ಆ್ಯಪ್ನಗರ

ಹಮಾಲಿ ಕಾರ್ಮಿಕರಿಂದ ಪ್ರತಿಭಟನೆ

ಪಟ್ಟಣದಲ್ಲಿನ ಎಪಿಎಂಸಿ ಹಾಗೂ ಬಜಾರ್‌ ಹಮಾಲಿ ಕಾರ್ಮಿಕರು ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಾಡ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Vijaya Karnataka 12 Jul 2019, 2:32 pm
ಮುದಗಲ್‌ : ಪಟ್ಟಣದಲ್ಲಿನ ಎಪಿಎಂಸಿ ಹಾಗೂ ಬಜಾರ್‌ ಹಮಾಲಿ ಕಾರ್ಮಿಕರು ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಾಡ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web protest by workers
ಹಮಾಲಿ ಕಾರ್ಮಿಕರಿಂದ ಪ್ರತಿಭಟನೆ


ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿ ಮಾಡಬೇಕು. ಕಳೆದ 2018-19 ನೇ ಸಾಲಿನ ಆಯವ್ಯಯದಲ್ಲಿ 1000 ವಸತಿ ರಹಿತ ಎ.ಪಿ.ಎಂ.ಸಿ ಕೂಲಿ ಕಾರ್ಮಿಕರಿಗೆ ವಸತಿ ಕಲ್ಪಿಸಲು ಘೋಷಣೆಯಾಗಿದ್ದು ಶೀಘ್ರ ಜಾರಿಗೊಳಿಸಬೇಕು. ಪ್ರಧಾನಮಂತ್ರಿ ಆವಾಸ್‌ ಯೋಜನೆ, ಡಿ.ದೇವರಾಜು ಅರಸು ವಸತಿ ಯೋಜನೆಗಳಲ್ಲಿ ಹಮಾಲಿ ಕೂಲಿ ಕಾರ್ಮಿಕರಿಗೆ ತ್ವರಿತವಾಗಿ ಸೂರು ನೀಡಬೇಕು. ಎಪಿಎಂಸಿ ಕಾಯಕ ನಿಧಿ ಯೋಜನೆಯಡಿ ನಿವೃತ್ತಿ ಪರಿಹಾರ, ಭವಿಷ್ಯ ನಿಧಿ ಯೋಜನೆ ಜಾರಿ ಮಾಡಬೇಕು. ಹಮಾಲಿ ಕಾರ್ಮಿಕರಿಗೆ ಯೋಗ್ಯವಾದ ಪಿಂಚಣಿ ಸೌಲಭ್ಯ, ಮಕ್ಕಳ ಶಿಕ್ಷ ಣಕ್ಕೆ ಅನುಕೂಲ, ಮರಣ ಪರಿಹಾರ, ವಿಮೆ ಎಂಬ ಮುಂತಾದ ಸೌಲಭ್ಯಗಳನ್ನು ನೀಡುವುದು, ಅಸಂಘಟಿತ ಕಾರ್ಮಿಕ ನಿಧಿಯನ್ನು ಜಾರಿಗೊಳಿಸುವುದು ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಎಪಿಎಂಸಿ ಹಾಗೂ ಬಜಾರ್‌ ಹಮಾಲಿ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿ ನಾಡ ಕಾರ್ಯಾಲಯದ ಗ್ರಾಮ ಲೆಕ್ಕಾಧಿಕಾರಿ ಕಾಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ದೌಲಸಾಬ್‌ ಹಳೆಪೇಟೆ, ಗೌನಪ್ಪ ಬಡಕುರಿ ( ಕಾರ್ಯದರ್ಶಿ), ಗದ್ದೆಪ್ಪ ( ಉಪಾಧ್ಯಕ್ಷ ) , ಬಜಾರ್‌ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ, ಸಬ್ಜಾವಲಿ ( ಕಾರ್ಯದರ್ಶಿ) ಸೇರಿ ನೂರಾರು ಹಮಾಲಿ ಕಾರ್ಮಿಕರಿದ್ದರು. ಮುದಗಲ್‌ ಠಾಣೆ ಪಿಎಸ್‌ಐ ದೊಡ್ಡಪ್ಪ ಜೆ. ನೇತೃತ್ವದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ