ಆ್ಯಪ್ನಗರ

ಗಣಿತ ಶಿಕ್ಷ ಕರಿಗಾಗಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಸಮೀಪದ ಅನ್ವರಿ ಸರಕಾರಿ ಪ್ರೌಢಶಾಲೆಗೆ ಗಣಿತ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಶಾಲಾ ಮಕ್ಕಳು ಹಾಗೂ ಪಾಲಕರು ಸೇರಿ ಶಾಲೆಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟಿಸಿದರು.

Vijaya Karnataka 6 Jul 2019, 5:00 am
ಹಟ್ಟಿಚಿನ್ನದಗಣಿ : ಸಮೀಪದ ಅನ್ವರಿ ಸರಕಾರಿ ಪ್ರೌಢಶಾಲೆಗೆ ಗಣಿತ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಶಾಲಾ ಮಕ್ಕಳು ಹಾಗೂ ಪಾಲಕರು
Vijaya Karnataka Web protest against school locks for math teachers
ಗಣಿತ ಶಿಕ್ಷ ಕರಿಗಾಗಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ


ಸೇರಿ ಶಾಲೆಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟಿಸಿದರು.

ಕಳೆದ ಒಂದು ವರ್ಷದಿಂದ ಗಣಿತ ಶಿಕ್ಷ ಕರಿಲ್ಲದೇ ಮಕ್ಕಳು ಪರದಾಡುವಂತಾಗಿದೆ. ಗಣಿತ ಶಿಕ್ಷ ಕರನ್ನು ನೇಮಿಸುವಂತೆ ಕಳೆದ ಹಲವು ತಿಂಗಳಿಂದ ಶಿಕ್ಷ ಣ ಇಲಾಖೆಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಗಣಿತ ಶಿಕ್ಷ ಕರ ಕೊರತೆಯಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಅನುತ್ತೀರ್ಣವಾಗಿದ್ದಾರೆ ಎಂದು ಆರೋಪಿಸಿದರು.

ಶಿಕ್ಷ ಣ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚತ್ತು ಗಣಿತ ಶಿಕ್ಷ ಕರನ್ನು ನೇಮಕಮಾಡಬೇಕು. ಇಲ್ಲದಿದ್ದರೆ ಮತ್ತಷ್ಟು ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಅಯ್ಯನಗೌಡ, ವಿಶ್ವನಾಥರೆಡ್ಡಿ ವಕೀಲ್‌, ಜಿಲಾನಿ ಪಾಷಾ, ಸೂಗನಗೌಡ, ಅಯ್ಯಪ್ಪ ಜೂಲಗುಡ್ಡ, ಹುಚ್ಚರೆಡ್ಡಿ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ