ಆ್ಯಪ್ನಗರ

ಭೂ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ತಾಲೂಕಿನ ಮುಂಡರಗಿ ಗ್ರಾಮ ವ್ಯಾಪ್ತಿಯ ರೈತರಿಗೆ ಭೂ ಪರಿಹಾರ ನೀಡಲು ಆಗ್ರಹಿಸಿ ಸ್ಥಳೀಯ ಸಿಪಿಐಎಂಎಲ್‌ ಪಕ್ಷದ ಕಾರ್ಯಕರ್ತರು ಇಲ್ಲಿನ ಚಿಕ್ಕಹೊನ್ನಕುಣಿ ಗ್ರಾಮದ ನೀರಾವರಿ ಇಲಾಖೆ ಕಚೇರಿ ಎದುರುಗಡೆ ಅರ್ನಿಷ್ಟ ಧರಣಿ ಕೈಗೊಂಡಿದ್ದಾರೆ.

Vijaya Karnataka 2 Oct 2019, 8:11 pm
ದೇವದುರ್ಗ: ತಾಲೂಕಿನ ಮುಂಡರಗಿ ಗ್ರಾಮ ವ್ಯಾಪ್ತಿಯ ರೈತರಿಗೆ ಭೂ ಪರಿಹಾರ ನೀಡಲು ಆಗ್ರಹಿಸಿ ಸ್ಥಳೀಯ ಸಿಪಿಐಎಂಎಲ್‌ ಪಕ್ಷದ ಕಾರ್ಯಕರ್ತರು ಇಲ್ಲಿನ ಚಿಕ್ಕಹೊನ್ನಕುಣಿ ಗ್ರಾಮದ ನೀರಾವರಿ ಇಲಾಖೆ ಕಚೇರಿ ಎದುರುಗಡೆ ಅರ್ನಿಷ್ಟ ಧರಣಿ ಕೈಗೊಂಡಿದ್ದಾರೆ. ಧರಣಿ ಉದ್ದೇಶಿಸಿ ಮಲ್ಲಯ್ಯ ಕಟ್ಟಿಮನಿ ಮಾತನಾಡಿದರು. ಮುಂಡಗಿ ಗ್ರಾಮ ವ್ಯಾಪ್ತಿಯಲ್ಲಿರೈತರ ಜಮೀನು ಸ್ವಾಧೀನ ಪಡಿಸಿಕೊಂಡು 20 ವರ್ಷ ಕಳೆದರೂ ರೈತರಿಗೆ ಪರಿಹಾರ ನೀಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಅಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದ್ದ ಅಲ್ಪಸ್ವಲ್ಪ ಭೂಮಿ ಕಳೆದುಕೊಂಡು 20 ವರ್ಷಗಳಿಂದ ಪರಿಹಾರಕ್ಕಾಗಿ ಕಚೇರಿ ಅಲೆದಾಡುತ್ತಿದ್ದರೂ ಗಮನಹರಿಸುವವರಿಲ್ಲಎಂದು ಆಕ್ರೋಶ ಹೊರಹಾಕಿದರು. ಪರಿಹಾರದ ಲಿಖಿತ ಭರವಸೆ ನೀಡುವವರೆಗೆ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲಎಂದು ಅವರು ತಿಳಿಸಿದರು. ಇದೇ ವೇಳೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
Vijaya Karnataka Web protest demanding land compensation
ಭೂ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ


ದುರುಗಣ್ಣ ಕೆ.ಇರಬಗೇರಾ, ಗಿರಿಲಿಂಗಸ್ವಾಮಿ, ನರಸಣ್ಣ ನಾಯಕ, ವೆಂಕೋಬ ವಂಗಳಪೂರು, ಸಿದ್ದಲಿಂಗಪ್ಪ ಜೇರಬಂಡಿ, ಶಿವಪ್ಪ ಸಮುದ್ರ, ಬಾಬು ಮಲದಕಲ್‌, ರಂಗಪ್ಪ ಜುಟ್ಟಮರಡಿ, ಮಲ್ಲಪ್ಪ ಬರನಿಕಿ ಮುಂಡರಗಿ ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ