ಆ್ಯಪ್ನಗರ

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ: ಕ್ರಮಕ್ಕೆ ಆಗ್ರಹ

ತಾಲೂಕಿನ ಬಿಜನಗೇರ ಗ್ರಾಮದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘ ಹಾಗೂ ಎಐಡಿವೈಒ ನೇತೃತ್ವದಲ್ಲಿ ರೈತರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.

Vijaya Karnataka 20 Jun 2019, 5:00 am
ರಾಯಚೂರು : ತಾಲೂಕಿನ ಬಿಜನಗೇರ ಗ್ರಾಮದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘ ಹಾಗೂ ಎಐಡಿವೈಒ ನೇತೃತ್ವದಲ್ಲಿ ರೈತರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.
Vijaya Karnataka Web power supply variation for farmers pumps demand for action
ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ: ಕ್ರಮಕ್ಕೆ ಆಗ್ರಹ


ನಂತರ ಜೆಸ್ಕಾಂ ಗ್ರಾಮೀಣ ವೃತ್ತದ ಕಾರ್ಯನಿರ್ವಾಹಕ ಎಂಜಿನಿಯರರಿಗೆ ಮನವಿ ಸಲ್ಲಿಸಿ, ವಿದ್ಯುತ್‌ ಲೈನ್‌ ದುರಸ್ತಿಪಡಿಸಲು ಆಗ್ರಹಿಸಿದರು. ಬಿಜನಗೇರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಗಾಳಿ ಮಳೆಗೆ ವಿದ್ಯುತ್‌ ತಂತಿ ಹರಿಯುವುದು, ಕಂಬಗಳು ಉರುಳುವುದು ನಡೆಯುತ್ತಿದ್ದು, ದುರಸ್ತಿ ಮಾಡಲು ಹಲವು ದಿನಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಬರೆ:
ಗ್ರಾಮದಲ್ಲಿ ಒಬ್ಬರೂ ಹಿರಿಯ ಮತ್ತು ಕಿರಿಯ ಮಾರ್ಗದಾಳುಗಳಿಲ್ಲ. ವಿದ್ಯುತ್‌ಗೆ ಸಂಬಂಧಪಟ್ಟ ಸಣ್ಣ ಪುಟ್ಟ ಸಮಸ್ಯೆಗಳಿಗೂ ಗ್ರಾಮಸ್ಥರು ಪರದಾಡುವಂತಾಗಿದೆ. ಕೊಳವೆಬಾವಿಯಲ್ಲಿನ ಅಲ್ಪಸ್ವಲ್ಪ ನೀರನ್ನು ಬಳಸಿ ತರಕಾರಿ ಮತ್ತು ಇನ್ನಿತರ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸತತ ಬರಗಾಲ ರೈತರನ್ನು ಕಂಗೆಡಿಸಿದ್ದು, ವಿದ್ಯುತ್‌ ಪೂರೈಕೆ ಸರಿಯಿಲ್ಲದಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಒತ್ತಾಯ: ಆದ್ದರಿಂದ ಕೂಡಲೇ ಗ್ರಾಮದಲ್ಲಿ ಲೈನ್‌ಮನ್‌ ನೇಮಿಸಬೇಕು. ವಿದ್ಯುತ್‌ ವ್ಯತ್ಯಯವಾಗದಂತೆ ಲೋಪದೋಷ ಸರಿಪಡಿಸಬೇಕು. ಗಾಳಿ ಮಳೆಗೆ ಉಂಟಾಗುವ ಸಮಸ್ಯೆಗಳನ್ನು ತಕ್ಷ ಣ ದುರಸ್ತಿಗೊಳಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಸಂಘಟನೆಗಳ ಮುಖಂಡರಾದ ಚನ್ನಬಸವ ಜಾನೇಕಲ್‌, ರಾಮಣ್ಣ ಮರ್ಕಂದಿನ್ನಿ ಗ್ರಾಮಸ್ಥರಾದ ಹುಸೇನಪ್ಪ, ಮುರುಳಿ, ಬಡೇಸಾಬ್‌, ಹನುಮಂತ, ವೀರೇಶ, ರಮೇಶ, ಕೃಷ್ಣಪ್ಪ, ಆಂಜನೇಯ, ಪರಸಪ್ಪ, ಇಮಾಮ್‌ ಪಾಷಾ, ವೆಂಕಟೇಶ, ತಿಕ್ಕಯ್ಯ ಸೇರಿ ಮುಂತಾದವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ