ಆ್ಯಪ್ನಗರ

ಬೀದಿ ನಾಯಿಗಳ ಹಾವಳಿಗೆ ಬೆಚ್ಚಿದ ಜನತೆ

ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ.

Vijaya Karnataka 11 Oct 2019, 5:00 am
ಲಿಂಗಸುಗೂರು : ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ.
Vijaya Karnataka Web people warmed up to the hawk of street dogs
ಬೀದಿ ನಾಯಿಗಳ ಹಾವಳಿಗೆ ಬೆಚ್ಚಿದ ಜನತೆ


ಬೀದಿ ನಾಯಿಗಳ ಹಿಂಡು, ಕೆಲವೊಮ್ಮೆ ವಾಹನ ಸವಾರರ ಮೇಲೆ ದಿಢೀರ್‌ ದಾಳಿ ಮಾಡುತ್ತಿವೆ. ಕೆಲವು ನಾಯಿಗಳು ಬೈಕ್‌, ಕಾರುಗಳನ್ನು ಹಿಂಬಾಲಿಸುತ್ತಿದ್ದು, ವಾಹನ ಸವಾರರು ಆತಂಕ ಅನುಭವಿಸಬೇಕಿದೆ. ರಸ್ತೆಯಲ್ಲಿಮಕ್ಕಳು, ವೃದ್ಧರು ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆಯಂತೂ ಬೀದಿನಾಯಿಗಳ ಉಪಟಳದಿಂದ ವಾರ್ಡ್‌, ಕಾಲೊನಿ ನಿವಾಸಿಗಳು, ನಿದ್ದೆಗೆಡುವಂತಾಗಿದೆ.

ಸಾರ್ವಜನಿಕ ಹಿಡಿಶಾಪ: ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಪುರಸಭೆಗೆ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಪಟ್ಟಣದ ಸ್ವಾಮಿ ವಿವೇಕಾನಂದ ನಗರ, ದಿನಸಿಗಲ್ಲಿ, ಜೆಸ್ಕಾಂ ಕಚೇರಿ ಬಳಿ, ಹಳೆಯ ಬಸ್‌ ನಿಲ್ದಾಣ, ತರಕಾರಿ ಮಾರುಕಟ್ಟೆ ಹತ್ತಿರ, ಕಾಪೊರ್‍ರೇಷನ್‌ ಬ್ಯಾಂಕ್‌ ಹತ್ತಿರದ ಅಂಗಡಿಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿಬೀದಿ ನಾಯಿಗಳ ಹಾವಳಿ ಹೆಚ್ಚಿರುತ್ತದೆ. ಕೈಯಲ್ಲಿಚೀಲ ಹಿಡಿದು ಹೋಗುವವರನ್ನು ಕಂಡರೆ ಸಾಕು ನಾಯಿಗಳು ಬೆನ್ನಟ್ಟಿ ಹರಿದು ತಿನ್ನುತ್ತಿವೆ. ಪಟ್ಟಣದ ಜನರು ತೀವ್ರ ಭಯಭೀತರಾಗಿದ್ದಾರೆ. ಇದೆಲ್ಲಸಾಲದೆಂಬಂತೆ ಪಟ್ಟಣದ ಬಸ್‌ ನಿಲ್ದಾಣ ವೃತ್ತ, ಗಡಿಯಾರ ವೃತ್ತ, ಹಾಗೂ ಪ್ರಮುಖ ಸ್ಥಳಗಳಲಿರಾತ್ರಿಯಾದರೆ ಸಾಕು ಡಿವೈಡರ್‌ ಅಕ್ಕಪಕ್ಕದಲ್ಲಿಬಿಡಾಡಿ ದನಗಳ ದಂಡೇ ಮಲಗಿಕೊಂಡು, ಸಂಚಾರಕ್ಕೆ ಅಡ್ಡಿಯಾಗುತ್ತಿವೆ.

..............

ಬೀದಿನಾಯಿ ಹಾಗೂ ಬಿಡಾಡಿ ದನಗಳ ಹಾವಳಿ ತಡೆಗೆ ಪುರಸಭೆ ಸಹಕಾರದೊಂದಿಗೆ ಶೀಘ್ರವೇ ಕಾರ್ಯಾಚರಣೆ ನಡೆಸಲಾಗುತ್ತಿದೆ.

- ಪ್ರಕಾಶರೆಡ್ಡಿ ಡಂಬಳ, ಪಿಎಸ್‌ಐ, ಲಿಂಗಸುಗೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ