ಚಂದ್ರಶೇಖರ ಬೆನ್ನೂರು ಸಿಂಧನೂರು
ರಾಯಚೂರು: ಕೊರೊನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಆರಂಭವಾಗುವ ದಿನ ಇನ್ನೂ ಖಚಿತವಾಗಿಲ್ಲ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್ಲೈನ್ ಪಾಠಗಳು ಶುರುವಾಗಿವೆ. ಆದರೆ, ಆನ್ಲೈನ್ ಪಾಠ ಕೇಳಲು ಅಗತ್ಯವಾದ ಆಂಡ್ರಾಯ್ಡ್ ಮೊಬೈಲ್ ಖರೀದಿ ಮಾತ್ರ ಪಾಲಕರಲ್ಲಿ ಹೊಸ ಪೀಕಲಾಟ ತಂದಿದೆ.
ರಾಜ್ಯ ಸರಕಾರವೂ ಡಿಡಿ ಚಂದನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಶುರುಮಾಡಿದೆ. ಹಲವು ಖಾಸಗಿ ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಆನ್ಲೈನ್ ಪಾಠ ಆರಂಭಿಸಲಾಗಿದೆ. ಪಾಠ ಕೇಳುವವರು ಮೊಬೈಲ್, ಇಂಟರ್ನೆಟ್ ಎಲ್ಲ ಸೌಕರ್ಯ ಹೊಂದಿರಬೇಕಿದೆ. ಉಳ್ಳವರಿಗೆ ಮೊಬೈಲ್ ಖರೀದಿ ಕಷ್ಟವಲ್ಲ. ಆದರೆ, ಬಡ ಹಾಗೂ ಮಧ್ಯಮ ವರ್ಗದ ಪಾಲಕರು ದುಡಿಮೆ ಇಲ್ಲದ ವೇಳೆ ಸಾಲಮಾಡಿ, 5-10 ಸಾವಿರ ರೂ. ಮೌಲ್ಯದ ಮೊಬೈಲ್ ಖರೀದಿಸಬೇಕಿದೆ. ಒಂದು ಮನೆಯಲ್ಲಿ ಮೂರ್ನಾಲ್ಕು ಮಕ್ಕಳು ಇದ್ದರೆ, ಎಷ್ಟು ಮೊಬೈಲ್ ಖರೀದಿಸಬೇಕು? ಎಂಬ ಚಿಂತೆಯೂ ಕಾಡುತ್ತಿದೆ.
ಪ್ರತ್ಯೇಕತೆಗೆ ಅವಕಾಶವಿಲ್ಲ:
ಮೊಬೈಲ್, ಇಂಟರ್ನೆಟ್ ಅನ್ನು ಆನ್ಮಾಡಿ ಮಕ್ಕಳಿಗೆ ಕೈಗೆ ಕೊಡಬೇಕು. ಮನೆಯಲ್ಲಿ ಪ್ರತ್ಯೇಕ ಕೊಠಡಿ ಇದ್ದವರು ಅಲ್ಲಿಯೇ ಕುಳಿತು ಪಾಠ ಕೇಳುತ್ತಾರೆ. ಆದರೆ, ಕೊಠಡಿ ಇಲ್ಲದವರು ಏಕಾಗ್ರತೆಯಿಂದ ಪಾಠ ಕೇಳಲು ಆಗುತ್ತಿಲ್ಲ. ಈ ಮೊದಲು ಶಾಲೆಗೆ ಹೋಗುವ ಮಕ್ಕಳಿಗೆ ಎಂದಿನಂತೆ ಶಾಲಾ ಪ್ರವೇಶಾತಿ, ಪುಸ್ತಕ ಸೇರಿ ಇತರ ಖರ್ಚುಗಳು ಇರುತ್ತಿದ್ದವು. ಇದೀಗ ಮಕ್ಕಳು ಶಾಲೆಗೆ ಹೋಗುವ ಮುನ್ನವೇ ಆನ್ಲೈನ್ ಪಾಠದಿಂದಾಗಿ ಮೊಬೈಲ್ಗೆ ತಪ್ಪದೇ ಕರೆನ್ಸಿ ಹಾಕಿಸುವ ಹೊಣೆ ಪಾಲಕರ ಹೆಗಲೇರಿದೆ. ಮತ್ತೊಂದೆಡೆ ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಆನ್ಲೈನ್ ಶಿಕ್ಷಣಕ್ಕೆ ಸಜ್ಜುಗೊಳಿಸಲು ಲ್ಯಾಪ್ಟಾಪ್ ಖರೀದಿಗೆ ಖಾಸಗಿ ಬ್ಯಾಂಕ್ಗಳು ಸಾಲ ಸೌಕರ್ಯ ಒದಗಿಸಲು ಮುಂದಾಗಿರುವುದು ಕಂಡುಬಂದಿದೆ.
ದೇಗುಲ ಆವರಣವೇ ಬಯಲು ಶಾಲೆ..! 120 ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಕರ ಬೋಧನೆ
ಗ್ರಾಮೀಣರು ಹೈರಾಣ:
ಗ್ರಾಮೀಣ ಪಾಲಕರಲ್ಲಿ ತಂತ್ರಜ್ಞಾನ ತಿಳಿವಳಿಕೆ ಕೊರತೆ ಹಾಗೂ ಆರ್ಥಿಕ ಮುಗ್ಗಟ್ಟು, ನೆಟ್ವರ್ಕ್ ಸಮಸ್ಯೆ ಆನ್ಲೈನ್ ಶಿಕ್ಷಣಕ್ಕೆ ತೀವ್ರ ಅಡ್ಡಿಯಾಗಿವೆ. ಹೀಗಾಗಿ ಹಳ್ಳಿಗಾಡಿನ ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗುವ ಆತಂಕವಿದೆ. ಖಾಸಗಿ ಮಕ್ಕಳಿಗೆ ಆನ್ಲೈನ್ ಪಾಠದ ಭಾಗ್ಯವಿದ್ದರೂ ಸರಕಾರಿ ಶಾಲೆ ಮಕ್ಕಳಿಗೆ ಈ ಸೌಲಭ್ಯವಿಲ್ಲ. ಗ್ರಾಮೀಣ ಪ್ರದೇಶದ ಕೆಲವು ಸರಕಾರಿ ಶಾಲೆಗಳಲ್ಲಿವಠಾರ ಶಾಲೆಗಳನ್ನು ಆರಂಭಿಸಲಾಗಿದೆ. ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ.
ಪಠ್ಯಕ್ರಮ ಕಡಿತ ಸರಿಯಲ್ಲ: ಹೈಬ್ರಿಡ್ ಶಿಕ್ಷಣ ಅವಶ್ಯ- ಡಾ. ಉಷಾಪ್ರಭಾ ಎನ್. ನಾಯಕ್
ಖಾಸಗಿ ಶಾಲೆಗಳಲ್ಲಿ ಈಗಾಗಲೇ ಜೂಮ್, ಮೀಟ್ ಸೇರಿ ಇತರ ಆ್ಯಪ್ ಹಾಗೂ ತಮ್ಮದೇ ಶಾಲೆಯ ಆ್ಯಪ್ ಬಳಸಿ ಆನ್ಲೈನ್ ಪಾಠಗಳು ಶುರುವಾಗಿವೆ. ನಿರ್ದಿಷ್ಟ ಪಾಸ್ವರ್ಡ್, ಐಡಿ ನೀಡಲಾಗುತ್ತಿದ್ದು, ಅದನ್ನು ಬಳಸಿ ಮಕ್ಕಳು ಆನ್ಲೈನ್ ಪಾಠ ಕೇಳಬೇಕಿದೆ. ಹಳ್ಳಿಯಲ್ಲಿಇದ್ದವರಿಗೆ ನೆಟ್ವರ್ಕ್ ಸಮಸ್ಯೆ ಸೇರಿ ತಾಂತ್ರಿಕ ಸಮಸ್ಯೆ ಕಾಡುತ್ತಿವೆ. ಶೇ.50ರಷ್ಟು ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ಗೆ ಹಾಜರಾಗುತ್ತಿಲ್ಲ. ಆನ್ಲೈನ್ ಪಾಠ ಗೊಂದಲಕ್ಕೆ ಕಾರಣವಾಗುತ್ತಿದೆ. ಸುರಕ್ಷತಾ ಕ್ರಮ ಅನುಸರಿಸಿ ಸರಕಾರವೇ ಶಾಲೆ ಆರಂಭಿಸುವುದೇ ಉತ್ತಮ.
-ವೀರೇಶ ಅಗ್ನಿ, ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲಾ ಮತ್ತು ಕಾಲೇಜು ಒಕ್ಕೂಟ, ಸಿಂಧನೂರು
ರಾಯಚೂರು: ಕೊರೊನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಆರಂಭವಾಗುವ ದಿನ ಇನ್ನೂ ಖಚಿತವಾಗಿಲ್ಲ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್ಲೈನ್ ಪಾಠಗಳು ಶುರುವಾಗಿವೆ. ಆದರೆ, ಆನ್ಲೈನ್ ಪಾಠ ಕೇಳಲು ಅಗತ್ಯವಾದ ಆಂಡ್ರಾಯ್ಡ್ ಮೊಬೈಲ್ ಖರೀದಿ ಮಾತ್ರ ಪಾಲಕರಲ್ಲಿ ಹೊಸ ಪೀಕಲಾಟ ತಂದಿದೆ.
ರಾಜ್ಯ ಸರಕಾರವೂ ಡಿಡಿ ಚಂದನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಶುರುಮಾಡಿದೆ. ಹಲವು ಖಾಸಗಿ ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಆನ್ಲೈನ್ ಪಾಠ ಆರಂಭಿಸಲಾಗಿದೆ. ಪಾಠ ಕೇಳುವವರು ಮೊಬೈಲ್, ಇಂಟರ್ನೆಟ್ ಎಲ್ಲ ಸೌಕರ್ಯ ಹೊಂದಿರಬೇಕಿದೆ. ಉಳ್ಳವರಿಗೆ ಮೊಬೈಲ್ ಖರೀದಿ ಕಷ್ಟವಲ್ಲ. ಆದರೆ, ಬಡ ಹಾಗೂ ಮಧ್ಯಮ ವರ್ಗದ ಪಾಲಕರು ದುಡಿಮೆ ಇಲ್ಲದ ವೇಳೆ ಸಾಲಮಾಡಿ, 5-10 ಸಾವಿರ ರೂ. ಮೌಲ್ಯದ ಮೊಬೈಲ್ ಖರೀದಿಸಬೇಕಿದೆ. ಒಂದು ಮನೆಯಲ್ಲಿ ಮೂರ್ನಾಲ್ಕು ಮಕ್ಕಳು ಇದ್ದರೆ, ಎಷ್ಟು ಮೊಬೈಲ್ ಖರೀದಿಸಬೇಕು? ಎಂಬ ಚಿಂತೆಯೂ ಕಾಡುತ್ತಿದೆ.
ಪ್ರತ್ಯೇಕತೆಗೆ ಅವಕಾಶವಿಲ್ಲ:
ಮೊಬೈಲ್, ಇಂಟರ್ನೆಟ್ ಅನ್ನು ಆನ್ಮಾಡಿ ಮಕ್ಕಳಿಗೆ ಕೈಗೆ ಕೊಡಬೇಕು. ಮನೆಯಲ್ಲಿ ಪ್ರತ್ಯೇಕ ಕೊಠಡಿ ಇದ್ದವರು ಅಲ್ಲಿಯೇ ಕುಳಿತು ಪಾಠ ಕೇಳುತ್ತಾರೆ. ಆದರೆ, ಕೊಠಡಿ ಇಲ್ಲದವರು ಏಕಾಗ್ರತೆಯಿಂದ ಪಾಠ ಕೇಳಲು ಆಗುತ್ತಿಲ್ಲ. ಈ ಮೊದಲು ಶಾಲೆಗೆ ಹೋಗುವ ಮಕ್ಕಳಿಗೆ ಎಂದಿನಂತೆ ಶಾಲಾ ಪ್ರವೇಶಾತಿ, ಪುಸ್ತಕ ಸೇರಿ ಇತರ ಖರ್ಚುಗಳು ಇರುತ್ತಿದ್ದವು. ಇದೀಗ ಮಕ್ಕಳು ಶಾಲೆಗೆ ಹೋಗುವ ಮುನ್ನವೇ ಆನ್ಲೈನ್ ಪಾಠದಿಂದಾಗಿ ಮೊಬೈಲ್ಗೆ ತಪ್ಪದೇ ಕರೆನ್ಸಿ ಹಾಕಿಸುವ ಹೊಣೆ ಪಾಲಕರ ಹೆಗಲೇರಿದೆ. ಮತ್ತೊಂದೆಡೆ ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಆನ್ಲೈನ್ ಶಿಕ್ಷಣಕ್ಕೆ ಸಜ್ಜುಗೊಳಿಸಲು ಲ್ಯಾಪ್ಟಾಪ್ ಖರೀದಿಗೆ ಖಾಸಗಿ ಬ್ಯಾಂಕ್ಗಳು ಸಾಲ ಸೌಕರ್ಯ ಒದಗಿಸಲು ಮುಂದಾಗಿರುವುದು ಕಂಡುಬಂದಿದೆ.
ದೇಗುಲ ಆವರಣವೇ ಬಯಲು ಶಾಲೆ..! 120 ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಕರ ಬೋಧನೆ
ಗ್ರಾಮೀಣರು ಹೈರಾಣ:
ಗ್ರಾಮೀಣ ಪಾಲಕರಲ್ಲಿ ತಂತ್ರಜ್ಞಾನ ತಿಳಿವಳಿಕೆ ಕೊರತೆ ಹಾಗೂ ಆರ್ಥಿಕ ಮುಗ್ಗಟ್ಟು, ನೆಟ್ವರ್ಕ್ ಸಮಸ್ಯೆ ಆನ್ಲೈನ್ ಶಿಕ್ಷಣಕ್ಕೆ ತೀವ್ರ ಅಡ್ಡಿಯಾಗಿವೆ. ಹೀಗಾಗಿ ಹಳ್ಳಿಗಾಡಿನ ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗುವ ಆತಂಕವಿದೆ. ಖಾಸಗಿ ಮಕ್ಕಳಿಗೆ ಆನ್ಲೈನ್ ಪಾಠದ ಭಾಗ್ಯವಿದ್ದರೂ ಸರಕಾರಿ ಶಾಲೆ ಮಕ್ಕಳಿಗೆ ಈ ಸೌಲಭ್ಯವಿಲ್ಲ. ಗ್ರಾಮೀಣ ಪ್ರದೇಶದ ಕೆಲವು ಸರಕಾರಿ ಶಾಲೆಗಳಲ್ಲಿವಠಾರ ಶಾಲೆಗಳನ್ನು ಆರಂಭಿಸಲಾಗಿದೆ. ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ.
ಪಠ್ಯಕ್ರಮ ಕಡಿತ ಸರಿಯಲ್ಲ: ಹೈಬ್ರಿಡ್ ಶಿಕ್ಷಣ ಅವಶ್ಯ- ಡಾ. ಉಷಾಪ್ರಭಾ ಎನ್. ನಾಯಕ್
ಖಾಸಗಿ ಶಾಲೆಗಳಲ್ಲಿ ಈಗಾಗಲೇ ಜೂಮ್, ಮೀಟ್ ಸೇರಿ ಇತರ ಆ್ಯಪ್ ಹಾಗೂ ತಮ್ಮದೇ ಶಾಲೆಯ ಆ್ಯಪ್ ಬಳಸಿ ಆನ್ಲೈನ್ ಪಾಠಗಳು ಶುರುವಾಗಿವೆ. ನಿರ್ದಿಷ್ಟ ಪಾಸ್ವರ್ಡ್, ಐಡಿ ನೀಡಲಾಗುತ್ತಿದ್ದು, ಅದನ್ನು ಬಳಸಿ ಮಕ್ಕಳು ಆನ್ಲೈನ್ ಪಾಠ ಕೇಳಬೇಕಿದೆ. ಹಳ್ಳಿಯಲ್ಲಿಇದ್ದವರಿಗೆ ನೆಟ್ವರ್ಕ್ ಸಮಸ್ಯೆ ಸೇರಿ ತಾಂತ್ರಿಕ ಸಮಸ್ಯೆ ಕಾಡುತ್ತಿವೆ. ಶೇ.50ರಷ್ಟು ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ಗೆ ಹಾಜರಾಗುತ್ತಿಲ್ಲ. ಆನ್ಲೈನ್ ಪಾಠ ಗೊಂದಲಕ್ಕೆ ಕಾರಣವಾಗುತ್ತಿದೆ. ಸುರಕ್ಷತಾ ಕ್ರಮ ಅನುಸರಿಸಿ ಸರಕಾರವೇ ಶಾಲೆ ಆರಂಭಿಸುವುದೇ ಉತ್ತಮ.
-ವೀರೇಶ ಅಗ್ನಿ, ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲಾ ಮತ್ತು ಕಾಲೇಜು ಒಕ್ಕೂಟ, ಸಿಂಧನೂರು