ಪ್ಲ್ಯಾಸ್ಟಿಕ್ ನಿಷೇಧ, ಶವಯಾತ್ರೆಯ ಮೆರವಣಿಗೆ
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಸ್ವಚ್ಛ ಭಾರತ ಯೋಜನೆಯಡಿ ಪ್ಲ್ಯಾಸ್ಟಿಕ್ ನಿಷೇಧದ ಕುರಿತು ಪ್ಲ್ಯಾಸ್ಟಿಕ್ ಶವಯಾತ್ರೆಯ ಮೆರವಣಿಗೆಯ ಮೂಲಕ ಅರಿವಿನ ಕಾರ್ಯಕ್ರಮವನ್ನು ಬುಧವಾರ ಪುರಸಭೆ ವತಿಯಿಂದ ಏರ್ಪಡಿಸಲಾಗಿತ್ತು.
Vijaya Karnataka 3 Oct 2019, 5:00 am
ಮುದಗಲ್ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಸ್ವಚ್ಛ ಭಾರತ ಯೋಜನೆಯಡಿ ಪ್ಲ್ಯಾಸ್ಟಿಕ್ ನಿಷೇಧದ ಕುರಿತು ಪ್ಲ್ಯಾಸ್ಟಿಕ್ ಶವಯಾತ್ರೆಯ ಮೆರವಣಿಗೆಯ ಮೂಲಕ ಅರಿವಿನ ಕಾರ್ಯಕ್ರಮವನ್ನು ಬುಧವಾರ ಪುರಸಭೆ ವತಿಯಿಂದ ಏರ್ಪಡಿಸಲಾಗಿತ್ತು.
ಪಟ್ಟಣದಲ್ಲಿಪ್ಲ್ಯಾಸ್ಟಿಕ್ ಶವಯಾತ್ರೆಗೆ ಪುರಸಭೆ ಮುಖ್ಯಾಧಿಕಾರಿ ಎನ್. ಮೂರ್ತಿ ಚಾಲನೆ ನೀಡಿದರು. ಪ್ರಮುಖ ಬೀದಿ, ಮಾರುಕಟ್ಟೆ ಪ್ರದೇಶದಲ್ಲಿಶವಯಾತ್ರೆಯ ಮೆರವಣಿಗೆ ನಡೆಯಿತು. ಪ್ಲ್ಯಾಸ್ಟಿಕ್ ಬಳಕೆ ಶವಯಾತ್ರೆಯಾದಂತೆ ಎನ್ನುವ ಸಂದೇಶದೊಂದಿಗೆ ಪ್ಲ್ಯಾಸ್ಟಿಕ್ ಬಳಕೆದಾರರಿಗೆ ಖಡಕ್ ಸಂದೇಶ ರವಾನಿಸಿದರು. ಬೀದಿ ವ್ಯಾಪಾರಸ್ಥರು, ಕಾಯಿಪಲ್ಲೆವ್ಯಾಪಾರಸ್ಥರು ಸೇರಿ ನಾನಾ ಅಂಗಡಿಗಳ ಮಾಲೀಕರಿಗೂ ಪ್ಲ್ಯಾಸ್ಟಿಕ್ ಬಳಸದಂತೆ ಸಂದೇಶ ರವಾನಿಸಿದರು. ಪುರಸಭೆ ಸದಸ್ಯರಾದ ಶರಣಪ್ಪ ಭೋವಿ, ಅಮೀರಬೇಗ್ ಉಸ್ತಾದ್, ದುರುಗಪ್ಪ ಕಟ್ಟಿಮನಿ, ತಮ್ಮಣ್ಣ ಗುತ್ತೇದಾರ, ಪುರಸಭೆ ಸದಸ್ಯರು, ಪೌರ ಕಾರ್ಮಿಕರು ಹಾಗೂ ನಾಗರಿಕರಿದ್ದರು.
ಪಟ್ಟಣದಲ್ಲಿಪ್ಲ್ಯಾಸ್ಟಿಕ್ ಶವಯಾತ್ರೆಗೆ ಪುರಸಭೆ ಮುಖ್ಯಾಧಿಕಾರಿ ಎನ್. ಮೂರ್ತಿ ಚಾಲನೆ ನೀಡಿದರು. ಪ್ರಮುಖ ಬೀದಿ, ಮಾರುಕಟ್ಟೆ ಪ್ರದೇಶದಲ್ಲಿಶವಯಾತ್ರೆಯ ಮೆರವಣಿಗೆ ನಡೆಯಿತು. ಪ್ಲ್ಯಾಸ್ಟಿಕ್ ಬಳಕೆ ಶವಯಾತ್ರೆಯಾದಂತೆ ಎನ್ನುವ ಸಂದೇಶದೊಂದಿಗೆ ಪ್ಲ್ಯಾಸ್ಟಿಕ್ ಬಳಕೆದಾರರಿಗೆ ಖಡಕ್ ಸಂದೇಶ ರವಾನಿಸಿದರು. ಬೀದಿ ವ್ಯಾಪಾರಸ್ಥರು, ಕಾಯಿಪಲ್ಲೆವ್ಯಾಪಾರಸ್ಥರು ಸೇರಿ ನಾನಾ ಅಂಗಡಿಗಳ ಮಾಲೀಕರಿಗೂ ಪ್ಲ್ಯಾಸ್ಟಿಕ್ ಬಳಸದಂತೆ ಸಂದೇಶ ರವಾನಿಸಿದರು. ಪುರಸಭೆ ಸದಸ್ಯರಾದ ಶರಣಪ್ಪ ಭೋವಿ, ಅಮೀರಬೇಗ್ ಉಸ್ತಾದ್, ದುರುಗಪ್ಪ ಕಟ್ಟಿಮನಿ, ತಮ್ಮಣ್ಣ ಗುತ್ತೇದಾರ, ಪುರಸಭೆ ಸದಸ್ಯರು, ಪೌರ ಕಾರ್ಮಿಕರು ಹಾಗೂ ನಾಗರಿಕರಿದ್ದರು.