ಆ್ಯಪ್ನಗರ

ಪಂಚಾಯಿತಿಗೆ ಬಾರದ ಅಧಿಕಾರಿಗಳು

ತಾಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿ ಕಚೇರಿಗೆ ಪಿಡಿಒ ಹಾಗೂ ಸಿಬ್ಬಂದಿ ಭೇಟಿನೀಡುವುದು ಅಪರೂಪವಾಗಿದೆ ಎಂದು ಗ್ರಾಮಸ್ಥರು, ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 26 Oct 2019, 5:00 am
ಸಿಂಧನೂರು: ತಾಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿ ಕಚೇರಿಗೆ ಪಿಡಿಒ ಹಾಗೂ ಸಿಬ್ಬಂದಿ ಭೇಟಿನೀಡುವುದು ಅಪರೂಪವಾಗಿದೆ ಎಂದು ಗ್ರಾಮಸ್ಥರು, ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web officers not to panchayat
ಪಂಚಾಯಿತಿಗೆ ಬಾರದ ಅಧಿಕಾರಿಗಳು


ಬೆಳಗ್ಗೆ ಎಂದಿನಂತೆ ತಮ್ಮ ಕೆಲಸಕ್ಕೆಂದು ಪಂಚಾಯಿತಿಗೆ ಬಂದ ಜನತೆ, ಪಂಚಾಯಿತಿಯ ಎಲ್ಲಕೊಠಡಿಗಳಿಗೂ ಬೀಗ ಹಾಕಿರುವುದನ್ನು ಕಂಡು ನಿರಾಸೆ ಅನುಭವಿಸಿದರು. ''ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಯಾವಾಗ ಕಚೇರಿಗೆ ಬಂದರೂ ತೆರೆದಿರುವುದಿಲ್ಲ. ಚಿರತನಾಳ ಗ್ರಾಮದಿಂದ ಹಲವು ಬಾರಿ ಬಂದು ಹಿಂದಕ್ಕೆ ಹೋಗಿದ್ದೇವೆ. ನಮ್ಮ ಸಮಸ್ಯೆ ಯಾರಿಗೆ ತಿಳಿಸಬೇಕು?'' ಎಂದು ಬೇಸರ ವ್ಯಕ್ತಪಡಿಸಿದರು.

''ರಜಾ ದಿನ ಹೊರತುಪಡಿಸಿ ಇತರ ಎಲ್ಲದಿನ ಕಚೇರಿಗೆ ಬಂದು ಕಡ್ಡಾಯವಾಗಿ ಹಾಜರಾಗಬೇಕಾದ ಸಿಬ್ಬಂದಿ ನಿರ್ಲಕ್ಷತ್ರ್ಯವಹಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು'' ಎಂದು ಒತ್ತಾಯಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ