ಆ್ಯಪ್ನಗರ

ಉದ್ಯೋಗ ಬಡ್ತಿ ವಿಳಂಬ ವಿರೋಧಿಸಿ ಪ್ರತಿಭಟನೆ

ಉದ್ಯೋಗ ಬಡ್ತಿಯಲ್ಲಿ ವಿಳಂಬ ಮತ್ತು ಅನರ್ಹ ವ್ಯಕ್ತಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಪದ್ಧತಿ ಕೈಬಿಡಬೇಕೆಂದು ಒತ್ತಾಯಿಸಿ, ರಾಯಚೂರು ಆಕಾಶವಾಣಿ ಕಾರ್ಯಕ್ರಮ ಸಿಬ್ಬಂದಿ, ಆಕಾಶವಾಣಿ ಕೇಂದ್ರದಲ್ಲಿ ಸೋಮವಾರ, ಎರಡನೇ ಹಂತದ ಪ್ರತಿಭಟನೆ ನಡೆÜಸಿದರು.

Vijaya Karnataka 19 Sep 2018, 5:00 am
ರಾಯಚೂರು : ಉದ್ಯೋಗ ಬಡ್ತಿಯಲ್ಲಿ ವಿಳಂಬ ಮತ್ತು ಅನರ್ಹ ವ್ಯಕ್ತಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಪದ್ಧತಿ ಕೈಬಿಡಬೇಕೆಂದು ಒತ್ತಾಯಿಸಿ, ರಾಯಚೂರು ಆಕಾಶವಾಣಿ ಕಾರ್ಯಕ್ರಮ ಸಿಬ್ಬಂದಿ, ಆಕಾಶವಾಣಿ ಕೇಂದ್ರದಲ್ಲಿ ಸೋಮವಾರ, ಎರಡನೇ ಹಂತದ ಪ್ರತಿಭಟನೆ ನಡೆÜಸಿದರು.
Vijaya Karnataka Web RAC-RCH18HD03


ಭಾರತೀಯ ಪ್ರಸಾರ ಸೇವೆಯಲ್ಲಿ 810 ಉನ್ನತ ಹುದ್ದೆಗಳಿವೆ. ಈ ಪೈಕಿ ಎಂಟು ಕಾಯಂ ಹಾಗೂ 260 ಪ್ರಭಾರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ಎರವಲು ಸೇವೆಯ ಮೇರೆಗೆ ತಂದು ನಿಯೋಜಿಸಲಾಗುತ್ತಿದೆ ಎಂದು ಆಕಾಶವಾಣಿಯು ಕಾರ್ಯಕ್ರಮ ಮುಖ್ಯಸ್ಥ ಎಂ.ಎ. ಸುದರ್ಶನ ದೂರಿದರು.

25 ರಿಂದ 30 ವರ್ಷ ಸೇವೆ ಸಲ್ಲಿಸಿದರೂ ಒಂದೇ ಹುದ್ದೆಯಲ್ಲಿ ಸೇವೆ ನಿರ್ವಹಿಸಬೇಕಾಗಿದೆ. ಪದೋನ್ನತಿ ಇಲ್ಲದೇ ಸೇವೆ ಸಲ್ಲಿಸುವ ಅನಿವಾ¿åರ್‍ತೆಯಲ್ಲಿ ಸಿಬ್ಬಂದಿ ಸಿಲುಕಿದ್ದಾರೆ. ಪ್ರಸಾರ ಭಾರತಿಯು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ಮಾಣ ಮಾಡಲು ವರ್ಷದಿಂದ ವರ್ಷಕ್ಕೆ ಅನುದಾನ ಕಡಿತ ಮಾಡುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸಲು ಅನುದಾನ ನೀಡುತ್ತಿಲ್ಲ, ಕಲಾವಿದರು ದೂರದರ್ಶನ ಆಕಾಶವಾಣಿಯನ್ನು ದೂರುತ್ತಿದ್ದಾರೆ. ಅವರಿಗೆ ಗೌರವಧನ ನೀಡಲು ಅನುದಾನದ ಕೊರತೆ ಕಾಡುತ್ತಿದೆ ಎಂದರು.

ಈ ಪ್ರತಿಭಟನೆಯಲ್ಲಿ ಕಾರ್ಯಕ್ರಮ ನಿರ್ವಾಹಕ ವಿ.ಜಿ.ಬಾವಲತ್ತಿ, ಪ್ರಸಾರ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ