ಆ್ಯಪ್ನಗರ

ಆರ್‌ಟಿಪಿಎಸ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಬೇಡಿಕೆ ಈಡೇರಿಸಿ

ಆರ್‌ಟಿಪಿಎಸ್‌ ಘಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ವೇತನ ಹಾಗೂ ಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ಆರ್‌ಟಿಪಿಎಸ್‌ 1999ರ ಅನುಷ್ಠಾನ ಸಮಿತಿ ಗುತ್ತಿಗೆ ಕಾರ್ಮಿಕರ ಸಂಘ ಒತ್ತಾಯಿಸಿದೆ.

Vijaya Karnataka 22 Jul 2019, 2:16 pm
ರಾಯಚೂರು : ಆರ್‌ಟಿಪಿಎಸ್‌ ಘಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ವೇತನ ಹಾಗೂ ಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ಆರ್‌ಟಿಪಿಎಸ್‌ 1999ರ ಅನುಷ್ಠಾನ ಸಮಿತಿ ಗುತ್ತಿಗೆ ಕಾರ್ಮಿಕರ ಸಂಘ ಒತ್ತಾಯಿಸಿದೆ.
Vijaya Karnataka Web meet the demand of workers working in rtps
ಆರ್‌ಟಿಪಿಎಸ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಬೇಡಿಕೆ ಈಡೇರಿಸಿ


ಈ ಕುರಿತು ಪ್ರಕಟಣೆ ನೀಡಿ, ಕೆಪಿಸಿ ನಿಗಮ ಇದೀಗ 50ವರ್ಷ ಪೂರೈಸಿರುವುದು ಹೆಮ್ಮೆಯ ವಿಷಯ. ಆದರೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡದಿರುವುದು ಖಂಡನೀಯ. ರಾಜ್ಯದ ಉಷ್ಣ ವಿದ್ಯುತ್‌ ಉತ್ಪಾದನೆಯಲ್ಲಿ ಶೇ.40ರಷ್ಟು ಆರ್‌ಟಿಪಿಎಸ್‌ ಉತ್ಪಾದಿಸುತ್ತಿದೆ. ಆರ್‌ಟಿಪಿಎಸ್‌ನ 8 ಘಟಕಗಳಿಂದ ಒಟ್ಟು 1720ಮೆ.ವ್ಯಾ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ವೈಟಿಪಿಎಸ್‌ 2 ಘಟಕದಿಂದ 1600ಮೆ.ವ್ಯಾ ವಿದ್ಯುತ್‌ ಉತ್ಪಾದನೆಗೆ ಸಿದ್ಧವಿದೆ. ಹೀಗಾಗಿ ಎರಡೂ ಸೇರಿ 3320ಮೆ.ವ್ಯಾ ವಿದ್ಯುತ್‌ ಉತ್ಪಾದಿಸುತ್ತದೆ. ಆದರೆ ಆರ್‌ಟಿಪಿಎಸ್‌ನಲ್ಲಿ ದುಡಿಯುತ್ತಿರುವ ಬದುಕು ಬೆಳಕಾಗುತ್ತಿಲ್ಲ ಎಂದಿದೆ.

ಪಾವತಿಸಿ: ಆದ್ದರಿಂದ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೂಚ್ಯಂಕ ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಮೂಲವೇತನಕ್ಕೆ ತಲಾ 1ವರ್ಷಕ್ಕೆ ಶೇ.25ರಂತೆ 2ವರ್ಷಕ್ಕೆ ವೇತನ ಹೆಚ್ಚಿಸಬೇಕು. ಕಾರ್ಮಿಕರ ಮೇಲೆ ಒತ್ತಡ ಹೇರುತ್ತಿರುವುದನ್ನು ಬಿಡಬೇಕು. ಬೋನಸ್‌ ಪಾವತಿ ಕಾಯ್ದೆ ಪ್ರಕಾರ ಪ್ರತಿಯೊಬ್ಬ ಗುತ್ತಿಗೆ ಅಥವಾ ದಿನಗೂಲಿ ಕಾರ್ಮಿಕರು ಬೋನಸ್‌ ಪಾವತಿಗೆ ಅರ್ಹರಾಗಿರುತ್ತಾರೆ. ಪ್ರತಿಯೊಬ್ಬ ಕಾರ್ಮಿಕರಿಗೆ ವಾರ್ಷಿಕ ಬೋನಸ್‌ ಶೇ.20ರಷ್ಟು ಪಾವತಿಸಬೇಕು ಎಂದು ಒತ್ತಾಯಿಸಿದೆ.

ಒದಗಿಸಿ: ಕಾರ್ಮಿಕರಿಗೆ ವಸತಿ ಸೌಕರ್ಯ ಒದಗಿಸಬೇಕು. ಒಂದುವೇಳೆ ನೀಡದಿದ್ದಲ್ಲಿ ವೇತನದ ಗರಿಷ್ಠ 10ರಷ್ಟು ಮನೆ ಬಾಡಿಗೆ ಭತ್ಯೆ ಎಂದು ಪಾವತಿಸಬೇಕು. ಕಾಯಂ ನೌಕರರಿಗೆ ಅನ್ವಯಿಸುವ ಪಾಳಿ ಪದ್ಧತಿಯನ್ನು ಗುತ್ತಿಗೆ ಕಾರ್ಮಿಕರಿಗೆ ಅನ್ವಯಿಸಬೇಕು. ವಿದ್ಯುತ್‌ ಉತ್ಪಾದನೆ ಕಾರ್ಯದಲ್ಲಿ ತೊಡಗುವ ಕಾರ್ಮಿಕರಿಗೆ ಕೆಲಸಕ್ಕೆ ತಕ್ಕಂತೆ ಪಿಪಿ ಮತ್ತು ಟೂಲ್‌ಕಿಟ್‌ ಕಡ್ಡಾಯವಾಗಿ ಒದಗಿಸಬೇಕು. ಸುರಕ್ಷ ತೆಗಾಗಿ ಗುಣಮಟ್ಟದ ಐಎಸ್‌ಐ ಮಾರ್ಕ್‌ವುಳ್ಳ ಬೂಟು ಮತ್ತು ಹೆಲ್ಮೆಟ್‌ ಒದಗಿಸಬೇಕು ಎಂದು ಆಗ್ರಹಿಸಿದೆ.

ಎಚ್ಚರಿಕೆ: ಕಾರ್ಮಿಕ ಕೆಲಸದ ವೇಳೆಯಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 5ಲಕ್ಷ ಪರಿಹಾರಧನ ಒದಗಿಸಬೇಕು. ಕಾರ್ಮಿಕರಿಗೆ ಮೂಲಸೌಲಭ್ಯಗಳನ್ನು ಕಂಪನಿಯಿಂದ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ಬೇಡಿಕೆಗಳನ್ನು ಮುಂದಿನ 40ದಿನಗಳಲ್ಲಿ ಈಡೇರಿಸಬೇಕು. ಒಂದುವೇಳೆ ಈಡೇರಿಸದಿದ್ದಲ್ಲಿ, ಹಂತ ಹಂತವಾಗಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಸಂಘದ ಪದಾಧಿಕಾರಿಗಳಾದ ಸುರೇಶಗೌಡ, ಪ್ರಭುಲಿಂಗಸ್ವಾಮಿ, ಶ್ರೀನಿವಾಸ, ಹೆಚ್‌.ಶರಣಗೌಡ, ಶಕೀಲ್‌ ಅನ್ಸಾರಿ ಪ್ರಕಟಣೆ ನೀಡಿ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ