ಆ್ಯಪ್ನಗರ

ಬಡ್ತಿ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ

ಜೇಷ್ಠತಾ ಪಟ್ಟಿಯಲ್ಲಿರುವ ಕರವಸೂಲಿಗಾರರಿಗೆ ಸೇವಾ ಹಿರಿತನ ಹಾಗೂ ಮೀಸಲಾತಿ ಪಟ್ಟಿಯಂತೆ ಬಡ್ತಿ ನೀಡುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ನಗರದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

Vijaya Karnataka 27 Aug 2019, 3:23 pm
ರಾಯಚೂರು : ಜೇಷ್ಠತಾ ಪಟ್ಟಿಯಲ್ಲಿರುವ ಕರವಸೂಲಿಗಾರರಿಗೆ ಸೇವಾ ಹಿರಿತನ ಹಾಗೂ ಮೀಸಲಾತಿ ಪಟ್ಟಿಯಂತೆ ಬಡ್ತಿ ನೀಡುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ನಗರದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
Vijaya Karnataka Web promotion is an indefinite course of demand for fulfillment of various demands
ಬಡ್ತಿ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ


ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಧರಣಿ ನಡೆಸಿದ ಪದಾಧಿಕಾರಿಗಳು, ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜೂನ್‌ ತಿಂಗಳಲ್ಲಿ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ನಡೆಸಿದ್ದ ಸಂದರ್ಭ ಜಿ.ಪಂ ಸಿಇಒ ಹಾಗೂ ಉಪಕಾರ್ಯದರ್ಶಿ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ತಿಂಗಳೊಳಗಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿತ್ತು. ಅದರಂತೆ ಇಎಫ್‌ಎಂಎಸ್‌ ಮೂಲಕ ಗ್ರಾ.ಪಂ ಸಿಬ್ಬಂದಿಗಳಿಗೆ ಹಂತ ಹಂತದಲ್ಲಿ ವೇತನ ಪಾವತಿಸುವ ಪ್ರಕ್ರಿಯೆ ಸಮಾಧಾನಕರ. ಆದರೆ ಇನ್ನುಳಿದ ಹಲವಾರು ಬೇಡಿಕೆಗಳನ್ನು ಇಲ್ಲಿವರೆಗೂ ಈಡೇರಿಸಿಲ್ಲ.

ಕರವಸೂಲಿಗರ ವೃಂದದಿಂದ ಕಾರ್ಯದರ್ಶಿ-2 ಹಾಗೂ ಲೆಕ್ಕ ಸಹಾಯಕರ ವೃಂದಕ್ಕೆ ಬಡ್ತಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ಕೂಡಲೇ ಬಡ್ತಿ ಪ್ರಕ್ರಿಯೆ ಆರಂಭಿಸಬೇಕು. ಪಂಚತಂತ್ರದಲ್ಲಿ ಬಾಕಿ ಉಳಿದ ಎಲ್ಲ ಅರ್ಹ ನೌಕರರ ಮಾಹಿತಿ ಜಿ.ಪಂ ಸಿಇಒ ಲಾಗಿನ್‌ಗೆ ತರಿಸಿಕೊಂಡು ಅನುಮೋದನೆ ನೀಡಬೇಕು. ಜು.23ರ ಸುತ್ತೋಲೆಯಂತೆ ಜಿ.ಪಂನಲ್ಲಿ ಬಾಕಿಯಿರುವ ಹಾಗೂ ಗ್ರಾ.ಪಂ ಹಂತದಿಂದ ಅರ್ಹ ನೌಕರರ ಪ್ರಸ್ತಾವನೆಗಳನ್ನು ತರಿಸಿ ಅನುಮೋದನೆ ನೀಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಪದಾಧಿಕಾರಿಗಳಾದ ಅಮರೇಶ ಪಾಟೀಲ, ಮಹಾದೇವಪ್ಪ ಜಂಬಲದಿನ್ನಿ, ಕೆ.ನಾರಾಯಣ, ಡಿ.ಎಸ್‌.ಶರಣಬಸವ, ಆರ್‌.ಎಸ್‌.ಬಸವರಾಜ, ಶೇಕ್ಷಾಖಾದ್ರಿ, ಎಚ್‌.ಪದ್ಮಾ, ಗಿರಿಯಪ್ಪ ಪೂಜಾರಿ, ಮಲ್ಲಪ್ಪ ಹೂಗಾರ, ಶಿವಾರೆಡ್ಡಿ, ಮಲ್ಲಿಕಾರ್ಜುನ, ನಿತ್ಯಾನಂದ, ಬಾಲಪ್ಪ ಸೇರಿ ಅನೇಕರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ