ಆ್ಯಪ್ನಗರ

ಶಾಸಕರಿಂದ ಕಾಮಗಾರಿಗಳ ತಡೆಗೆ ಸೂಚನೆ

ತಾಲೂಕಿನಾದ್ಯಂತ ನಾನಾ ಇಲಾಖೆಗಳಿಂದ ನಡೆದಿರುವ ಅಭಿವೃದ್ದಿ ಕಾಮಗಾರಿಗಳಿಗೆ ತಡೆಯೊಡ್ಡಿ, ಪರಿಶೀಲನೆ ಬಳಿಕವೇ ಕೆಲಸ ಆರಂಭಿಸುವಂತೆ ಶಾಸಕ ವೆಂಕಟರಾವ್‌ ನಾಡಗೌಡ ಅಧಿಕಾರಿಗಳಿಗೆ ತಾಕೀತು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

Vijaya Karnataka 30 May 2018, 5:00 am
ಸಿಂಧನೂರು: ತಾಲೂಕಿನಾದ್ಯಂತ ನಾನಾ ಇಲಾಖೆಗಳಿಂದ ನಡೆದಿರುವ ಅಭಿವೃದ್ದಿ ಕಾಮಗಾರಿಗಳಿಗೆ ತಡೆಯೊಡ್ಡಿ, ಪರಿಶೀಲನೆ ಬಳಿಕವೇ ಕೆಲಸ ಆರಂಭಿಸುವಂತೆ ಶಾಸಕ ವೆಂಕಟರಾವ್‌ ನಾಡಗೌಡ ಅಧಿಕಾರಿಗಳಿಗೆ ತಾಕೀತು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web notice for the prevention of work by the legislators
ಶಾಸಕರಿಂದ ಕಾಮಗಾರಿಗಳ ತಡೆಗೆ ಸೂಚನೆ


ಕ್ಷೇತ್ರಕ್ಕೆ ನಾಡಗೌಡರು ಶಾಸಕರಾಗಿ 14 ದಿನ ಕಳೆದಿದೆ. ಎರಡು ದಿನಗಳ ಹಿಂದಷ್ಟೇ ನಗರಕ್ಕೆ ಆಗಮಿಸಿರುವ ಅವರು, ಬೆಂಬಲಿಗರು ಹಾಗೂ ಕಾರ್ಯಕರ್ತರಿಂದ ಸನ್ಮಾನಕ್ಕೆ ಸ್ವೀಕರಿಸುತ್ತಿದ್ದಾರೆ. ಈ ನಡುವೆ ಅಧಿಕಾರಿ ವರ್ಗವೂ ಶಾಸಕರನ್ನು ಭೇಟಿಯಾಗಲು ತೆರಳುತ್ತಿದೆ. ಆದರೆ ಸೋಮವಾರ ತಮ್ಮ ನಿವಾಸದಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿರುವ ಶಾಸಕರು, 'ನಾನು ಎಲ್ಲ'ಕಾಮಗಾರಿಗಳನ್ನು ಖುದ್ದು ಪರಿಶೀಲಿಸುವೆ. ಕ್ರಿಯಾಯೋಜನೆ ಹಂತದಲ್ಲಿ ಇದ್ದರೆ ಗಮನಹರಿಸುವೆ. ಯಾವುದೇ ಕಾಮಗಾರಿಯನ್ನು ಮುಂದುವರಿಸಬೇಡಿ. ಸ್ವಲ್ಪ ಕಾಯಿರಿ' ಎಂದು ಸೂಚಿಸಿದ್ದಾರೆ. ಇದಲ್ಲದೆ ಕಾಮಗಾರಿ ಬಿಲ್‌ ಪಾವತಿ ವಿಚಾರವನ್ನು ಗಮನಕ್ಕೆ ತರುವಂತೆಯೂ ತಾಕೀತು ಮಾಡಿದ್ದು, ಅಧಿಕಾರಿಗಳಲ್ಲಿ ತಳಮಳ ಉಂಟು ಮಾಡಿದೆ. ತಾಲೂಕಿನ ಜವಳಗೇರಾ ಗ್ರಾಮದ ಬಹುಗ್ರಾಮ ಕುಡಿವ ನೀರಿನ ಯೋಜನೆ ವಿಚಾರವಾಗಿಯೂ ಜಿ.ಪಂ.ಜಿಇ ಲಿಂಗನಗೌಡ ಮತ್ತು ಶ್ರೀನಿವಾಸರಂಗ ಇಬ್ಬರನ್ನು ನಾಡಗೌಡರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಅಗತ್ಯ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳ ದಿಢೀರ್‌ ಸಭೆ ತಾಲೂಕಿನಲ್ಲಿ ಚರ್ಚೆಯಾಗುತ್ತಿದೆ.

ಪರ-ವಿರೋಧ: ಹಂಪನಗೌಡ ಬಾದರ್ಲಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ತಂದ ಅನುದಾನದ ಕಾಮಗಾರಿಗಳು ನಡೆದಿವೆ. ಈಗಾಗಲೇ ಚುನಾವಣೆ ಹಿನ್ನೆಲೆಯಲ್ಲಿ ತಿಂಗಳುಗಳಿಂದ ಅಭಿವೃದ್ದಿ ಕೆಲಸ ಕುಂಠಿತವಾಗಿವೆ. ಈ ನಡುವೆ ಮತ್ತಷ್ಟು ಕಾಮಗಾರಿ ವಿಳಂಬವಾದರೆ ಹೇಗೆ? ಎಂಬ ಪ್ರಶ್ನೆಯೂ ಅಧಿಕಾರಿಗಳನ್ನು ಕಾಡುತ್ತಿದೆ. ಕಾಮಗಾರಿ ತಡೆ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗಿದೆ. ಶಾಸಕರು ಕಾಮಗಾರಿ ಸ್ಥಗಿತಗೊಳಿಸುವಂತೆ ಹೇಳಿದ್ದಾರೆ ಎಂಬ ವಿಚಾರ ಎಲ್ಲ ರಾಜಕೀಯ ಮುಖಂಡರ ಬಾಯಲ್ಲಿ ಹರಿದಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ