ಆ್ಯಪ್ನಗರ

ಬೋಸರಾಜುರಿಂದ ನೀತಿ ಸಂಹಿತಿ ಉಲ್ಲಂಘನೆ?

ಪಟ್ಟಣದ ರಬ್ಬಣಕಲ್‌ ಬಳಿ ನಡೆಯುತ್ತಿರುವ ಶಾಶ್ವತ ಕುಡಿವ ನೀರಿನ ಕೆರೆ ಕಾಮಗಾರಿ ಪರಿಶೀಲಿಸಿದ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಚುನಾವಣೆ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

Vijaya Karnataka Web 18 Apr 2018, 5:00 am
ಮಾನ್ವಿ ; ಪಟ್ಟಣದ ರಬ್ಬಣಕಲ್‌ ಬಳಿ ನಡೆಯುತ್ತಿರುವ ಶಾಶ್ವತ ಕುಡಿವ ನೀರಿನ ಕೆರೆ ಕಾಮಗಾರಿ ಪರಿಶೀಲಿಸಿದ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಚುನಾವಣೆ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
Vijaya Karnataka Web RAC-RCH17MNV2


ಕೆರೆ ನಿರ್ಮಾಣ ಕಾಮಗಾರಿ ಮಂಗಳವಾರ ಪರಿಶೀಲಿಸಿದ ನಂತರ ಮಾಧ್ಯಮದವರಿಗೆ ಕಾಮಗಾರಿ ಕುರಿತು ಮಾಹಿತಿ ನೀಡಿದರು. ನೀತಿ ಸಂಹಿತೆ ಜಾರಿಯಲ್ಲಿರುವಾಗ ಕಾಮಗಾರಿ ಪರಿಶೀಲಿಸುವಂತಿಲ್ಲ. ಆದರೆ ಎನ್‌.ಎಸ್‌.ಬೋಸರಾಜು ತಮ್ಮ ಪಕ್ಷ ದ ಕಾರ್ಯಕರ್ತರೊಂದಿಗೆ ತೆರಳಿ ಕಾಮಗಾರಿ ಪರಿಶೀಲಿಸಿದ್ದಾರೆ. ಎನ್‌.ಎಸ್‌.ಬೋಸರಾಜು ಅವರ ಜತೆಗೆ ನಯೋಪ್ರಾ ಅಧ್ಯಕ್ಷ ಸೈ.ಇಲಿಯಾಸ್‌ ಖಾದ್ರಿ, ಎಪಿಎಂಸಿ ಅಧ್ಯಕ್ಷ ಭೀರಪ್ಪ ಕಡದಿನ್ನಿ ಕೂಡ ಇದ್ದರು.

------

ಕುಡಿವ ನೀರಿಗೆ ನೀತಿ ಸಂಹಿತಿ ಅನ್ವಯವಾಗುವುದಿಲ್ಲ. ನಾನು ಕೇವಲ ಕಾಮಗಾರಿ ವೀಕ್ಷಿಸಿದ್ದೇನೆ. ಜನರಿಗೆ ನೀರು ಕೊಡುವುದು, ಬಿಡುವುದು ಎಲ್ಲ ಅಧಿಕಾರಿಗಳೇ ಮಾಡುತ್ತಾರೆ.

- ಎನ್‌.ಎಸ್‌.ಬೋಸರಾಜು, ವಿಧಾನ ಪರಿಷತ್‌ ಸದಸ್ಯ

----

ಮಾಹಿತಿ ಸಂಗ್ರಹಿಸಲು ಸ್ಥಳಕ್ಕೆ ಫ್ಲೈಯಿಂಗ್‌ ಸ್ಕ್ವಾಡ್‌ ಕಳುಹಿಸಿದ್ದೇನೆ. ಮಾಹಿತಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

- ವಿ.ಎಸ್‌.ಹಿರೇಮಠ, ಚುನಾವಣಾಧಿಕಾರಿ, ಮಾನ್ವಿ ಕ್ಷೇತ್ರ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ