ಆ್ಯಪ್ನಗರ

ಸಿಎಂ ಭೇಟಿಗೂ ಮುನ್ನವೇ ಶಾಸಕ ಶಿವನಗೌಡ ನಾಯಕ್‌ ಪಾದಯಾತ್ರೆಗೆ ದಿಗ್ಬಂಧನ

ಗೂಗಲ್‌ನಿಂದ ಕರೇಗುಡ್ಡಕ್ಕೆ ದೇವದುರ್ಗ ಶಾಸಕ ಶಿವನಗೌಡ ನಾಯಕ್‌ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಭೇಟಿಗೂ ಮುನ್ನವೇ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಪೊಲೀಸರು, ಬುಧವಾರ ದಿಗ್ಬಂಧನ ಹಾಕಿದರು.

Vijaya Karnataka 27 Jun 2019, 5:00 am
ಸಿರವಾರ (ರಾಯಚೂರು) : ಗೂಗಲ್‌ನಿಂದ ಕರೇಗುಡ್ಡಕ್ಕೆ ದೇವದುರ್ಗ ಶಾಸಕ ಶಿವನಗೌಡ ನಾಯಕ್‌ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಭೇಟಿಗೂ ಮುನ್ನವೇ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಪೊಲೀಸರು, ಬುಧವಾರ ದಿಗ್ಬಂಧನ ಹಾಕಿದರು.
Vijaya Karnataka Web RAC-RCH26SWR03


ಮೂರು ದಿನಗಳ ಹಿಂದೆ ಆರಂಭವಾಗಿದ್ದ ಪಾದಯಾತ್ರೆ, ಬಲ್ಲಟಗಿ ತಲುಪಿತು. ಅಲ್ಲಿಂದ ಕರೇಗುಡ್ಡ ಗ್ರಾಮಕ್ಕೆ ತೆರಳಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ, ಸಿಎಂಗೆ ಮನವಿ ಪತ್ರ ಕೊಡಲು ಶಾಸಕ ಕೆ.ಶಿವನಗೌಡ ನಾಯಕ್‌ ನಿರ್ಧರಿಸಿದ್ದರು. ಆದರೆ, ಪಾದಯಾತ್ರೆ ಬಲ್ಲಟಗಿಯಿಂದ ತೆರಳದಂತೆ ಐದು ನೂರಕ್ಕೂ ಹೆಚ್ಚು ಪೊಲೀಸ್‌ ಕಾವಲಿನಲ್ಲಿ ದಿಗ್ಬಂಧನ ಹಾಕಲಾಯಿತು. ಪೊಲೀಸರ ಸರ್ಪಗಾವಲಿನ ಮಧ್ಯೆ ಪಾದಯಾತ್ರೆಯಲ್ಲಿ ಬಾಗವಹಿಸಿದ ನಾಯಕರನ್ನು ಸಿರವಾರ ಠಾಣೆಗೆ ಕರೆದುಕೊಂಡು ಬಂದು ಕೆಲವು ತಾಸುಗಳ ನಂತರ ಬಿಡುಗಡೆಗೊಳಿಸಲಾಯಿತು.

ಬಿಜೆಪಿ ಮುಖಂಡರಾದ ಬಸನಗೌಡ ಬ್ಯಾಗವಾಟ್‌, ಗಂಗಾಧರ ನಾಯಕ್‌, ಎನ್‌.ಶಂಕ್ರಪ್ಪ,ಶರಣಪ್ಪ ಗೌಡ, ದೇವರಾಜ ಗೌಡ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಚಿಂಚರಕಿ ರಮೇಶ ಹಾಗೂ ಹಲವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ