ಆ್ಯಪ್ನಗರ

ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳ ತರಾಟೆಗೆ

ಬರ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಕುಡಿವ ನೀರಿನ ಕಾಮಗಾರಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಬೇಜವಾಬ್ದಾರಿಗೆ ಸಚಿವ ವೆಂಕಟರಾವ್‌ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 10 Dec 2018, 4:49 pm
ಸಿಂಧನೂರು : ಬರ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಕುಡಿವ ನೀರಿನ ಕಾಮಗಾರಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಬೇಜವಾಬ್ದಾರಿಗೆ ಸಚಿವ ವೆಂಕಟರಾವ್‌ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web progress review meeting
ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳ ತರಾಟೆಗೆ


ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಶನಿವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ನಡೆದ ನಾನಾ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಮಗಾರಿ ವಿಳಂಬದ ಕುರಿತು ಸಚಿವರು ಮಾಹಿತಿ ಪಡೆದರು. ಪ್ರಕೃತಿ ವಿಕೋಪ ನಿಧಿಯಡಿ ಬಿಡುಗಡೆಯಾಗಿರುವ 40 ಲಕ್ಷ ಅನುದಾನ ಹಾಗೂ ಇತರೆ ಅನುದಾನದಲ್ಲಿ ಕೈಗೊಂಡಿರುವ ಕುಡಿವ ನೀರಿನ ಕಾಮಗಾರಿ ಕುರಿತು ಎಇಇ ಹನುಮರೆಡ್ಡಿ ಅವರನ್ನು ವಿಚಾರಿಸಿದರು. ನಾನಾ ಕಡೆಯ 15 ಕಾಮಗಾರಿಗಳ ಪೈಕಿ ಕೇವಲ 3 ಕಾಮಗಾರಿಯಗಷ್ಟೇ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕನ್ನಾರಿ, ಚಿಂತಮಾನದೊಡ್ಡಿಯಲ್ಲಿಯೂ ಕಾಮಗಾರಿ ಆಗದೆ ಇರುವ ಬಗ್ಗೆ ಸಚಿವರು ಅಸಮಾಧಾನಗೊಂಡ, ಸಾರ್ವಜನಿಕರು ಕುಡಿವ ನೀರಿಗಾಗಿ ಪರದಾಡುತಿದ್ದಾರೆ. ತುರ್ತು ಕಾಮಗಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಯುಜಿಡಿ ಕಾಮಗಾರಿ: ನಗರದಲ್ಲಿ ನಡೆದಿರುವ ಕುಡಿವ ನೀರು ಹಾಗೂ ಯುಜಿಡಿ ಯೋಜನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಕೆಲಸ ವಿಳಂಬವಾಗುತ್ತಿದೆ ಎಂಬುದರ ಬಗ್ಗೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿ ಸಚಿವರು, ಕುಡಿವ ನೀರಿನ ಕೆರೆ ಕುಸಿದು ಹೋಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಕೆರೆ ಕಾಮಗಾರಿ ಕಳಪೆಯಾಗಿದ್ದರಿಂದ ಈ ಸಮಸ್ಯೆ ತಲೆದೋರಿದೆ. ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಇಇ ಪ್ರಭುಶಂಕರ ಅವರಿಗೆ ತಾಕೀತು ಮಾಡಿದರು. ಟೆಂಡರ್‌ ನಿಯಮಾವಳಿಯಂತೆ ಕೆರೆ ಯಾಕೆ ನಿರ್ಮಿಸಿಲ್ಲ? ಅರ್ಧ ಕೆರೆ ನಿರ್ಮಿಸಲು ಅನುಮತಿ ನೀಡಿದವರ ಬಗ್ಗೆ ಮಾಹಿತಿ ಕೇಳಿದರು.

ನಗರೋತ್ಥಾನ-3 ಹಂತದ ಕಾಮಗಾರಿ, ಎಚ್‌ಕೆಆರ್‌ಡಿಬಿ ಯೋಜನೆ ಕಾಮಗಾರಿ ಕುರಿತು ಪೌರಾಯುಕ್ತ ಆರ್‌.ವಿರೂಪಾಕ್ಷ ಮೂರ್ತಿ ಮಾಹಿತಿ ನೀಡಿದರು. 10ನೇ ವಾರ್ಡ್‌ನಲ್ಲಿ ಪಿಡಬ್ಲ್ಯುಡಿ ಇಲಾಖೆಯಿಂದ ಕಾಮಗಾರಿ ಕಳಪೆ ಮಟ್ಟದಿಂದ ನಡೆದಿದ್ದು, ಕೂಡಲೇ ಇಇ ಭೇಟಿ ನೀಡಿ ಪರಿಶೀಸುವಂತೆ ಸಚಿವರು ಹೇಳಿದರು. ಈ ವೇಳೆ ಸಹಾಯಕ ಆಯುಕ್ತ ಎಂ.ಪಿ.ಮಾರುತಿ, ತಹಸೀಲ್ದಾರ್‌ ಶಿವಾನಂದ ಸಾಗರ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

---

ಎಂಜಿನಿಯರ್‌ ಆಗಿದ್ದಕ್ಕೆ ಸೆನ್ಸ್‌ ಇಲ್ವಾ?

ನಗರದ ತಹಸಿಲ್‌ ಕಚೇರಿ ಮುಂದೆ ಬಸ್‌ ತಂಗುದಾಣ ನಿರ್ಮಿಸಿದ ಕಾರಣಕ್ಕೆ ಸಚಿವ ವೆಂಕಟರಾವ್‌ ನಾಡಗೌಡ, ಎಇಇ ವಿಜಯ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು. ಜನ ಒಲ್ಲದ ಕಡೆ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಇದರಿಂದ ಯಾರಿಗೂ ಉಪಯೋಗಿಲ್ಲ. ಎಂಜಿನಿಯರ್‌ ಆಗಿದ್ದರೂ ಬುದ್ಧಿ ಇಲ್ವಾ? ನೀವೇ ಹೋಗಿ ಅದರೊಳಗೆ ಕುಳಿತುಕೊಳ್ಳಿ. ಸೆನ್ಸ್‌ ಇಲ್ಲದೇ ಕೆಲಸ ಮಾಡುತ್ತೀರಿ ಎಂದರು. ಎಇಇ ಸಮಜಾಯಷಿ ಉತ್ತರ ನೀಡಲು ಮುಂದಾದರೂ ಪ್ರಯೋಜನವಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ