾಬ್ದಾರಿ ಅರಿತು ಚುನಾವಣಾ ಕರ್ತವ್ಯವನ್ನು ಜವಬ್ದಾರಿಯಿಂದ ನಿರ್ವಹಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಸಹಾಯಕ ಆಯುಕ್ತ ಹಾಗೂ ಉಪಚುನಾವಣಾಧಿಕಾರಿ ರೇಣುಕಾಪ್ರಸಾದ, ಕ್ಷೇತ್ರ ಶಿಕ್ಷ ಣಾಧಿಕಾರಿ ಚಂದ್ರಶೇಖರ ಭಂಡಾರಿ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ