ಆ್ಯಪ್ನಗರ

ಮಮತಾ ಮಾಸಾಶನ ಮಂಜೂರಿಗೆ ಆದೇಶ

ಬಹು ಅಂಗಾಂಗ ವೈಕಲ್ಯ ಹಿನ್ನೆಲೆಯಲ್ಲಿಆಧಾರ್‌ ಗುರುತಿನ ಕಾರ್ಡ್‌ ಪಡೆಯಲಾಗದೇ ಮಾಸಾಶನದಿಂದ ವಂಚಿತವಾಗಿದ್ದ ಬಾಲಕಿ ಮಮತಾ ಮಾಸಾಶನ ಮಂಜೂರಿಗೆ ತಹಸೀಲ್ದಾರ್‌ ಕೆ.ಮಂಜುನಾಥ, ಶುಕ್ರವಾರ ಆದೇಶಿಸಿದರು.

Vijaya Karnataka 28 Dec 2019, 5:00 am
ದೇವದುರ್ಗ (ರಾಯಚೂರು); ಬಹು ಅಂಗಾಂಗ ವೈಕಲ್ಯ ಹಿನ್ನೆಲೆಯಲ್ಲಿಆಧಾರ್‌ ಗುರುತಿನ ಕಾರ್ಡ್‌ ಪಡೆಯಲಾಗದೇ ಮಾಸಾಶನದಿಂದ ವಂಚಿತವಾಗಿದ್ದ ಬಾಲಕಿ ಮಮತಾ ಮಾಸಾಶನ ಮಂಜೂರಿಗೆ ತಹಸೀಲ್ದಾರ್‌ ಕೆ.ಮಂಜುನಾಥ, ಶುಕ್ರವಾರ ಆದೇಶಿಸಿದರು.
Vijaya Karnataka Web order to grant mamata mashasana
ಮಮತಾ ಮಾಸಾಶನ ಮಂಜೂರಿಗೆ ಆದೇಶ


ಸ್ಥಳೀಯ ಪುರಸಭೆ ವ್ಯಾಪ್ತಿಯ ಶಾಂತಿನಗರ ನಿವಾಸಿ ನಾಗಮ್ಮ ಅವರ ಪುತ್ರಿ 9 ವರ್ಷದ ಮಮತಾ, ಹುಟ್ಟಿನಿಂದಲೇ ಬಹು ಅಂಗವೈಕಲ್ಯ ಅನುಭವಿಸುತ್ತಿದ್ದಾಳೆ. ಆಧಾರ್‌ ಲಿಂಕ್‌ ನೆಪವೊಡ್ಡಿದ ತಾಲೂಕಾಡಳಿತ, ಕಳೆದ ಕೆಲವು ವರ್ಷಗಳಿಂದ ಬಾಲಕಿಯ ಮಾಸಾಶನವನ್ನು ರದ್ದುಮಾಡಿತ್ತು. ಅಂಗಾಂಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡ ಹಿನ್ನೆಲೆಯಲ್ಲಿಆಧಾರ್‌ ಕಾರ್ಡ್‌ ತಂಬ್‌ಗೆ ಮಮತಾ ಬೆರಳುಗಳು ತಾಳೆಯಾಗದೇ ಸಂಕಷ್ಟ ಅನುಭವಿಸುವಂತಾಗಿದೆ. 'ವಿಜಯ ಕರ್ನಾಟಕ'ದಲ್ಲಿಮಮತಾ ಕುಟುಂಬದ ಅಸಹಾಯಕತೆ ಕುರಿತು ಡಿ.25ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ತಹಸೀಲ್ದಾರ್‌ ಕೆ.ಮಂಜುನಾಥ, ನಾಗಮ್ಮ ಅವರ ಮನೆಗೆ ಭೇಟಿನೀಡಿ, ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.

ವಿಕಲಚೇತನ ಬಾಲಕಿ ಮಮತಾ ಹಾಗೂ ವೃದ್ಧ ತಾಯಿ ನಾಗಮ್ಮ ಅವರಿಗೆ ಮಾಶಾಸನ ನೀಡಲು ಆದೇಶಿಸಿದ ಅವರು, ಅಗತ್ಯ ದಾಖಲೆಗಳನ್ನು ಸಂಗ್ರಹಿಸುವಂತೆ ಕಂದಾಯ ನೀರಿಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗೆ ಸೂಚಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ