ಆ್ಯಪ್ನಗರ

ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಕುಡಿವ ನೀರು ಹಾಗೂ ಕೃಷಿಗೆ ಇಲ್ಲಿನ ಮುಖ್ಯ ಕಾಲುವೆ 104ನೇ ಮೈಲು ಮತ್ತು ಪೋತ್ನಾಳ ಹಳ್ಳಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕಾರ್ಯಕರ್ತರು ದಿದ್ದಗಿ ಕ್ರಾಸ್‌ ಬಳಿಯ ರಾಜ್ಯ ಹೆದ್ದಾರಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

Vijaya Karnataka 7 Sep 2018, 5:00 am
ಸಿಂಧನೂರು : ಕುಡಿವ ನೀರು ಹಾಗೂ ಕೃಷಿಗೆ ಇಲ್ಲಿನ ಮುಖ್ಯ ಕಾಲುವೆ 104ನೇ ಮೈಲು ಮತ್ತು ಪೋತ್ನಾಳ ಹಳ್ಳಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕಾರ್ಯಕರ್ತರು ದಿದ್ದಗಿ ಕ್ರಾಸ್‌ ಬಳಿಯ ರಾಜ್ಯ ಹೆದ್ದಾರಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web RAC-RCH06SND4


ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಆದರೆ ಕಾಲುವೆ ನಂ.104ಕ್ಕೆ ಹನಿ ನೀರು ಬರುತ್ತಿಲ್ಲ. ಸಮೀಪದ 55 ಮತ್ತು 65ನೇ ಕಾಲುವೆ ವ್ಯಾಪ್ತಿಯಲ್ಲಿ ಅಕ್ರಮ ನೀರಾವರಿ ಮಾಡಿಕೊಂಡು ಕೃಷಿ ಮಾಡಲಾಗುತ್ತಿದೆ. ಇವರ ವಿರುದ್ಧ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ನೀರುಗಳ್ಳರಿಗೆ ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ಅಕ್ರಮ ನೀರಾವರಿ ಹೆಚ್ಚಾಗುತ್ತಿದೆ.

ಕುಡಿವ ನೀರಿಲ್ಲ: ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು, ಗುಲ್ಬರ್ಗ ವಿಭಾಗೀಯ ಅಧಿಕಾರಿಗಳು ಸೇರಿ ಚರ್ಚಿಸಿದ್ದರೂ ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಗಂಗಾವತಿ ಭಾಗದಲ್ಲಿ 800 ಕ್ಯೂಸೆಕ್‌ ನೀರು ಬಳಕೆಗೆ ಅವಕಾಶ ಇದ್ದರೂ 1,800 ಕ್ಯೂಸೆಕ್‌ ನೀರು ಅನಧಿಕೃತವಾಗಿ ಬಳಸಿಕೊಳ್ಳಲಾಗುತ್ತಿದೆ. ಮಳೆ ಅಭಾವದಿಂದ ಪೋತ್ನಾಳ ಹಳ್ಳದ ಪಕ್ಕದಲ್ಲಿರುವ ಹಳ್ಳಿಗಳಿಗೆ ಕುಡಿವ ನೀರಿನ ಸಮಸ್ಯೆ ಹೆಚ್ಚಿದೆ. ಈ ಬಗ್ಗೆ ಜಿಲ್ಲಾಡಳಿತ ಮುತುವರ್ಜಿವಹಿಸಿಲ್ಲ. ತಕ್ಷ ಣ ಕೊನೆಭಾಗದ ಕಾಲುವೆಗೆ ಸಮರ್ಪಕ ನೀರು ಹರಿಸಬೇಕು. 55ನೇ ನಂ. ಕಾಲುವೆ ವ್ಯಾಪ್ತಿಯಲ್ಲಿ 4,500 ಹಾಗೂ 65ನೇ ಕಾಲುವೆ ವ್ಯಾಪ್ತಿಯಲ್ಲಿ 1,500 ಎಕರೆ ಅಕ್ರಮ ನೀರಾವರಿಯಾಗಿದೆ. ಅಕ್ರಮದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅಕ್ರಮ ನೀರು ಪಡೆಯುತ್ತಿರುವವರಿಗೆÜ ಕಡಿವಾಣ ಹಾಕಬೇಕು. ಹುಲಗುಂಚಿ ದಾಟುವವರೆಗೂ ಹಳ್ಳಕ್ಕೆ ನೀರು ಹರಿಸಬೇಕು. ನಿರ್ಲಕ್ಷ ್ಯವಹಿಸಿದರೆ ಸಿಂಧನೂರು ಬಂದ್‌ ಮಾಡಲಾಗುವುದು ಎಂದು ಎಚ್ಚರಿಸಿದರು. ತಹಸಿಲ್ದಾರ್‌ ಸಂತೋಷ ಕಾಮಗೌಡ ಅವರಿಗೆ ಸ್ಥಳೀಯ ರೈತರು ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ, ತಾಲೂಕು ಅಧ್ಯಕ್ಷ ಬಸವರಾಜ, ಮಾನ್ವಿ ತಾಲೂಕು ಅಧ್ಯಕ್ಷ ಪ್ರಹ್ಲಾದ ರೆಡ್ಡಿ, ಬಸನಗೌಡ ಹುಲಗುಂಚಿ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ