ಆ್ಯಪ್ನಗರ

ಪುರಸಭೆ ವೆಬ್‌ಪುಟ: ಗೊಂದಲದ ಮಾಹಿತಿ

ಸ್ಥಳೀಯ ಪುರಸಭೆ ಅಧಿಕಾರಿಗಳು ವೆಬ್‌ಪುಟ ಅಪ್‌ಡೇಟ್‌ ಮಾಡುವ ಗೋಜಿಗೆ ಹೋಗದ ಪರಿಣಾಮ ಸಾರ್ವಜನಿಕರು ಮಾಹಿತಿಗೆ ಪರದಾಡುವಂತಾಗಿದೆ.

Vijaya Karnataka Web 12 Apr 2018, 5:00 am
ಮಾನ್ವಿ ; ಸ್ಥಳೀಯ ಪುರಸಭೆ ಅಧಿಕಾರಿಗಳು ವೆಬ್‌ಪುಟ ಅಪ್‌ಡೇಟ್‌ ಮಾಡುವ ಗೋಜಿಗೆ ಹೋಗದ ಪರಿಣಾಮ ಸಾರ್ವಜನಿಕರು ಮಾಹಿತಿಗೆ ಪರದಾಡುವಂತಾಗಿದೆ.
Vijaya Karnataka Web RAC-RCH10MNV2


ಪುರಸಭೆ ವೆಬ್‌ಪೇಜ್‌ನಲ್ಲಿ ಇಂಗ್ಲಿಷ್‌ಗೆ ನೀಡಿದ ಆದ್ಯತೆ ಕನ್ನಡಕ್ಕೆ ನೀಡಿಲ್ಲ ಎಂಬುವುದಕ್ಕೆ ಇಬ್ಬರು ಮುಖ್ಯಾಧಿಕಾರಿಗಳ ಹೆಸರು ಸೂಚಿಸಿರುವುದೇ ಸಾಕ್ಷಿ. ಇಂಗ್ಲಿಷ್‌ ಪೇಜ್‌ನಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಎಂದಿದ್ದರೆ. ಅದೇ ಕನ್ನಡ ಪೇಜ್‌ನಲ್ಲಿ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಎಂದಿದೆ. ವೆಂಕಟೇಶ ಅವರು ಕೆಲವು ದಿನಗಳ ಹಿಂದೆಯೇ ಕಂಪ್ಲಿಗೆ ವರ್ಗಾವಣೆಯಾಗಿದ್ದರೂ ಕನ್ನಡ ಪೇಜ್‌ನಲ್ಲಿನ ಅವರ ಹೆಸರನ್ನು ತೆಗೆದು ಹಾಕಿಲ್ಲ. ಪುರಸಭೆ ತಪ್ಪು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುತ್ತಿದೆ. ಅಲ್ಲದೇ ಕನ್ನಡ ಪೇಜ್‌ನಲ್ಲಿ ಸಿಬ್ಬಂದಿಯ ಮಾಹಿತಿ ಸ್ಪಷ್ಟವಾಗಿಲ್ಲ. ಖಾಲಿ ಸಿಬ್ಬಂದಿಯ ಭಾವಚಿತ್ರಗಳು ಮಾತ್ರ ಕಾಣಿಸಿಗುತ್ತವೆ. ಇಂಗ್ಲಿಷ್‌ ಪೇಜ್‌ಗೆ ಕೊಟ್ಟ ಒತ್ತನ್ನು ಕನ್ನಡ ಪೇಜ್‌ಗೆ ನೀಡದೇ ನಿರ್ಲಕ್ಷಿಸಿರುವುದು ಎಷ್ಟು ಸರಿ ಎಂದು ನಾಗರಿಕರು ಪ್ರಶ್ನಿಸುತ್ತಾರೆ.

ಪೇಜ್‌ ನಾಟ್‌ ಫೌಂಡ್‌: ಪುರಸಭೆ ವೆಬ್‌ಪುಟಲ್ಲಿ ಕ್ರಿಯಾ ಯೋಜನೆ, ಬ್ಯಾಲೆನ್ಸ್‌ ಶೀಟ್‌, ಪೂರ್ಣಗೊಂಡ ಕಾಮಗಾರಿ, ಚಾಲ್ತಿಯಲ್ಲಿರುವ ಕಾಮಗಾರಿ, ಸಭೆ ಮತ್ತು ವಿಚಾರಣೆ, ಅನುದಾನದ ಮಾರ್ಗಸೂಚಿ, ಯೋಜನೆಗಳ ಕುರಿತು ವೆಬ್‌ಪುಟದಲ್ಲಿ ಸರ್ಚ್‌ ಮಾಡಿದರೆ ಪೇಜ್‌ ನಾಟ್‌ ಫೌಂಡ್‌ ಎಂದು ತೋರಿಸುತ್ತಿದ್ದು, ಕಾಟಾಚಾರ ವೆಬ್‌ಪುಟ ನಿರ್ವಹಣೆ ಮಾಡಲಾಗಿದೆ.

ಸ್ಥಾಯಿ ಸಮಿತಿ: ಸ್ಥಾಯಿ ಸಮಿತಿ ಅಧ್ಯಕ್ಷ ರ ಅಧಿಕಾರಾವಧಿ ಪೂರ್ಣಗೊಂಡಿದೆ. ಆದರೆ ವೆಬ್‌ಪೇಜ್‌ನಲ್ಲಿ ಮಲ್ಲಿಕಾರ್ಜುನ ಜಾನೇಕಲ್‌ ಸ್ಥಾಯಿ ಸಮಿತಿ ಅಧ್ಯಕ್ಷ ರು ಎಂದು ನಮೂದಿಸಲಾಗಿದೆ.ಅದರ ಕೆಳಗೆ ಸದಸ್ಯರಾದ ಸಾಬೀರ್‌ ಹುಸೇನ್‌, ಸಬ್ಜಲಿ, ಚಂದ್ರಶೇಖರ್‌, ಮಲ್ಲಿಕಾರ್ಜುನ.ವಿ.ಟಿ, ಶಕೀಲ್‌ ಬೇಗ್‌ ಅವರ ಹೆಸರು ಇವೆ.

ಘಟನಾವಳಿಗಳ ಮಾಹಿತಿ: ಪುರಸಭೆಯಲ್ಲಿ ನಡೆಯುವ ಸಾಮಾನ್ಯ ಸಭೆ, ಆರೋಗ್ಯ ಶಿಬಿರದ ಬಗ್ಗೆ ಸಂಬಂಧಿಸಿದ ಮಾಹಿತಿ ಮತ್ತು ಭಾವಚಿತ್ರಗಳು ಪುರಸಭೆ ವೆಬ್‌ಪೇಜ್‌ನಲ್ಲಿ ಸಿಗುವುದಿಲ್ಲ. ತಂತ್ರಜ್ಞಾನ ಇಷ್ಟೆಲ್ಲ ಮುಂದುವರಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಡಿಜಿಟಲ್‌ ಮಾಧ್ಯಮಕ್ಕೆ ಹಿನ್ನಡೆಯಾಗಿದೆ ಎಂದು ನಾಗರಿಕರು ಹೇಳುತ್ತಾರೆ.

===

ಪುರಸಭೆ ವೆಬ್‌ಪೇಜ್‌ನಲ್ಲಿ ಇಂಗ್ಲಿಷ್‌ ಪೇಜ್‌ಗೆ ಕೊಟ್ಟಷ್ಟು ಒತ್ತು ಕನ್ನಡ ಪೇಜ್‌ಗೂ ಕೊಡಬೇಕು. ವೆಬ್‌ಪೇಜ್‌ನಲ್ಲಿ ಕಾಲ ಕಾಲಕ್ಕೆ ಮಾಹಿತಿ ಅಪ್‌ಡೇಟ್‌ ಮಾಡಬೇಕು.

-ಚಿದಾನಂದ, ನಾಗರಿಕರು, ಮಾನ್ವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ