ಆ್ಯಪ್ನಗರ

ಬರ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಬುಧವಾರ ರೈತ ಸಭೆ ನಡೆಯಿತು. ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್‌ ಮಾತನಾಡಿ, ಸರಕಾರದ ನಾನಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರದ ಜನ ಹಿತ ಕಾಪಾಡುವ ಬದಲು, ಶಾಸಕರು ರೆಸಾರ್ಟ್‌ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವುದು ವಿಷಾಧನೀಯ ಎಂದರು.

Vijaya Karnataka 11 Jul 2019, 5:00 am
ಲಿಂಗಸುಗೂರು : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಬುಧವಾರ ರೈತ ಸಭೆ ನಡೆಯಿತು. ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್‌ ಮಾತನಾಡಿ, ಸರಕಾರದ ನಾನಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರದ ಜನ ಹಿತ ಕಾಪಾಡುವ ಬದಲು, ಶಾಸಕರು ರೆಸಾರ್ಟ್‌ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವುದು ವಿಷಾಧನೀಯ ಎಂದರು.
Vijaya Karnataka Web proposal for drought free karnataka
ಬರ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ


ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬರಗಾಲಕ್ಕೆ ಪಯಾರ್ಯವಾಗಿ ಬರ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ.

ರಾಜ್ಯದಲ್ಲಿ ಬರ ಮುಕ್ತ ಆಂದೋಲನ ಸಮಿತಿ ರಚನೆ ಮಾಡಿ ಪುರಾತನ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವುದು ಹಾಗೂ ಕೆರೆಗಳ ಹೂಳೆತ್ತುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ರೈತರ ಹೊಲಗಳು ಸೇರಿದಂತೆ ಎಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿ ಮರಗಿಡಗಳನ್ನು ನಡೆವ ಹಾಗೂ ರೈತರಿಗೆ ಅರಿವು ಮೂಡಿಸುವ ಸಂಕಲ್ಪವನ್ನು ಕೈಗೊಳ್ಳಲಾಗಿದೆ. ಎಂದರು.

ರೈತ ಮುಖಂಡರಾದ ಅಮರಣ್ಣ ಗುಡಿಹಾಳ, ವೀರನಗೌಡ ಹಟ್ಟಿ, ಮಲ್ಲನಗೌಡ ಗೌಡೂರು, ಲಕ್ಷ ್ಮಣಗೌಡ, ವೆಂಕಟರಾವ್‌, ಭೀಮೇಶ್ವರರಾವ್‌, ಬಸನಗೌಡ ಮಾಲೀ ಪಾಟೀಲ್‌, ಲಿಂಗಾರೆಡ್ಡಿ ಪಾಟೀಲ್‌, ಚಂದಾವಲಿಸಾಬ, ಶಂಕ್ರಪ್ಪ ದೇವತಗಲ್‌, ಹುಚ್ಚರೆಡ್ಡಿ ಅಮೀನಗಡ, ಕುಪ್ಪಣ್ಣಗೋನವಾಟ್ಲ ಸೇರಿ ಇತರರು ಇದ್ದರು.

ಬೃಹತ್‌ ಸಮಾವೇಶ

ಜು.21ರಂದು ಬೆಳಗಾವಿಯಲ್ಲಿ ರೈತರ ಬೃಹತ್‌ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶವನ್ನು ಖ್ಯಾತ ಜಲತಜ್ಞ ರಾಜೇಂದ್ರ ಸಿಂಗ್‌ ಉದ್ಘಾಟಿಸಲ್ಲಿದ್ದಾರೆ. ಇವರ ಮಾರ್ಗದರ್ಶನದಲ್ಲಿ ರೈತರಿಗೆ ಶಿಬಿರಗಳನ್ನು ಏರ್ಪಡಿಸಿ ಬರಮುಕ್ತ ಕರ್ನಾಟಕಕ್ಕೆ ಪಣತೊಡಲಾಗಿದೆ ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ