ಆ್ಯಪ್ನಗರ

ನಿಷೇಧಿತ ಪ್ಲ್ಯಾಸ್ಟಿಕ್‌, ತಂಬಾಕು ಉತ್ಪನ್ನ ವಶ

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು, ಮುಖ್ಯರಸ್ತೆಯಲ್ಲಿರುವ ಕಿರಾಣಿ ಅಂಗಡಿ ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ, 1.5 ಲಕ್ಷ ರೂ. ಮೌಲ್ಯದ ಪ್ಲ್ಯಾಸ್ಟಿಕ್‌, ಬೀಡಿ, ಸಿಗರೇಟ್‌ ಹಾಗೂ ನಸಿ ಪುಡಿಯನ್ನು ವಶಪಡಿಸಿಕೊಂಡರು.

Vijaya Karnataka 16 Oct 2019, 2:31 pm
ಸಿರವಾರ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು, ಮುಖ್ಯರಸ್ತೆಯಲ್ಲಿರುವ ಕಿರಾಣಿ ಅಂಗಡಿ ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ, 1.5 ಲಕ್ಷ ರೂ. ಮೌಲ್ಯದ ಪ್ಲ್ಯಾಸ್ಟಿಕ್‌, ಬೀಡಿ, ಸಿಗರೇಟ್‌ ಹಾಗೂ ನಸಿ ಪುಡಿಯನ್ನು ವಶಪಡಿಸಿಕೊಂಡರು.
Vijaya Karnataka Web prohibited plastics and tobacco products
ನಿಷೇಧಿತ ಪ್ಲ್ಯಾಸ್ಟಿಕ್‌, ತಂಬಾಕು ಉತ್ಪನ್ನ ವಶ


ಸೋಮವಾರ ಪಟ್ಟಣದ 3 ಕ್ಕೂ ಅಧಿಕ ಗೋದಾಮು, ಬಸ್‌ನಿಲ್ದಾಣದ ಹತ್ತಿರ ಇರುವ 20 ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಯಿತು. ಪರಿಶೀಲನೆ ವೇಳೆ ಬೇಕರಿ, ಕಿರಾಣಿ ಅಂಗಡಿಗಳಲ್ಲಿಬಳಸುತ್ತಿದ್ದ ನಿಷೇಧಿತ 50 ಮೈಕ್ರಾನ್‌ಗಿಂತ ಕಡಿಮೆ ಇರುವ 50 ಸಾವಿರಕ್ಕೂ ಅಧಿಕ ಮೌಲ್ಯದ ಪ್ಲ್ಯಾಸ್ಟಿಕ್‌ ವಶಕ್ಕೆ ಪಡೆಯಲಾಯಿತು. ಇದೇ ವೇಳೆ 3 ಗೋದಾಮುಗಳಲ್ಲಿನ 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಗುಟ್ಕಾ, ಬೀಡಿ, ಸಿಗರೇಟ್‌ ಪ್ಯಾಕ್‌ ಮತ್ತು ನಸಿಪುಡಿಯನ್ನು ವಶಪಡಿಸಿಕೊಳ್ಳಲಾಯಿತು.

ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸರೋಜಾ ಪಾಟೀಲ್‌, ಈಗಾಗಲೇ ಎಲ್ಲವ್ಯಾಪಾರಸ್ಥರಿಗೆ ಸಂಪೂರ್ಣ ನೋಟಿಸ್‌ ಜಾರಿ ಮಾಡಲಾಗಿದೆ. ಯಾರಿಗೂ ಯಾವುದೇ ರೀತಿಯ ದಂಡ ವಿಧಿಸಿಲ್ಲ. ಮುಂದಿನ 15 ದಿನದೊಳಗೆ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಲಾಗುವುದು. ಒಂದು ವೇಳೆ ವ್ಯಾಪಾರಸ್ಥರು ನಿಯಮ ಮೀರಿದರೆ ದಂಡ ವಿಧಿಸಲಾಗುವುದು ಎಂದರು.

ಆರೋಗ್ಯ ನಿರೀಕ್ಷಕರಾದ ಸುನಿತಾ ಸಜ್ಜನ್‌, ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳಾದ ಶರಣಬಸವ, ಸಚಿನ್‌, ವೀರೇಶ, ಪದ್ಮ, ಲಕ್ಷಿತ್ರ್ಮ ಮೈಬೂಬ್‌, ಸುಧಾಕರ್‌ ಮುಂತಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ