ಆ್ಯಪ್ನಗರ

ಕಾರ್ಮಿಕ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ: ಮನವಿ

ಕೇಂದ್ರ ಸರಕಾರವು ಕಾರ್ಮಿಕರ ಹಿತರಕ್ಷ ಣೆ ಹೆಸರಿನಲ್ಲಿ ಕಾರ್ಮಿಕರ ಕಾಯಿದೆಗಳನ್ನು ತಿದ್ದುಪಡಿ ಮೂಲಕ ದುರ್ಬಲಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಮೆಡಿಕಲ್‌ ಆ್ಯಂಡ್‌ ಸೇಲ್ಸ್‌ ರಿಪ್ರಸೆಂಟೇಟ್ಯೂ ಅಸೋಸಿಯೇಶನ್‌ ಪದಾಧಿಕಾರಿಗಳು ನಗರದ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

Vijaya Karnataka 24 Aug 2019, 5:00 am
ರಾಯಚೂರು : ಕೇಂದ್ರ ಸರಕಾರವು ಕಾರ್ಮಿಕರ ಹಿತರಕ್ಷ ಣೆ ಹೆಸರಿನಲ್ಲಿ ಕಾರ್ಮಿಕರ ಕಾಯಿದೆಗಳನ್ನು ತಿದ್ದುಪಡಿ ಮೂಲಕ ದುರ್ಬಲಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಮೆಡಿಕಲ್‌ ಆ್ಯಂಡ್‌ ಸೇಲ್ಸ್‌ ರಿಪ್ರಸೆಂಟೇಟ್ಯೂ ಅಸೋಸಿಯೇಶನ್‌ ಪದಾಧಿಕಾರಿಗಳು ನಗರದ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
Vijaya Karnataka Web protest against condemnation of labor act amendment appeal
ಕಾರ್ಮಿಕ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ: ಮನವಿ


ಹಿಂಪಡೆಯಿರಿ: ನಗರದ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು 4 ಸಂಹಿತೆಗಳಿಗೆ ಬೆರೆÜಸುವುದರಿಂದ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಕೇಂದ್ರ ಸರಕಾರ ಕಾರ್ಮಿಕರ ಹಕ್ಕುಗಳ ತಿದ್ದುಪಡಿಯನ್ನು ಸ್ಥಗಿತಗೊಳಿಸಬೇಕು, ಕಾರ್ಮಿಕರ ಸಂಹಿತೆಗಳನ್ನು ಅನುಷ್ಠಾನ ಮಾಡಬಾರದು, ಎಸ್‌ಪಿಇ ಕಾಯ್ದೆಯನ್ನು ರದ್ದುಪಡಿಸುವ ಪ್ರಸ್ತಾವನೆ ಹಿಂಪಡೆಯಬೇಕು.

ಕಾರ್ಮಿಕ ಸಂಘಟನೆಗಳ ಪ್ರಸ್ತಾಪದಂತೆ ಮಾರಾಟ ಮತ್ತು ಪ್ರಚಾರದ ನೌಕರರಿಗೆ ಎಸ್‌ಪಿಇ ಕಾಯಿದೆ ನಿಯಮಗಳನ್ವಯ ಶಾಸನಬದ್ಧ ಕೆಲಸದ ಅವಧಿಯನ್ನು ಕೂಡಲೇ ಸೂಚಿಸಬೇಕು. ಔದ್ಯೋಗಿಕ ಸುರಕ್ಷ ತೆ ಮತ್ತು ಕೆಲಸದ ನಿಯಮಗಳನ್ನು ಸಂಹಿತೆ ಅಡಿ ಎಸ್‌ಪಿಇ ಕಾಯಿದೆಯನ್ನು ರದ್ದುಗೊಳಿಸುವುದನ್ನು ಹಿಂಪಡೆಯಬೇಕು ಎಂಬುದು ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ಗುರುರಾಜ ದೇಸಾಯಿ, ಆರ್‌.ಬಿ.ಪಾಟೀಲ್‌, ರಾಜಶೇಖರ್‌, ಮಾರೆಪ್ಪ, ವಿ.ವಿ.ಪಾಟೀಲ್‌ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ