ಆ್ಯಪ್ನಗರ

'ಡಿಜಿಟಲ್‌ ವಹಿವಾಟಿಗೆ ಅಗತ್ಯ ಭೂಮಿಕೆ ಸಿದ್ಧಪಡಿಸಿ'

ಜಿಲ್ಲೆಯಲ್ಲಿಡಿಜಿಟಲ್‌ ವಹಿವಾಟಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಲು ಸಂಬಂಧಿಸಿದ ಇಲಾಖೆಗಳು ಶೀಘ್ರ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ್‌ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Vijaya Karnataka 22 Jan 2020, 3:28 pm
ರಾಯಚೂರು; ಜಿಲ್ಲೆಯಲ್ಲಿಡಿಜಿಟಲ್‌ ವಹಿವಾಟಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಲು ಸಂಬಂಧಿಸಿದ ಇಲಾಖೆಗಳು ಶೀಘ್ರ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ್‌ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Vijaya Karnataka Web prepare the land required for digital transactions
'ಡಿಜಿಟಲ್‌ ವಹಿವಾಟಿಗೆ ಅಗತ್ಯ ಭೂಮಿಕೆ ಸಿದ್ಧಪಡಿಸಿ'


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಸೋಮವಾರ ಸಂಜೆ ಹಮ್ಮಿಕೊಂಡಿದ್ದ ಜಿಲ್ಲೆಯ ಸಂಪೂರ್ಣ ಡಿಜಿಟಲೈಜೇಷನ್‌ ಯೋಜನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೂಚನೆ: ಡಿಜಿಟಲ್‌ ವ್ಯವಹಾರವು ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುತ್ತದೆ, ಇದರಿಂದ ನಗದು ವಹಿವಾಟು ಕಡಿಮೆಯಾಗಲಿದೆ, ಈ ದಿಸೆಯಲ್ಲಿನಗದು ರಹಿತ ವಹಿವಾಟಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾಆಟೋ ಚಾಲಕರಿಗೆ ಕ್ಯೂಆರ್‌ ಬಾರ್‌ಕೊಡ್‌ ಒದಗಿಸಬೇಕು, ವಾಣಿಜ್ಯ ವಹಿವಾಟು ನಡೆಸುವ ರೀಟೆಲ್‌ ಮಳಿಗೆಗಳ ವ್ಯಾಪಾರಕ್ಕೆ ಸ್ವೆತ್ರೖಪಿಂಗ್‌ ಮಿಷನ್‌ ಕೊಡಿಸಿಕೊಡುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನುಷ್ಠಾನಗೊಳಿಸಿ: ಜಿಲ್ಲೆಯಲ್ಲಿಸಾಮಾನ್ಯವಾಗಿ ಎಲ್ಲಾಕುಟುಂಬದವರು ಯಾವುದಾದರೊಂದು ಬ್ಯಾಂಕ್‌ಗಳಲ್ಲಿಖಾತೆ ಹೊಂದಿರುತ್ತಾರೆ, ಅಲ್ಲದೇ ಸರಕಾರದಿಂದ ವಿದ್ಯಾರ್ಥಿ ವೇತನ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಬ್ಯಾಂಕ್‌ ಖಾತೆ ಇದ್ದೆ ಇರುತ್ತದೆ, ಹಾಗಾಗಿ ಅವರಲ್ಲಿನಗದುರಹಿತ ವ್ಯವಹಾರ ಮಾಡಿದರೆ ಅದರಿಂದಾಗುವ ಅನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸಿ, ನಗದು ರಹಿತ ವಹಿವಾಟನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.

ಸುಲಭ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನೋಡಲ್‌ ಅಧಿಕಾರಿ ಪ್ರೇಮ್‌ ಸಿಂಗ್‌ ನಾಯಕ್‌ ಮಾತನಾಡಿ, ಇಂದಿನ ದಿನಮಾನಗಳಲ್ಲಿನಗದು ರಹಿತ ವ್ಯವಹಾರ ಮಾಡುವುದು ಅತ್ಯಂತ ಉಪಯುಕ್ತ, ನಗದು ವ್ಯವಹಾರ ಮಾಡುವಾಗ ಉಂಟಾಗುವ ಸಮಸ್ಯೆ ಇಲ್ಲಿಕಂಡು ಬರುವುದಿಲ್ಲ, ಅಲ್ಲದೇ ಆದಾಯವೂ ಹೆಚ್ಚಾಗಲಿದ್ದು, ವ್ಯವಹಾರವು ಸುಲಭವಾಗುತ್ತದೆ ಎಂದರು. ಆರ್‌ಬಿಐನ ಲೀಡ್‌ ಡಿಸ್ಟಿಕ್‌ ಆಫೀಸರ್‌ ಆನಂದ್‌ ನಿಮ್‌ ಮಾತನಾಡಿ, ಬ್ಯಾಂಕ್‌ ಖಾತೆ ಹೊಂದಿರುವ ಎಲ್ಲಗ್ರಾಹಕರಿಗೂ ಸಂಬಂಧಿಸಿದ ಬ್ಯಾಂಕುಗಳು ಕಡ್ಡಾಯವಾಗಿ ಎಟಿಎಂ ಕಾರ್ಡ್‌ಗಳನ್ನು ಒದಗಿಸಲೇಬೇಕು. ಎಲ್ಲನಾಗರಿಕರು ಬ್ಯಾಂಕ್‌ ಖಾತೆಯನ್ನು ಹೊಂದಬೇಕೆಂದು ಹೇಳಿದರು.

ತಾಕೀತು: ನಬಾರ್ಡ್‌ ಎಜಿಎಂ ಸತೀಶನ್‌ ಮಾತನಾಡಿ, ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡಲು ನಬಾರ್ಡ್‌ ವತಿಯಿಂದ ಸ್ವೆತ್ರೖಪಿಂಗ್‌ ಮಿಷನ್‌ಗೆ ಶೇ.90 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಎಲ್ಲಾಮಳಿಗೆಗಳ ಮಾಲಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ನಗದು ರಹಿತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು. ಕೇಂದ್ರ ಸರಕಾರದ ಮಹಾತ್ವಕಾಂಕ್ಷಿ ಜಿಲ್ಲೆಯೋಜನೆಯಡಿ ರಾಯಚೂರು ಆಯ್ಕೆಯಾಗಿರುವುದರಿಂದ ವಿವಿಧ ಸೂಚ್ಯಂಕಗಳ ಏರಿಕೆಗೆ ನಿಗದಿಪಡಿಸಿರುವ ಮಾನದಂಡಗಳ ಉತ್ತೇಜನಕ್ಕೆ ಪ್ರತಿ ಮಾಹೆ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತದೆ. ಈ ಸಭೆಯಲ್ಲಿಜಿಲ್ಲೆಯ ಅಭಿವೃದ್ಧಿ ಅಂಶಗಳನ್ನು ದಾಖಲಿಸಬೇಕು ಹಾಗಾಗಿ ಮಾಹಿತಿ ನೀಡುವಾಗ ನಿಖರವಾಗಿ ನೀಡಬೇಕು. ತಪ್ಪಾಗಿ ನೀಡಿದ್ದಲ್ಲಿ3ನೇ ವ್ಯಕ್ತಿಯ ತಪಾಸಣಾ ವರದಿಯಲ್ಲಿಅದು ಕಂಡುಬರುತ್ತದೆ. ಹಾಗಾಗಿ, ನಿಖರ ಮಾಹಿತಿ ನೀಡುವಂತೆ ಅವರು ಎಲ್ಲಬ್ಯಾಂಕರುಗಳಿಗೆ ತಾಕೀತು ಮಾಡಿದರು.

ಪ್ರೊಬೇಷನರಿ ಐಎಎಸ್‌ ಅಧಿಕಾರಿ ಯತೀಶ್‌ ಕುಮಾರ್‌, ಪ್ರಗತಿ ಕೃಷ್ಣ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್‌ ಕೋಟ್ರಾ ನಾಯಕ್‌, ರಾಯಚೂರು ಅಂಚೆ ಇಲಾಖೆಯ ಅಧೀಕ್ಷ ಸೇತು ಮಾದವನ್‌ ಸೇರಿ ನಾನಾ ಬ್ಯಾಂಕ್‌ಗಳ ಮ್ಯಾನೇಜರ್‌ಗಳು ಹಾಗೂ ಅಧಿಕಾರಿಗಳು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ