ಆ್ಯಪ್ನಗರ

ಕೊಡಗು, ಕೇರಳದ ಸಂತ್ರಸ್ತರಿಗೆ ಮಂತ್ರಾಲಯದ ರಾಯರ ಮಠದಿಂದ ಆರ್ಥಿಕ ನೆರವು

ಭಾರಿ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ ನಲುಗಿರುವ ಕೊಡಗು ಮತ್ತು ಕೇರಳದ ಸಂತ್ರಸ್ತರಿಗೆ ಮಂತ್ರಾಲಯದ ರಾಯರ ಮಠ ನೆರವು ನೀಡಿದೆ. ಕೊಡಗು ಹಾಗೂ ಕೇರಳಕ್ಕೆ ತಲಾ 15 ಲಕ್ಷ ರೂ. ನೆರವು ನೀಡಲು ಮಠ ನಿರ್ಧಾರ ಮಾಡಿದೆ ಎಂದು ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.

Vijaya Karnataka Web 23 Aug 2018, 1:11 pm
ರಾಯಚೂರು: ಭಾರಿ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ ನಲುಗಿರುವ ಕೊಡಗು ಮತ್ತು ಕೇರಳದ ಸಂತ್ರಸ್ತರಿಗೆ ಮಂತ್ರಾಲಯದ ರಾಯರ ಮಠ ನೆರವು ನೀಡಿದೆ. ಕೊಡಗು ಹಾಗೂ ಕೇರಳಕ್ಕೆ ತಲಾ 15 ಲಕ್ಷ ರೂ. ನೆರವು ನೀಡಲು ಮಠ ನಿರ್ಧಾರ ಮಾಡಿದೆ ಎಂದು ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.
Vijaya Karnataka Web kerala floods


ಕೊಡಗು ಮತ್ತು ಕೇರಳದ ಸಂತ್ರಸ್ತರಿಗೆ ಆರಂಭಿಕವಾಗಿ ಈ ಆರ್ಥಿಕ ನೆರವು ನೀಡುತ್ತಿದ್ದು ಚಾತುರ್ಮಾಸ ವ್ರತದ ನಂತರ ಪ್ರವಾಸ ಕೈಗೊಂಡು ಹಾನಿಯ ವರದಿ ಪಡೆದು ಮಠದಿಂದ ಪರಿಹಾರ ಕಾರ್ಯ ಕೈಗೊಳ್ಳುವ ನಿರ್ಧಾರ ಮಾಡುವುದಾಗಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿಕೊಂಡಿದ್ದಾರೆ.

ಜತೆಗೆ, ಈಗಾಗಲೇ ತಜ್ಞರು ಪ್ರವಾಹ ಪೀಡಿತ ಪ್ರದೇಶಕ್ಕೆ ಬೆಂಗಳೂರು ಮತ್ತು ಮೈಸೂರಿನಿಂದ ತೆರಳಿದ್ದು ಪರಿಸ್ಥಿತಿ ಅಧ್ಯಯನ ನಡೆಸಿ ಅವರು ಸಲ್ಲಿಸುವ ವರದಿ ಪಡೆದು ಪರಿಹಾರ ಕಾರ್ಯ ಕೈಗೊಳ್ಳುವುದಾಗಿಯೂ ಶ್ರೀಗಳು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ