ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ

ತಾಲೂಕಿನ ಮುದ್ದಾಪೂರ ಕ್ರಾಸ್‌ನಿಂದ ಗುಡಗಲದಿನ್ನಿವರೆಗೆ ಕೈಗೊಂಡ ರಸ್ತೆ ಕಾಮಗಾರಿ ಕಳಪೆಯಾಗಿರುವುದನ್ನು ತನಿಖೆ ನಡೆಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ)ಯಿಂದ ಬುಧವಾರ ತಹಸೀಲ್‌ ಕಚೇರಿ ಎದುರು ಧರಣಿ ನಡೆಸಲಾಯಿತು.

Vijaya Karnataka 13 Dec 2019, 3:53 pm
ಸಿಂಧನೂರು: ತಾಲೂಕಿನ ಮುದ್ದಾಪೂರ ಕ್ರಾಸ್‌ನಿಂದ ಗುಡಗಲದಿನ್ನಿವರೆಗೆ ಕೈಗೊಂಡ ರಸ್ತೆ ಕಾಮಗಾರಿ ಕಳಪೆಯಾಗಿರುವುದನ್ನು ತನಿಖೆ ನಡೆಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ)ಯಿಂದ ಬುಧವಾರ ತಹಸೀಲ್‌ ಕಚೇರಿ ಎದುರು ಧರಣಿ ನಡೆಸಲಾಯಿತು.
Vijaya Karnataka Web protest for demandings
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ


ಗುಡದೂರು ಮುಖ್ಯ ರಸ್ತೆ ಯಿಂದ ಮೇರನಾಳ ರಸ್ತೆ ಕಳಪೆಯಾಗಿರುವುದು, ಗುಂಜಳ್ಳಿಕ್ಯಾಂಪ್‌ನಿಂದ ತಿಡಿಗೋಳ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೈಗೊಳ್ಳುವುದು, ತುರುವಿಹಾಳ ಪೊಲೀಸ ಠಾಣೆ ವ್ಯಾಪ್ತಿಯ ಗುಡದೂರು, ಹಂಚಿನಾಳ, ಕೋಳಬಾಳ, ಗುಂಜಳ್ಳಿಕ್ಯಾಂಪ್‌, ಗುಂಜಳ್ಳಿ, ತಿಡಿಗೋಳ, ನಿಡಿಗೋಳ, ಭೋಗಾಪುರ, ಕಲಮಂಗಿ, ಗುಂಡಾ, ಚಿಕ್ಕಬೇರಿಗಿ, ಹತ್ತಿಗುಡ್ಡ ಗ್ರಾಮಗಳಲ್ಲಿದಲಿತರಿಗೆ ಹೋಟೆಲ್‌ಗಳಲ್ಲಿಪ್ರವೇಶ ಇಲ್ಲವಾಗಿದ್ದು, ಈ ಕುರಿತು ಗಮನಹರಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು.

ಸಂಘಟನೆ ಪ್ರಧಾನ ಕಾರ್ಯದರ್ಶಿ ಸಹದೇವ ರಾಘವೇಂದ್ರಕ್ಯಾಂಪ್‌, ಜಿಲ್ಲಾಸಹ ಸಂಚಾಲಕರಾದ ಚಿನ್ನಪ್ಪ ಹೆಡಗಿಬಾಳಕ್ಯಾಂಪ್‌, ಎಚ್‌.ರೆಡ್ಡಿ, ಹನುಮಂತ ತಿಡಿಗೋಳ, ಯಮನೂರ ಗುಂಜಳ್ಳಿಕ್ಯಾಂಪ್‌, ಬಾಬು ಕಲಮಂಗಿ, ಹನುಮಂತ ಬೇರಗಿ, ಮುದುಕಪ್ಪ ಸೇರಿ ಹಲವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ