ಆ್ಯಪ್ನಗರ

ರಾಸಾಯಿನಿಕ ಮುಕ್ತ ಕೃಷಿಗೆ ಆಧ್ಯತೆ ನೀಡಿ

ರೈತರು ರಾಸಾಯನಿಕ ಮುಕ್ತ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ ಹೇಳಿದರು.

Vijaya Karnataka 13 Jun 2019, 5:00 am
ಲಿಂಗಸುಗೂರು : ರೈತರು ರಾಸಾಯನಿಕ ಮುಕ್ತ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ ಹೇಳಿದರು.
Vijaya Karnataka Web priority to chemical free agriculture
ರಾಸಾಯಿನಿಕ ಮುಕ್ತ ಕೃಷಿಗೆ ಆಧ್ಯತೆ ನೀಡಿ


ಸ್ಥಳೀಯ ಕೃಷಿ ವಿಸ್ತರಣಾ ಶಿಕ್ಷ ಣ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುಂಗಾರು ಬೀಜ ದಿನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರಿಗಾಗಿ ಹೊಸ ಹೊಸ ತಳಿಗಳ ಜೊತೆಗೆ ವಿವಿಧ ತಾಂತ್ರಿಕತೆಗಳನ್ನು ಕಂಡುಹಿಡಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರೈತರು ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಆರ್ಥಿಕವಾಗಿ ಲಾಭದಾಯಕ ಕೃಷಿ ಮಾಡಬಹುದು ಎಂದು ಸಲಹೆ ನೀಡಿದರು.

ಕೃಷಿ ವಿಸ್ತರಣಾ ಶಿಕ್ಷ ಣ ಕೇಂದ್ರದ ಮುಖ್ಯಸ್ಥ ಡಾ. ಗಿರೀಶ್‌ ಎನ್‌. ಮರಡ್ಡಿ ಮಾತನಾಡಿ, ಉತ್ತಮ ತಳಿಗಳ ಬೀಜಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಇಳುವರಿ ಪಡೆಯುಬೇಕು. ಬಿತ್ತನೆ ಬೀಜಕ್ಕೆ ಜೈವಿಕ ಗೊಬ್ಬರಗಳಾದ ರೈಜೋಬಿಯಂ ಮತ್ತು ಪಿಎಸ್‌ಬಿ ಹಾಗೂ ಪೀಡೆನಾಶಕವಾದ ಟ್ರೈಕೋಡರ್ಮಾ ಇವುಗಳಿಂದ ಬೀಜೋಪಚಾರ ಮಾಡನೇಕು. ಇದರಿಂದ ಬೆಳೆಗಳಿಗೆ ರೋಗ ಬಾಧೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಮಾರುಕಟ್ಟೆಯ ಬೇಡಿಕೆ ಅರಿತು ರೈತರ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಯೋಗೀಶ್ವರ, ಕೇಂದ್ರದ ವಿಜ್ಞಾನಿ ಡಾ.ವಾಣಿಶ್ರೀ ಎಸ್‌., ಸಿಬ್ಬಂದಿಗಳಾದ ಅರವಿಂದ ರಾಥೋಡ್‌, ಪ್ರಗತಿ ಪರ ರೈತರಾದ ಶಾಂತಗೌಡ, ಮಲ್ಲಣ್ಣ, ನಾಗರಡ್ಡೆಪ್ಪ, ಅಮರೇಶ, ರಾಮಣ್ಣ, ಬಸವರಾಜ, ಶಂಕ್ರಪ್ಪ, ಹೊಳೆಯಪ್ಪ, ಕೆರೆಯಪ್ಪ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ