ಆ್ಯಪ್ನಗರ

ಹತ್ಯೆ ಖಂಡಿಸಿ ವಕೀಲರಿಂದ ಪ್ರತಿಭಟನೆ

ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ವಕೀಲರೊಬ್ಬರನ್ನು ಕೊಲೆಮಾಡಿದ ಘಟನೆ ಖಂಡಿಸಿದ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು, ಶುಕ್ರವಾರ, ನ್ಯಾಯಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

Vijaya Karnataka 3 Nov 2018, 5:00 am
ಲಿಂಗಸುಗೂರು ; ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ವಕೀಲರೊಬ್ಬರನ್ನು ಕೊಲೆಮಾಡಿದ ಘಟನೆ ಖಂಡಿಸಿದ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು, ಶುಕ್ರವಾರ, ನ್ಯಾಯಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.
Vijaya Karnataka Web RAC-RCH02LNG01


ಸಿಂಧಗಿ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ದತ್ತು ಬಂಡಿವಡ್ಡರ್‌ ಅವರು, ಸ್ವಗ್ರಾಮ ಬಳಗಾನೂರು ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಮಾಡಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ, ಮೃತರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಪಾಟೀಲ್‌, ಪದಾಧಿಕಾರಿಗಳಾದ ವೀರಭದ್ರಪ್ಪ, ಮಹಾಂತೇಶ ಮರದ್‌, ಬಸವರಾಜ ಹಳ್ಳಿ, ಬಿ.ಬಸವರಾಜ, ಅಮರೇಶ ಗೌಡೂರು, ಅಯ್ಯಪ್ಪ ಮಾಳೂರು, ಮಹೇಶ ಹಿರೇಮಠ, ಕುಪ್ಪಣ್ಣ ಕೋಠಾ, ಬಾಷುಮಿಯಾ, ಸೂರ್ಯಚಂದ್ರ, ಬಾಲರಾಜ ಸಾಗರ, ಮೋಹಿನ್‌ ಪಟೇಲ್‌, ಹನುಮಂತಪ್ಪ ಸರ್ಜಾಪುರ, ರಮೇಶ ನಾಯಕ ಹಾಗೂ ಇತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ