ಆ್ಯಪ್ನಗರ

ಹದಗೆಟ್ಟ ರಸ್ತೆ ಸರಿಪಡಿಸಿ ಬಸ್‌ ಓಡಿಸಲು ಆಗ್ರಹ

ತಾಲೂಕಿನ ಬಿಜನಗೇರ, ರಾಜಲಬಂಡ, ಹೌಜಾಪುರ, ಮಾಸದೊಡ್ಡಿ, ಜುಲಮಗೇರ, ಲಿಂಗಖಾನದೊಡ್ಡಿ ಗ್ರಾಮಗಳಲ್ಲಿ ಹದಗೆಟ್ಟ ರಸ್ತೆ ಸರಿಪಡಿಸಿ ಸಾರಿಗೆ ಸೌಲಭ್ಯ ಒದಗಿಸಬೇಕೆಂದು ಗ್ರಾಮಗಳ ವಿದ್ಯಾರ್ಥಿಗಳು, ಡಿಸಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟಿಸಿದರು.

Vijaya Karnataka 15 Sep 2018, 5:00 am
ರಾಯಚೂರು : ತಾಲೂಕಿನ ಬಿಜನಗೇರ, ರಾಜಲಬಂಡ, ಹೌಜಾಪುರ, ಮಾಸದೊಡ್ಡಿ, ಜುಲಮಗೇರ, ಲಿಂಗಖಾನದೊಡ್ಡಿ ಗ್ರಾಮಗಳಲ್ಲಿ ಹದಗೆಟ್ಟ ರಸ್ತೆ ಸರಿಪಡಿಸಿ ಸಾರಿಗೆ ಸೌಲಭ್ಯ ಒದಗಿಸಬೇಕೆಂದು ಗ್ರಾಮಗಳ ವಿದ್ಯಾರ್ಥಿಗಳು, ಡಿಸಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟಿಸಿದರು.
Vijaya Karnataka Web RAC-RCH14HD03


ನಂತರ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಬಿಜನಗೇರದಿಂದ ಲಿಂಗಖಾನದೊಡ್ಡಿಯವರೆಗೆ ಬರುವ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಿತ್ತುಹೋಗಿದೆ. ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಲಿಂಗಖಾನದೊಡ್ಡಿಯಿಂದ ರಾಯಚೂರಿಗೆ ವಾಪಸ್‌ ಆಗುತ್ತಿವೆ. ಇದರಿಂದ ಬಿಜನಗೇರ, ರಾಜಲಬಂಡ, ಹೌಜಾಪುರ, ಮಾಸದೊಡ್ಡಿ, ಜುಲಮಗೇರದಿಂದ ರಾಯಚೂರಿಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.

ಕೆಎಸ್‌ಆರ್‌ಟಿಸಿ ಡಿಸಿ ಅವರನ್ನು ಸಂಪರ್ಕಿಸಿದಾಗ ರಸ್ತೆ ಸಂಪೂರ್ಣ ಹಾಳಾದ ಕಾರಣ ಬಸ್‌ ಓಡಿಸುತ್ತಿಲ್ಲ. ರಸ್ತೆ ದುರಸ್ತಿಯಾದರೆ ಬಸ್‌ ಓಡಿಸುತ್ತೇವೆಂದು ಹೇಳಿದ್ದಾರೆ. ವಿವಿಧ ಗ್ರಾಮಗಳಿಂದ ಒಟ್ಟು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ರಾಯಚೂರಿನ ಶಾಲಾ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಸಾರ್ವಜನಿಕರೂ ತಮ್ಮ ವ್ಯಾಪಾರ, ವಹಿವಾಟಿಗೆ ಆಗಮಿಸಲು ಬಸ್‌ ಇಲ್ಲದೇ ತೊಂದರೆ ಎದುರಿಸುವಂತಾಗಿದೆ.

300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಇದ್ದರೂ ಇಲ್ಲದಂತಾಗಿದೆ. ಬಸ್‌ ಪಾಸ್‌ ಹಣ ವ್ಯರ್ಥವಾದಂತಾಗಿದೆ. ಮೊದಲು ರಸ್ತೆ ಸರಿಪಡಿಸಬೇಕು. ಅನಂತರ ಬಸ್‌ ಓಡಿಸಲು ಜಿಲ್ಲಾಡಳಿತ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಯುವರಾಜ, ತಿಮ್ಮಪ್ಪ, ಹುಸೇನಿ, ಹುಲಿಗಪ್ಪ, ರಾಜೇಶ್‌, ತಾರೇಶ್‌, ಈರೇಶ, ಕರ್ಣ, ಪರಶುರಾಮ, ವೆಂಕಟಗಿರಿ, ವಿನೋದ, ರಂಗಸ್ವಾಮಿ, ಮಂಜುನಾಥ ಸೇರಿ ಹಲವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ