ಆ್ಯಪ್ನಗರ

ಬೆಟ್ಟದ ಮಲ್ಲಕಾರ್ಜುನ

ಶ್ರಾವಣಮಾಸದ ಕೊನೆ ಸೋಮವಾರವಾದ ಇಂದು ಎರಡನೇ ಶ್ರೀಶೈಲವೆಂದು ಪ್ರಖ್ಯಾತಿ ಪಡೆದಿರುವ ಪಟ್ಟಣದ ಬೆಟ್ಟದ ಮೇಲಿನ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿಭಕ್ತರು ಆಗಮಿಸಿದ್ದರು.

Vijaya Karnataka 27 Aug 2019, 5:00 am
ಮಸ್ಕಿ: ಶ್ರಾವಣಮಾಸದ ಕೊನೆ ಸೋಮವಾರವಾದ ಇಂದು ಎರಡನೇ ಶ್ರೀಶೈಲವೆಂದು ಪ್ರಖ್ಯಾತಿ ಪಡೆದಿರುವ ಪಟ್ಟಣದ ಬೆಟ್ಟದ ಮೇಲಿನ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿಭಕ್ತರು ಆಗಮಿಸಿದ್ದರು.
Vijaya Karnataka Web mallakarjuna temple
ಬೆಟ್ಟದ ಮಲ್ಲಕಾರ್ಜುನ


ಶ್ರಾವಣ ಮಾಸದ ಕೊನೆಯ ಸೋಮವಾರವಾಗಿದ್ದರಿಂದ ಬೆಟ್ಟದ ಮೇಲೆ ಕಲ್ಲಿನಲ್ಲಿಮೂಡಿರುವ ಮಲ್ಲಿಕಾರ್ಜುನಿಗೆ ಅಭಿಷೇಕ ಸೇರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಅಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಂಜೆ ಬೆಟ್ಟದ ಮೇಲಿಂದ ಮಲ್ಲಿಕಾರ್ಜುನ ಉತ್ಸವ ಮೂರ್ತಿಯನ್ನು ಬೆಟ್ಟದಡಿಯ ಭ್ರಮರಾಂಬ ದೇವಸ್ಥಾನಕ್ಕೆ ನಾನಾ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿತರಲಾಯಿತು. ನಂತರ ಪಟ್ಟಣದ ತೇರು ಬೀದಿಯಲ್ಲಿಮಲ್ಲಿಕಾರ್ಜುನನ ಉಚ್ಛಾಯ ಜರುಗಿತು. ಗಚ್ಚಿನಮಠ ವರರುದ್ರಮುನಿ ಶಿವಾಚಾರ್ಯರ ಸ್ವಾಮೀಜಿ, ಪ್ರತಾಪಗೌಡ ಪಾಟೀಲ್‌, ಆರ್‌.ಬಸನಗೌಡ ತುರ್ವಿಹಾಳ, ಭಕ್ತರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ