ಆ್ಯಪ್ನಗರ

'ಬೆಳೆಗೆ ವೈಜ್ಞಾನಿಕ ಬೆಲೆ ನೀಡಿ'

ತೊಗರಿ, ಭತ್ತ ಸೇರಿ ರೈತರು ಬೆಳೆದ ಎಲ್ಲಬೆಳೆಗಳಿಗೆ ಸ್ವಾಮಿನಾಥನ್‌ ವರದಿ ಆಧರಿಸಿ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿಪ್ರತಿಭಟನೆ ನಡೆಸಿದರು.

Vijaya Karnataka 17 Dec 2019, 5:00 am
ಲಿಂಗಸುಗೂರು: ತೊಗರಿ, ಭತ್ತ ಸೇರಿ ರೈತರು ಬೆಳೆದ ಎಲ್ಲಬೆಳೆಗಳಿಗೆ ಸ್ವಾಮಿನಾಥನ್‌ ವರದಿ ಆಧರಿಸಿ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿಪ್ರತಿಭಟನೆ ನಡೆಸಿದರು.
Vijaya Karnataka Web pay scientific price for the crop
'ಬೆಳೆಗೆ ವೈಜ್ಞಾನಿಕ ಬೆಲೆ ನೀಡಿ'


ರೈತರ ಬಗ್ಗೆ ಸರಕಾರದ ನಿರ್ಲಕ್ಷತ್ರ್ಯದಿಂದ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ಅನ್ನದಾತನಿಗೆ ಬೆಲೆ ಇಲ್ಲದಂತಾಗಿದೆ. ಸರಿಯಾದ ಬೆಲೆ ಇಲ್ಲದೆ ಬೆಳೆದ ಬೆಳೆ ಬೇಕಾಬಿಟ್ಟಿಯಾಗಿ ಮಾರಾಟ ಮಾಡುವಂತಾಗಿದೆ. ಭತ್ತ, ತೊಗರಿ, ಕಡಲೆ ಹೈಬ್ರೀಡ್‌ ಜೋಳ ಬೆಳೆಗೆ ಸೂಕ್ತ ಬೆಲೆಯಿಲ್ಲದೆ ರೈತರು ಸಂಕಷ್ಟು ಅನುಭವಿಸುವಂತಾಗಿದೆ. ಕೂಡಲೇ ಖರೀದಿ ಕೇಂದ್ರ ಆರಂಭಿಸಿ ಬೆಳೆ ಖರೀದಿಸಿ ವಾರದೊಳಗೆ ಹಣ ಪಾವತಿ ಮಾಡಬೇಕು ಎಂದರು.

ಆಗ್ರಹ:
ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳ ಮತ್ತು ಖಾಸಗಿ ಹಣಕಾಸು ಸಂಸ್ಥೆಯಲ್ಲಿನ ಸಾಲ ಮನ್ನಾ ಮಾಡಬೇಕು. ಎಪಿಎಂಸಿಯಲ್ಲಿವರ್ತಕರು ಪ್ರತಿ ಕ್ವಿಂಟಲ್‌ ಆಹಾರ ಧಾನ್ಯಕ್ಕೆ 3ರಿಂದ5 ಕೆಜಿ ಶೂಟ ತೆಗೆಯುತ್ತಿದ್ದಾರೆ. ಕಮಿಷನ್‌ ಹಾವಳಿ, ಖಾಲಿ ಚೀಲದ ಮೊತ್ತ ಪಡೆಯವುದನ್ನು ತಡೆಗಟ್ಟಬೇಕು. ಕೃಷಿ ಮಾರುಕಟ್ಟೆಯಲ್ಲಿಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಇದಕ್ಕೆ ಕಡಿವಾಣ ಹಾಕಬೇಕು. ನಂದವಾಡಗಿ ಏತ ನೀರಾವರಿ ಯೋಜನೆಯಲ್ಲಿಶೇ.70 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದ ಸಹ ಭೂ ಪರಿಹಾರ ನೀಡಿರುವುದಿಲ್ಲಕೂಡಲೇ ಪರಿಹಾರ ನೀಡಬೇಕು. ತಾಲೂಕು ಕೇಂದ್ರದಲ್ಲಿರೈತ ಭವನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲವಂತ ಕಾಂಬಳೆ, ಹನುಮಂತಪ್ಪ ಹೊಳೆಯಾಚೆ, ಜಿಲ್ಲಾಅಧ್ಯಕ್ಷ ಶರಣಪ್ಪ ಮರಳಿ, ತಾಲೂಕು ಅಧ್ಯಕ್ಷ ಶಿವಪುತ್ರಗೌಡ, ಬಸನಗೌಡ ಹಿರೇಹೆಸರೂರು, ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ ನಾಯಕ, ವಿಜಯ ಬಡಿಗೇರ, ರಾಮಯ್ಯರೆಡ್ಡಿ, ಸಿ.ಎಚ್‌.ರವಿಕುಮಾರ, ಕರಿಯಪ್ಪ ಸಿರವಾರ, ಆದಪ್ಪ ಹಾಗಲ್ದಾಳ, ಸಂಗನಗೌಡ ಹೊಸೂರು ಹಾಗೂ ಇನ್ನಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ