ಆ್ಯಪ್ನಗರ

ರೈತರಿಗೆ ಪಟ್ಟಾ ನೀಡಲು ಆಗ್ರಹಿಸಿ ಪ್ರತಿಭಟನೆ

ತಾಲೂಕಿನಲ್ಲಿಕಳೆದ 30 ರಿಂದ 40 ವರ್ಷಗಳಿಂದ ಭೂಮಿಯಲ್ಲಿಸಾಗುವಳಿ ಮಾಡುತ್ತಿರುವ ಎಲ್ಲರೈತರಿಗೆ ಪಟ್ಟಾ ನೀಡಬೇಕು. ಭೂಮಿ ಮತ್ತು ವಸತಿ ವಂಚಿತರಿಗೆ ಸೂರಿನ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ರೈತ ಸಂಘ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ವೇದಿಕೆಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 29 Nov 2019, 5:00 am
ಸಿಂಧನೂರು: ತಾಲೂಕಿನಲ್ಲಿಕಳೆದ 30 ರಿಂದ 40 ವರ್ಷಗಳಿಂದ ಭೂಮಿಯಲ್ಲಿಸಾಗುವಳಿ ಮಾಡುತ್ತಿರುವ ಎಲ್ಲರೈತರಿಗೆ ಪಟ್ಟಾ ನೀಡಬೇಕು. ಭೂಮಿ ಮತ್ತು ವಸತಿ ವಂಚಿತರಿಗೆ ಸೂರಿನ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ರೈತ ಸಂಘ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ವೇದಿಕೆಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web protest against farmers demanding patta
ರೈತರಿಗೆ ಪಟ್ಟಾ ನೀಡಲು ಆಗ್ರಹಿಸಿ ಪ್ರತಿಭಟನೆ


ತಾಲೂಕಿನ ಗ್ರಾಮೀಣ ಪ್ರದೇಶ ಸೇರಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿಕೆಲವರು ಜೀವಿಸಲು ಕನಿಷ್ಠ ನಿವೇಶನ ಹಾಗೂ ಭೂಮಿಯ ಅಭಾವದಿಂದ ದಿನವೂ ಪಡಿಪಾಟಲು ಅನುಭವಿಸುತ್ತಿದ್ದಾರೆ. ಇನ್ನು ಕೆಲವರು ಅನಧಿಕೃತವಾಗಿ ಅವಶ್ಯಕತೆಗಿಂತಲೂ ಹೆಚ್ಚು ಭೂಮಿ, ನಿವೇಶನ ಹೊಂದಿ ರಾಜಾರೋಷವಾಗಿದ್ದಾರೆ. ಹೀಗಾಗಿ ತಾಲೂಕಿನಲ್ಲಿಕಗ್ಗಲ್‌, ರಂಗದಳ್ಳಿ ಬೇರಿಗಿ, ಬೋಗಾಪುರ, ರತ್ನಾಪುರ, ವೀರಾಪುರ, ಮಾಂಪುರ, ಹೊಗರನಾಳ ಸೇರಿ ಇತರೆ ಗ್ರಾಮಗಳ ಜನರು 30-40 ವರ್ಷಗಳಿಂದ ಸಾಗುವಳಿ ಮಾಡುವ ಭೂಮಿಗೆ ಪಟ್ಟಾ ನೀಡಬೇಕು. ಸಿಂಧನೂರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ94/ಸಿ, 94 ಸಿಸಿ ಅರ್ಜಿ ಸಲ್ಲಿಸುವವರಿಗೆ ನಿರ್ದೇಶನ ಹಕ್ಕುಪತ್ರ ಒದಗಿಸಿ, ಮನೆಗಳನ್ನು ನಿರ್ಮಿಸಿ ಕೊಡಬೇಕು. ಪುನಃ ಅರ್ಜಿ ಸಲ್ಲಿಸಲು ಪ್ರಕಟಣೆ ಮೂಲಕ ಮಾಹಿತಿ ನೀಡಬೇಕು.

ಕ್ರಮ ಜರುಗಿಸಿ: ತಾಲೂಕಿನಲ್ಲಿನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿಸರಕಾರಿ ಭೂಮಿ ಒತ್ತುವರಿ ಸಮಗ್ರ ತನಿಖೆ ನಡೆಸಿ ಒತ್ತುವರಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಭೂಮಿ ಮಂಜೂರಾತಿ ಕಮಿಟಿ ರಚನೆ ಮಾಡಬೇಕು. ಭೂಮಿ ಒತ್ತುವರಿ ಮಾಡಿರುವ ಪ್ರಭಾವಿಗಳ ಒತ್ತುವರಿ ತೆರವುಗೊಳಿಸಬೇಕು. ಹೈಪರ್‌ ಕಮಿಟಿಯ ಮೇಲುಸ್ತುವಾರಿಯಲ್ಲಿಜಿಲ್ಲಾಮಟ್ಟದಲ್ಲಿಎಲ್ಲಾಕೆಲಸಗಳನ್ನು ನನೆಗುದಿಗೆ ಹಾಕಿರುವ ಭೂ ಮಂಜೂರಾತಿಗಳನ್ನು ಹಾಗೂ ಭೂ ನ್ಯಾಯ ಬೆಸೆದು ಕಾಲಬದ್ದವಾಗಿ ಮತ್ತು ಕಾರ್ಯಬದ್ದವಾಗಿ ಕೆಲಸ ಮಾಡುವ ಭೂಮಿ, ನಿವೇಶನ ಮಂಜೂರು ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಸಂಚಾಲಕರಾದ ನಾಗರಾಜ ಪೂಜಾರ, ರಮೇಶ ಪಾಟೀಲ್‌ ಬೇರಿಗಿ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಟ್ಟಿ, ದ್ಯಾಮಣ್ಣ ನಾಯಕ, ಮಹಾದೇವ, ಬಸನಗೌಡ ಮಾಂಪುರ, ಗಿಡ್ಡಪಪ್‌, ಪಾಮಣ್ಣ ಸೇರಿ ಹಲವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ