ಆ್ಯಪ್ನಗರ

ಕಳಪೆ ಬೀಜ ವಿತರಣೆ, ಕ್ರಮಕ್ಕೆ ಆಗ್ರಹ

ಕಳಪೆ ಭತ್ತದ ಬೀಜ ಮಾರಾಟ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ರೈತ ಸಂಘದ ಮುಖಂಡರು, ಸಹಾಯಕ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Vijaya Karnataka 11 Mar 2020, 3:43 pm
ಲಿಂಗಸುಗೂರು ; ಕಳಪೆ ಭತ್ತದ ಬೀಜ ಮಾರಾಟ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ರೈತ ಸಂಘದ ಮುಖಂಡರು, ಸಹಾಯಕ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.
Vijaya Karnataka Web poor seed distribution demand for action
ಕಳಪೆ ಬೀಜ ವಿತರಣೆ, ಕ್ರಮಕ್ಕೆ ಆಗ್ರಹ


ತಾಲೂಕಿನ ರೈತರು, ಪಕ್ಕದ ಸಿಂಧನೂರಿನ ಸೂರ್ಯ ಆಗ್ರೋ ವರ್ತಕರಿಂದ 200 ಚೀಲ ಭತ್ತದ ಬೀಜ ಖರೀದಿಸಿ ನಾಟಿಮಾಡಿದ್ದಾರೆ. ಇದುವರೆಗೂ ತೆನೆ ಬಿಡದೇ ಇರುವುದು ಆತಂಕ ಮೂಡಿಸಿದೆ. ಕಳಪೆ ಬೀಜ ಮಾರಾಟಮಾಡಿದ ಬಗ್ಗೆ ಪರಿಶೀಲಿಸಿ, ತಪ್ಪಿತಸ್ಥ ಸೂರ್ಯ ಆಗ್ರೋ ವರ್ತಕರು ಹಾಗೂ ಕಾವೇರಿ ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿತಾಲೂಕು ರೈತ ಸಂಘದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಹಿರಿಯ ಮುಖಂಡ ಬಿ.ಆರ್‌.ಪಾಟೀಲ್‌, ಬಸನಗೌಡ ಹಿರೇಹೆಸರೂರು, ಮಲ್ಲಿಕಾರ್ಜುನ, ಸುರೇಶ ಪೂಜಾರಿ, ಯಮನಪ್ಪ ಮರಗಂಟನಾಳ, ಶಿವಪ್ಪ ಭೂಪುರ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ