ಆ್ಯಪ್ನಗರ

ಕೃಷಿ ವಿವಿ ಎದುರು ಬೃಹತ್‌ ಪ್ರತಿಭಟನೆ

ಕೃಷಿ ಸ್ನಾತಕೋತ್ತರ ಪದವಿ ಶಿಕ್ಷ ಣಕ್ಕೆ ರೈ ಟೆಕ್ನಾಲಜಿ ವಿವಿಯ ಸ್ನಾತಕ ಪದವಿಗಳನ್ನು ನಿರ್ಬಂಧಿಸಿ, ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಕಾಯಿದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜುಗಳನ್ನು ಶಾಶ್ವತವಾಗಿ ರದ್ದುಗೊಳಿಸಲು ಆಗ್ರಹಿಸಿ ಕೃಷಿ ವಿವಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

Vijaya Karnataka 22 Jun 2018, 5:00 am
ರಾಯಚೂರು : ಕೃಷಿ ಸ್ನಾತಕೋತ್ತರ ಪದವಿ ಶಿಕ್ಷ ಣಕ್ಕೆ ರೈ ಟೆಕ್ನಾಲಜಿ ವಿವಿಯ ಸ್ನಾತಕ ಪದವಿಗಳನ್ನು ನಿರ್ಬಂಧಿಸಿ, ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಕಾಯಿದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜುಗಳನ್ನು ಶಾಶ್ವತವಾಗಿ ರದ್ದುಗೊಳಿಸಲು ಆಗ್ರಹಿಸಿ ಕೃಷಿ ವಿವಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web RAC-RCH21HD02


ರಾಜ್ಯದಲ್ಲಿ ಕೃಷಿ ವಿವಿಗಳ ಕಾಯಿದೆಗೆ 2010ರಲ್ಲಿ ತಿದ್ದುಪಡಿ ತಂದು ಮೊದಲ ಬಾರಿಗೆ ಖಾಸಗಿ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಯಿತು. ಖಾಸಗಿ ಕಾಲೇಜುಗಳು ಶಿಕ್ಷ ಣ, ಸಂಶೋಧನೆ ಮತ್ತು ವಿಸ್ತರಣೆಯ ವಿಭಾಗದಲ್ಲಿ ಹಲವು ನ್ಯೂನತೆ ಹೊಂದಿವೆ. ಖಾಸಗಿ ಕಾಲೇಜುಗಳು ನಿರುದ್ಯೋಗ ಉಂಟು ಮಾಡುವುದಲ್ಲದೇ ಗುಣಮಟ್ಟದ ಶಿಕ್ಷ ಣ ನೀಡದೇ ವಿದ್ಯಾರ್ಥಿಗಳ ಜೀವನ ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಗುಣಮಟ್ಟದ ಶಿಕ್ಷ ಣದ ಕೊರತೆ ಜತೆಗೆ ಐಸಿಎಆರ್‌ 5ನೇ ಡೀನ್ಸ್‌ ಸಮಿತಿಯ ಶಾಸನಗಳನ್ನು ಪಾಲಿಸುವುದಿಲ್ಲ. ಕರ್ನಾಟಕ ಕೃಷಿ ವಿವಿಗಳ 1963 ಕಾಯಿದೆ ಪಾಲಿಸುತ್ತಿಲ್ಲ. ಕೃಷಿ ವಿಶ್ವವಿದ್ಯಾಲಯಗಳ ಪರೀಕ್ಷಾ ನೀತಿ ಅಳವಡಿಸಿಕೊಳ್ಳುವುದಿಲ್ಲ. ಖಾಸಗಿ ಕೃಷಿ ಪದವಿಗಳನ್ನು ಕೃಷಿ ಇಲಾಖೆ ನೌಕರರಿಗೆ ಪರಿಗಣಿಸುವುದಿಲ್ಲ. ಹೀಗಾಗಿ ಸರಕಾರಿ ಖಾಸಗಿ ಕಾಲೇಜುಗಳಿಗೆ ಅಫಿಲಿಯಾಷನ್‌ ನೀಡಿ ಪದವಿಯ ಗುಣಮಟ್ಟ ಹಾಳು ಮಾಡುವುದು ಬೇಡ. ನಿರುದ್ಯೋಗ ಮತ್ತು ಶಿಕ್ಷ ಣ ಗುಣಮಟ್ಟದ ದೃಷ್ಟಿ ಆಧರಿಸಿ ರಾಜ್ಯದಲ್ಲಿ ಆರಂಭವಾಗಿರುವ ಖಾಸಗಿ ಕೃಷಿ ಕಾಲೇಜುಗಳಿಗೆ ಅಫಿಲಿಯೇಷನ್‌ ನೀಡಬಾರದು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಾದ ವೀರೇಶ, ಪ್ರವೀಣ್‌ಕೋಟಿ, ಅಂಬನಗೌಡ ದುರ್ಗದ್‌, ವಿನಯ್‌ಕುಮಾರ, ಪ್ರಶಾಂತ್‌, ಸೌಂದಯ್ಯ, ಶ್ರೀಲೇಖಾ, ಮೊಹ್ಮದ್‌ ಇಸಾಕ್‌, ಮಲ್ಲಿಕೇಶ್‌, ಜಾನಪ್ಪ, ವಿಜಯಕುಮಾರ, ವಿಶ್ವನಾಥ್‌, ವಿಷ್ಣುವರ್ಧನ್‌ ಸೇರಿದಂತೆ ಅನೇಕರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ