ಆ್ಯಪ್ನಗರ

ಬಂದ್‌ಗೆ ಅನುಮತಿ ನೀಡದಂತೆ ಒತ್ತಾಯ

ಜಿಲ್ಲಾ ಹಿತರಕ್ಷ ಣಾ ವೇದಿಕೆ ಜು.1ರಂದು ರಾಯಚೂರು ಬಂದ್‌ಗೆ ಕರೆ ನೀಡಿದ್ದು, ಅಂದು ರಾಜ್ಯಾದ್ಯಂತ ಪಿಯುಸಿ ಪೂರಕ ಪರೀಕ್ಷೆಯಿರುವ ಕಾರಣ ಬಂದ್‌ಗೆ ಅನುಮತಿ ನೀಡದಂತೆ ಒತ್ತಾಯಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದೆ.

ವಿಕ ಸುದ್ದಿಲೋಕ 30 Jun 2016, 9:00 am

ರಾಯಚೂರು: ಜಿಲ್ಲಾ ಹಿತರಕ್ಷ ಣಾ ವೇದಿಕೆ ಜು.1ರಂದು ರಾಯಚೂರು ಬಂದ್‌ಗೆ ಕರೆ ನೀಡಿದ್ದು, ಅಂದು ರಾಜ್ಯಾದ್ಯಂತ ಪಿಯುಸಿ ಪೂರಕ ಪರೀಕ್ಷೆಯಿರುವ ಕಾರಣ ಬಂದ್‌ಗೆ ಅನುಮತಿ ನೀಡದಂತೆ ಒತ್ತಾಯಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿರುವ ಮೈಸೂರು ಭಾಗದ ಸಚಿವ ತನ್ವೀರ್‌ ಸೇಠ್‌ರನ್ನು 'ಗೋ ಬ್ಯಾಕ್‌' ಎಂದು ಜು.1ರಂದು ಜಿಲ್ಲಾ ಹಿತರಕ್ಷ ಣಾ ವೇದಿಕೆ ನೀಡಿರುವ ಬಂದ್‌ ವಿರೋಧಿಸುತ್ತೇವೆ. ಮುಸ್ಲಿಂ ನಾಯಕ ತನ್ವೀರ್‌ ಸೇಠ್‌ರನ್ನು ಗೋ ಬ್ಯಾಕ್‌ ಎಂದು ಹೇಳುತ್ತಿರುವುದು ಮುಸ್ಲಿಂ ಸಮಾಜ ವಿರೋಧಿ ಹೇಳಿಕೆಯಾಗಿದೆ.

Vijaya Karnataka Web permission for agitation opposed
ಬಂದ್‌ಗೆ ಅನುಮತಿ ನೀಡದಂತೆ ಒತ್ತಾಯ

ಉದ್ದೇಶಪೂರ್ವಕವಾಗಿ ಒಂದು ಸಮಾಜದ ವಿರುದ್ಧ ಹೇಳಿಕೆ ನೀಡುವ ಮುಸ್ಲಿಂ ಸಮಾಜದವರ ಭಾವನೆಗೆ ಧಕ್ಕೆಯುಂಟು ಮಾಡಲಾಗುತ್ತಿದೆ. ಈ ಹಿಂದೆಯೂ ಬೇರೆ ಭಾಗದವರಾದ ಆನಂದ ಅಸ್ನೋಟಿಕರ್‌, ಸಿ.ಎಂ.ಉದಾಸಿ, ಬಾಲಚಂದ್ರ ಜಾರಕಿಹೊಳಿ, ಧರ್ಮಸಿಂಗ್‌, ಶ್ರೀರಾಮುಲು, ಡಾ.ಶರಣಪ್ರಕಾಶ ಪಾಟೀಲ್‌ ಇವರು ರಾಯಚೂರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಾಗ ಪ್ರತಿಭಟನೆ ನಡೆಸದ ಸಂಘದ ನಾಯಕರು ಈಗ ಏಕಾಏಕಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ ತನ್ವೀರ್‌ ಸೇಠ್‌ರನ್ನು ವಿರೋಧಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಜು.1ರಂದು ಪಿಯುಸಿ ಪೂರಕ ಪರೀಕ್ಷೆ ನಡೆಯಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಂದ್‌ ನಡೆಸಬಾರದು. ಇದಕ್ಕೂ ಮೀರಿ ಜಿಲ್ಲಾಧಿಕಾರಿಗಳು ಬಂದ್‌ಗೆ ಅನುಮತಿ ನೀಡಿದರೆ ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತ ಜವಾಬ್ದಾರಿ ಎಂದು ಮನವಿಯ್ಲಲಿ ಎಚ್ಚರಿಸಿದ್ದಾರೆ.

ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್‌ ಫಿರೋಜ್‌, ಶೇಖ್‌ ಮಸೂಂ, ಸೈಯದ್‌ ಶಂಶುದ್ದೀನ್‌, ಮಹ್ಮದ್‌, ಅಬ್ದುಲ್‌ ಹಮೀದ್‌ ಸೇರಿದಂತೆ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ