ಆ್ಯಪ್ನಗರ

ನರೇಗಾ ಕೂಲಿಕಾರರಿಂದ ಧರಣಿ

ತಾಲೂಕಿನ ನಾನಾ ಗ್ರಾಮಗಳಲ್ಲಿ ನರೇಗಾದಡಿ ಕೆಲಸಮಾಡಿ ವರ್ಷ ಕಳೆದರೂ ಕೂಲಿ ಹಣ ನೀಡದ ಅಧಿಕಾರಿಗಳ ಕ್ರಮವನ್ನು ಖಂಡಿಸಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನೂರಾರು ಕೂಲಿಕಾರ್ಮಿಕರು, ತಾ.ಪಂ. ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

Vijaya Karnataka 8 Dec 2018, 5:00 am
ಲಿಂಗಸುಗೂರು : ತಾಲೂಕಿನ ನಾನಾ ಗ್ರಾಮಗಳಲ್ಲಿ ನರೇಗಾದಡಿ ಕೆಲಸಮಾಡಿ ವರ್ಷ ಕಳೆದರೂ ಕೂಲಿ ಹಣ ನೀಡದ ಅಧಿಕಾರಿಗಳ ಕ್ರಮವನ್ನು ಖಂಡಿಸಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನೂರಾರು ಕೂಲಿಕಾರ್ಮಿಕರು, ತಾ.ಪಂ. ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
Vijaya Karnataka Web narega labor protest
ನರೇಗಾ ಕೂಲಿಕಾರರಿಂದ ಧರಣಿ


ತಾಲೂಕಿನ ತಿಮ್ಮಾಪುರ, ಸಜ್ಜಲಗುಡ್ಡ, ಬಯ್ಯಾಪುರ, ಕೂಮುನೂರು, ಆಮದಿಹಾಳ, ಹೊನ್ನಳ್ಳಿ, ಅಂಕುಶದೊಡ್ಡಿ, ಬನ್ನಿಗೋಳ ಸೇರಿ ಇತರ ಗ್ರಾಮಗಳಲ್ಲಿ ನರೇಗಾದಡಿ ನಾನಾ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಆದರೆ, ಕೆಲಸಮಾಡಿ ವರ್ಷ ಕಳೆಯುತ್ತಿದ್ದರೂ ಕಾರ್ಮಿಕರ ಖಾತೆಗೆ ಕೂಲಿಯ ಹಣ ಜಮಾ ಮಾಡಿಲ್ಲ. ಹೊಸ ಕೆಲಸಕ್ಕೆ ಅರ್ಜಿಸಿ ತಿಂಗಳಾದರೂ ಕೂಲಿಕಾರರಿಗೆ ಇನ್ನೂ ಕೆಲಸ ನೀಡಿಲ್ಲ. ಇದಕ್ಕೆ ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಎಂದು ನೆಪ ಹೇಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ, ಕೂಲಿಕಾರರ ಖಾತೆಗೆ ಹಣ ಜಮಾ ಮಾಡಬೇಕು. ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ನೀಡುವಂತೆ ಆಗ್ರಹಿಸಿದರು.

ಗ್ರಾಕೋಸ್‌ ಅಧ್ಯಕ್ಷ ಅಮರೇಗೌಡ, ಗುಂಡಪ್ಪ, ಹನುಮಮ್ಮ ವೀರಾಪುರ, ಲಕ್ಷ ್ಮಮ್ಮ ಬಯ್ಯಾಪುರ, ಶಾಂತಮ್ಮ ಯರಗುಂಟಿ, ಬಸವರಾಜ ಮುದಗಲ್‌, ಮಂಜುನಾಥ ಹೊನ್ನಳ್ಳಿ, ದುರುಗಮ್ಮ, ಸುಜಾತಾ ನಾಗಲಾಪುರ, ಕಲ್ಯಾಣಮ್ಮ ಈಚನಾಳ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ