ಆ್ಯಪ್ನಗರ

ದೇಗುಲ ಧ್ವಂಸಗೊಳಿಸಿದ್ದಕ್ಕೆ ಖಂಡಿಸಿ ಪ್ರತಿಭಟನೆ

ಕಲಬುರಗಿ ಜಿಲ್ಲೆಯ ಮಾದಿಹಾಳ ತಾಂಡಾದ ಸಂತ ಸೇವಾಲಾಲ್‌ ಹಾಗೂ ಮರಿಯಮ್ಮ ದೇವಿ ದೇವಸ್ಥಾನ ಧ್ವಂಸಗೊಳಿಸಿರುವುದನ್ನು ಖಂಡಿಸಿ ಬಂಜಾರ ಸಮಾಜದಿಂದ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಿ ತಹಸೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಯಿತು.

Vijaya Karnataka 29 Nov 2019, 5:00 am
ಮಸ್ಕಿ ; ಕಲಬುರಗಿ ಜಿಲ್ಲೆಯ ಮಾದಿಹಾಳ ತಾಂಡಾದ ಸಂತ ಸೇವಾಲಾಲ್‌ ಹಾಗೂ ಮರಿಯಮ್ಮ ದೇವಿ ದೇವಸ್ಥಾನ ಧ್ವಂಸಗೊಳಿಸಿರುವುದನ್ನು ಖಂಡಿಸಿ ಬಂಜಾರ ಸಮಾಜದಿಂದ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಿ ತಹಸೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಯಿತು.
Vijaya Karnataka Web protest against the destruction of the shrine
ದೇಗುಲ ಧ್ವಂಸಗೊಳಿಸಿದ್ದಕ್ಕೆ ಖಂಡಿಸಿ ಪ್ರತಿಭಟನೆ


ಹಳೆ ಬಸ್‌ನಿಲ್ದಾಣದಲ್ಲಿಕೆಲಹೊತ್ತು ಸಂಚಾರ ತಡೆದು ಪ್ರತಿಭಟಿಸಿದರು. ನಂತರ ಸುರೇಶ ಅಂತರಗಂಗಿ ಮಾತನಾಡಿ, ಕಲಬುರಗಿಯಲ್ಲಿವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಸಂದರ್ಭ ಸಮಾಜದ ಗುರುಗಳಾದ ಸೇವಾಲಾಲ್‌ ಮಹಾರಾಜರ ನಾಮಕರಣವನ್ನು ವಿಮಾನ ನಿಲ್ದಾಣಕ್ಕೆ ಹೆಸರಿಡಲಾಗುತ್ತದೆಂದು ಆಶ್ವಾಸನೆ ನೀಡಲಾಗಿತ್ತು. ವಿಮಾನ ನಿಲ್ದಾಣದ ಬಳಿಯ ಸೇವಾಲಾಲ್‌ ಮತ್ತು ಮರಿಯಮ್ಮ ದೇವಿಯ ದೇವಸ್ಥಾನಗಳನ್ನು ಉದ್ಘಾಟನೆ ನೆಪದಲ್ಲಿರಾತ್ರೋ ರಾತ್ರಿ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಆದ್ದರಿಂದ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದ್ದರಿಂದ ವಿಮಾನ ನಿಲ್ದಾಣಕ್ಕೆ ಸೇವಾಲಾಲರ ಹೆಸರಿಡಬೇಕೆಂದು ಒತ್ತಾಯಿಸಿದರು. ನಿರ್ಲಕ್ಷಿಸಿದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುಮಾರ ಮಹಾರಾಜರು ನೀಲಾನಗರ ಬಂಜಾರ ಪೀಠ, ಹನುಮಂತಪ್ಪ ಜಕ್ಕೇರಮಡು, ಅಮರೇಶ, ಹರಿಶ್ವಚಂದ್ರ ರಾಠೋಡ್‌, ಕೃಷ್ಣಮೂರ್ತಿ ಜಾಧವ, ಅಮರೇಶ ನಾಯ್ಕ ಅಡವಿಭಾವಿ ತಾಂಡಾ, ದೇವಪ್ಪ ರಾಠೋಡ್‌, ಆರ್‌.ಟಿ ನಾಯ್‌್ಕ, ಶಿವಾನಂದ ರಾಠೋಡ್‌, ಉಮಾಪತಿ, ಲೋಕೇಶ ಡಾಕಪ್ಪ, ಪೋಮನಾಯ್ಕ, ಧನಸಿಂಗಪ್ಪ, ಚಂದ್ರು ಕಲಕಬೆಂಚಿ ತಾಂಡಾ, ಲಾಲಪ್ಪ, ನೀಲಪ್ಪ, ವೆಂಕಟೇಶ ಸೇರಿ ಬಂಜಾರ ಸಮಾಜದವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ