ಆ್ಯಪ್ನಗರ

ಬೈಕ್‌ ರಾರ‍ಯಲಿ, ಮೋದಿ ಪರ ಘೋಷಣೆ

ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಮತ್ತೊಮ್ಮೆ ಜಯಭೇರಿ ಬಾರಿಸಿದ್ದರಿಂದ ಹರ್ಷಗೊಂಡ ಪಕ್ಷ ದ ಕಾರ್ಯಕರ್ತರು ಗುರುವಾರ ನಗರದ ಗಾಂಧಿವೃತ್ತದಲ್ಲಿ ಪರಸ್ಪರ ಗುಲಾಲ್‌ ಎರಚಿಕೊಂಡು ಸಂಭ್ರಮಿಸಿದರು.

Vijaya Karnataka 24 May 2019, 5:00 am
ಸಿಂಧನೂರು : ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಮತ್ತೊಮ್ಮೆ ಜಯಭೇರಿ ಬಾರಿಸಿದ್ದರಿಂದ ಹರ್ಷಗೊಂಡ ಪಕ್ಷ ದ ಕಾರ್ಯಕರ್ತರು ಗುರುವಾರ ನಗರದ ಗಾಂಧಿವೃತ್ತದಲ್ಲಿ ಪರಸ್ಪರ ಗುಲಾಲ್‌ ಎರಚಿಕೊಂಡು ಸಂಭ್ರಮಿಸಿದರು.
Vijaya Karnataka Web narendra modis announcement on bike race
ಬೈಕ್‌ ರಾರ‍ಯಲಿ, ಮೋದಿ ಪರ ಘೋಷಣೆ


ಬಿಜೆಪಿ ಧ್ವಜ ಹಿಡಿದು ಪ್ರಮುಖ ರಸ್ತೆಗಳಲ್ಲಿ ಬೈಕ್‌ ರಾರ‍ಯಲಿ ನಡೆಸಿದರು. ನಂತರ ಪ್ರಧಾನಿ ಮೋದಿ ಪರ ಘೋಷಣೆ ಕೂಗಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಸೋತಿದ್ದರಿಂದ, ನಿಖಿಲ್‌ ಹೋದ್ಯಲ್ಲಪ್ಪಾ ಎಂದು ಬಿಜೆಪಿಯವರು ಘೋಷಣೆ ಕೂಗಿ ಲೇವಡಿ ಮಾಡಿದರು.

ನಗರದ ಗಾಂಧಿವೃತ್ತದಲ್ಲಿ ಪಟಾಕಿ ಸಿಡಿಸಿದ್ದರಿಂದ, ಪಟಾಕಿಯ ಹಾಳೆಗಳು ರಸ್ತೆಯಲ್ಲಿ ಹರಡಿಕೊಂಡಿದ್ದವು. ಇದನ್ನು ಗಮನಿಸಿದ ಬಿಜೆಪಿ ಪ್ರಮುಖರು ಕಸಬರಗಿ ಹಿಡಿದು, ಸ್ವಚ್ಛಗೊಳಿಸಿದರು. ಯುವಕರು ಸಹ ಸಾಥ್‌ ನೀಡಿದರು.

ಬಿಜೆಪಿ ಮುಖಂಡರಾದ ಎನ್‌.ಕೃಷ್ಣಮೂರ್ತಿ, ಹನುಮೇಶ ವಾಲೇಕಾರ, ಪ್ರವೀಣ ಜೈನ್‌, ನಾಗರಾಜ, ಪ್ರಶಾಂತ, ಆನಂದ ಗೋರ್ಕರ್‌, ಮಂಜುನಾಥ ಹರಸೂರು, ಪ್ರಹ್ಲಾದ್‌ ಕೆಂಗಲ್‌, ಸಿದ್ದು ಹೂಗಾರ, ಬಸವರಾಜ ಗಸ್ತಿ, ಲಕ್ಷ್ಮೀ ಪತ್ತಾರ ಸೇರಿ ಹಲವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ