ಮಳೆಯ ನಡುವೆ ದಸರಾಕ್ಕೆ ಸಿದ್ಧತೆ
ಸುರಿಯುತ್ತಿರುವ ಮಳೆಯ ನಡುವೆ ತಾಲೂಕಿನ ಜನತೆ ನಾಡಹಬ್ಬ ದಸರಾ ಹಬ್ಬಕ್ಕೆ ಭರದ ಸಿದ್ಧತೆ ನಡೆಸಿದ್ದಾರೆ. ಆಯುಧ ಪೂಜೆ ನಿಮಿತ್ತ ನಾನಾ ಸಾಮಗ್ರಿಗಳ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ.
Vijaya Karnataka 18 Oct 2018, 5:00 am
ಲಿಂಗಸುಗೂರು : ಸುರಿಯುತ್ತಿರುವ ಮಳೆಯ ನಡುವೆ ತಾಲೂಕಿನ ಜನತೆ ನಾಡಹಬ್ಬ ದಸರಾ ಹಬ್ಬಕ್ಕೆ ಭರದ ಸಿದ್ಧತೆ ನಡೆಸಿದ್ದಾರೆ. ಆಯುಧ ಪೂಜೆ ನಿಮಿತ್ತ ನಾನಾ ಸಾಮಗ್ರಿಗಳ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ.
ಪಟ್ಟಣದ ಬಸ್ನಿಲ್ದಾಣ ಹಾಗೂ ಗಡಿಯಾರ ಚೌಕದಲ್ಲಿ ಹೂವು, ಹಣ್ಣು, ತೆಂಗಿನ ಗರಿ, ಬಾಳೆದಿಂಡು, ಬಾಳೆಗಿಡ, ಕುಂಬಳಕಾಯಿ ಮಾರಾಟ ಮಾಡುವ ಹತ್ತಾರು ಅಂಗಡಿಗಳನ್ನು ತೆರೆಯಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಎಲ್ಲ ವಸ್ತುಗಳ ಬೆಲೆಯೂ ದುಪ್ಪಟ್ಟಾಗಿದೆ. ಸೇಬು, ಮೂಸಂಬಿ, ಸೀತಾಫಲ, ಬಾಳೆಹಣ್ಣು, ದ್ರಾಕ್ಷಿ, ಚಂಡು, ಮಲ್ಲಿಗೆ, ಕನಕಾಂಬರಿ, ಸೇವಂತಿ ಹೂಗಳ ದರವೂ ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.
ಪಟ್ಟಣದ ಬಸ್ನಿಲ್ದಾಣ ಹಾಗೂ ಗಡಿಯಾರ ಚೌಕದಲ್ಲಿ ಹೂವು, ಹಣ್ಣು, ತೆಂಗಿನ ಗರಿ, ಬಾಳೆದಿಂಡು, ಬಾಳೆಗಿಡ, ಕುಂಬಳಕಾಯಿ ಮಾರಾಟ ಮಾಡುವ ಹತ್ತಾರು ಅಂಗಡಿಗಳನ್ನು ತೆರೆಯಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಎಲ್ಲ ವಸ್ತುಗಳ ಬೆಲೆಯೂ ದುಪ್ಪಟ್ಟಾಗಿದೆ. ಸೇಬು, ಮೂಸಂಬಿ, ಸೀತಾಫಲ, ಬಾಳೆಹಣ್ಣು, ದ್ರಾಕ್ಷಿ, ಚಂಡು, ಮಲ್ಲಿಗೆ, ಕನಕಾಂಬರಿ, ಸೇವಂತಿ ಹೂಗಳ ದರವೂ ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.