ಆ್ಯಪ್ನಗರ

ಮಂತ್ರಾಲಯ: ಇಂದು ಚಾತುರ್ಮಾಸ ದೀಕ್ಷೆ ಸ್ವೀಕಾರ

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಜು.30 ರಂದು ಚಾತುರ್ಮಾಸ ವ್ರತ ದೀಕ್ಷೆ ಸ್ವೀಕರಿಸಲಿದ್ದಾರೆ.

Vijaya Karnataka 30 Jul 2019, 3:27 pm
ರಾಯಚೂರು : ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಜು.30 ರಂದು ಚಾತುರ್ಮಾಸ ವ್ರತ ದೀಕ್ಷೆ ಸ್ವೀಕರಿಸಲಿದ್ದಾರೆ.
Vijaya Karnataka Web mantralaya acceptance of chaturmasa ordination today
ಮಂತ್ರಾಲಯ: ಇಂದು ಚಾತುರ್ಮಾಸ ದೀಕ್ಷೆ ಸ್ವೀಕಾರ


ಬೆಳಗ್ಗೆ 10 ಗಂಟೆಯ ಹೊತ್ತಿಗೆ ಕೊಪ್ಪಳ, ಹೊಸಪೇಟೆ, ಗಂಗಾವತಿಯ ಪ್ರವಾಸ ಮುಗಿಸಿ ಮಂತ್ರಾಲಯಕ್ಕೆ ಆಗಮಿಸುವ ಶ್ರೀಗಳು, ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಲಿದ್ದಾರೆ. ನಂತರ ಅವರು ಸಂಜೆ4ಕ್ಕೆ ತಮ್ಮ ಚಾತುರ್ಮಾಸ ದೀಕ್ಷೆಯನ್ನು ಸ್ವೀಕರಿಸುವ ಧಾರ್ಮಿಕ ವಿಧಾನ ಕೈಗೊಳ್ಳಲಿದ್ದಾರೆ ಎಂದು ಶ್ರೀಮಠ ತಿಳಿಸಿದೆ. ಈ ವೇಳೆ ಮಠದ ಸಿಬ್ಬಂದಿ ಶ್ರೀಗಳಿಗೆ ಗೌರವಿಸಲಿದ್ದಾರೆ. ಜು.30ರಿಂದ ಸೆ.14ರವರೆಗೆ ಶ್ರೀಗಳ ಚಾತುರ್ಮಾಸ ವ್ರತ ನಡೆಯಲಿದ್ದು, ವ್ರತದ ದೀಕ್ಷೆ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಭಕ್ತರಲ್ಲಿ ಶ್ರೀಮಠ ಮನವಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ