ಆ್ಯಪ್ನಗರ

'ಹೊಸ ಸಂಬಳ ಒಪ್ಪಂದ ಒಪ್ಪುವುದಿಲ್ಲ'

ಗಣಿ ಕಂಪನಿಯ ಕಾರ್ಮಿಕರಿಗೆ ಅನ್ಯಾಯವಾಗುವ ಹೊಸ ಸಂಬಳ ಒಪ್ಪಂದವನ್ನು ಎಐಟಿಯುಸಿ ಕಾರ್ಮಿಕ ಸಂಘಟನೆ ಒಪ್ಪುವುದಿಲ್ಲವೆಂದು ಸಂಘಟನೆಯ ಜಿಲ್ಲಾಅಧ್ಯಕ್ಷ ಎಸ್‌.ಎಂ.ಶಫಿ ಹೇಳಿದರು.

Vijaya Karnataka 10 Jan 2020, 2:53 pm
ಹಟ್ಟಿಚಿನ್ನದಗಣಿ: ಗಣಿ ಕಂಪನಿಯ ಕಾರ್ಮಿಕರಿಗೆ ಅನ್ಯಾಯವಾಗುವ ಹೊಸ ಸಂಬಳ ಒಪ್ಪಂದವನ್ನು ಎಐಟಿಯುಸಿ ಕಾರ್ಮಿಕ ಸಂಘಟನೆ ಒಪ್ಪುವುದಿಲ್ಲವೆಂದು ಸಂಘಟನೆಯ ಜಿಲ್ಲಾಅಧ್ಯಕ್ಷ ಎಸ್‌.ಎಂ.ಶಫಿ ಹೇಳಿದರು.
Vijaya Karnataka Web new salary deal unacceptable
'ಹೊಸ ಸಂಬಳ ಒಪ್ಪಂದ ಒಪ್ಪುವುದಿಲ್ಲ'


ಸ್ಥಳೀಯ ಪಟ್ಟಣದ ಕ್ಯಾಂಪ್‌ ಬಸ್‌ ನಿಲ್ದಾಣದಲ್ಲಿಎಐಟಿಯಸಿ ಕಾರ್ಮಿಕ ಸಂಘಟನೆ ಹೊಸ ಸಂಬಳ ಒಪ್ಪಂದ ಜಾರಿಯಲ್ಲಿಆಡಳಿತವರ್ಗ ಅನುಸರಿಸುತ್ತಿರುವ ವಿಳಂಬ ಧೋರಣೆ ಹಾಗೂ ಹಾಲಿ ಸೌಲಭ್ಯಗಳನ್ನು ಕಡಿತಗೊಳಿಸುವ ನೀತಿಗಳನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಸ್ಥಳದಲ್ಲಿಗುರುವಾರ ಮಾತನಾಡಿದರು.

ಹೊಸ ಸಂಬಳ ಒಪ್ಪಂದ ಜಾರಿ ಸಂಬಂಧ ಕಂಪನಿ ನಿರ್ದೇಶಕ ಮಂಡಳಿ ಕೈಗೊಂಡ ಉಪ ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಉಪ ಸಮಿತಿ ಬೇಸಿಕ್‌ ಮೇಲೆ ಶೇ.30 ರಷ್ಟು ಸಂಬಳ ಹೆಚ್ಚಳಕ್ಕೆ ವರದಿ ನೀಡಿತ್ತು. ಆದರೆ ನಿರ್ದೇಶಕ ಮಂಡಳಿ ಶೇ.25 ರಷ್ಟು ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ಇದನ್ನು ಸಹ ವಿರೋಧಿಸಬೇಕಾಗಿತ್ತು ಎಂದರು.

ಸಂಬಳ ಹೆಚ್ಚಳದಲ್ಲಿಕಡಿತಮಾಡಿದ್ದಲ್ಲದೆ ಅನೇಕ ಭತ್ಯೆಗಳ ಕಡಿತಕ್ಕೆ ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ. ಇದರಿಂದ ಕಾರ್ಮಿಕರಿಗೆ ಭಾರಿ ಅನ್ಯಾಯವಾಗಲಿದೆ. ಒಟ್ಟಾರೆ ಕಾರ್ಮಿಕರು ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಈ ಸಂದರ್ಭ ನಾವು ಯಾವ ಸಂಘಟನೆ ವಿರುದ್ಧ ಮಾತನಾಡುವುದಿಲ್ಲ. ಬದಲಾಗಿ ಎಲ್ಲ್ಲರೂ ಒಗ್ಗಟ್ಟಾಗಿ ಆಡಳಿತವರ್ಗ ಹಾಗೂ ಸರಕಾರದ ವಿರುದ್ಧ ಹೋರಾಡಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕಾಗಿದೆ ಎಂದು ಹೇಳಿದರು.

ಬೆಂಬಲ: ಕಾರ್ಮಿಕರ ಪರವಾಗಿ ಆಡಳಿತವರ್ಗದ ಜತೆ ನೇರವಾಗಿ ಮಾತನಾಡುವ, ಒಪ್ಪಂದ ಮಾಡಿಕೊಳ್ಳುವ ಅಧಿಕಾರ ಹೊಂದಿದ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘ(ಟಿಯುಸಿಐ)ದ ಪ್ರಧಾನ ಕಾರ್ಯದರ್ಶಿ ಮಹ್ಮದ್‌ ಅಮೀರ್‌ಅಲಿ ಹಾಗೂ ಅಧ್ಯಕ್ಷ ವಾಲೇಬಾಬು ಮತ್ತು ಪದಾಧಿಕಾರಿಗಳು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದು ನೆರೆದವರಲ್ಲಿಅಚ್ಚರಿ ಮೂಡಿಸಿತು.

ಎಐಟಿಯುಸಿ ಮುಖಂಡರಾದ ಶಾಂತಪ್ಪ ಅನ್ವರಿ, ಶಾಂತಪ್ಪ ಮಳ್ಳಿ, ನರಸಿಂಗ್‌ಭಾನು ಠಾಕೂರು, ಚಂದ್ರಶೇಖರ ಹಟ್ಟಿ, ಮೊಹಿನುದ್ದೀನ್‌ ಮಾಲಗತ್ತಿ, ಬಿ.ಯಲ್ಲಪ್ಪ, ವೆಂಕೋಬ್‌ ಮಿಯ್ಯಾಪುರ, ದುರುಗಪ್ಪ ನಗನೂರು, ಶಿವಪುತ್ರಪ್ಪ, ಕುಟ್ಟಿಮಾ, ನಾಗರೆಡ್ಡಿ ಜೇರಬಂಡಿ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ