ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ

ಅಂಗನವಾಡಿ ಕೇಂದ್ರಗಳನ್ನು ಮತ್ತು ಮಿನಿ ಅಂಗನವಾಡಿ ಕೇಂದ್ರಗಳನ್ನು ಕಿಂಡರ್‌ಗಾರ್ಟನ್‌ಗಳನ್ನಾಗಿ ಪರಿವರ್ತಿಸಿ ಇಂಗ್ಲಿಷ್‌ ಕಾನ್ವೆಂಟ್‌, ನರ್ಸರಿ ಸ್ಕೂಲ್‌ಗಳಾಗಿ ಮಾಡಿ, 2 ವರ್ಷ 6 ತಿಂಗಳ ಮಕ್ಕಳನ್ನು ಅಂಗನವಾಡಿ ನರ್ಸರಿ ಶಾಲೆಗೆ ಸೇರಿಸಿಕೊಳ್ಳಲು ಸರಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್‌ನಿಂದ ನಗರದ ತಹಸಿಲ್‌ ಕಚೇರಿ ಎದುರು ಶುಕ್ರವಾರ ಧರಣಿ ನಡæಸಿದರು.

Vijaya Karnataka 6 Jul 2019, 5:00 am
ಸಿಂಧನೂರು : ಅಂಗನವಾಡಿ ಕೇಂದ್ರಗಳನ್ನು ಮತ್ತು ಮಿನಿ ಅಂಗನವಾಡಿ ಕೇಂದ್ರಗಳನ್ನು ಕಿಂಡರ್‌ಗಾರ್ಟನ್‌ಗಳನ್ನಾಗಿ ಪರಿವರ್ತಿಸಿ ಇಂಗ್ಲಿಷ್‌ ಕಾನ್ವೆಂಟ್‌, ನರ್ಸರಿ ಸ್ಕೂಲ್‌ಗಳಾಗಿ ಮಾಡಿ, 2 ವರ್ಷ 6 ತಿಂಗಳ ಮಕ್ಕಳನ್ನು ಅಂಗನವಾಡಿ ನರ್ಸರಿ ಶಾಲೆಗೆ ಸೇರಿಸಿಕೊಳ್ಳಲು ಸರಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್‌ನಿಂದ ನಗರದ ತಹಸಿಲ್‌ ಕಚೇರಿ ಎದುರು ಶುಕ್ರವಾರ ಧರಣಿ ನಡæಸಿದರು.
Vijaya Karnataka Web RAC-RCH05SND4


ರಾಜ್ಯದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿವೃತ್ತಿಯಾಗಿದ್ದರೂ ಕೊಡಬೇಕಾದ ಇಡಿ ಗಂಟಿನ ಹಣ ರೂ.50ಸಾವಿರ ಮತ್ತು 30ಸಾವಿರ ರೂ.ಗಳನ್ನು ಹಾಗೂ ಎನ್‌ಪಿಎಸ್‌ ಹಣವನ್ನು ತಕ್ಷ ಣ ಬಿಡುಗಡೆ ಮಾಡಬೇಕು. ಗೋವಾ ಸರಕಾರ ಮಾದರಿಯಂತೆ ಸೇವಾವಧಿಯ ಆಧಾರದ ಮೇಲೆ ವೇತನವನ್ನು ಹೆಚ್ಚಿಸಬೇಕು. 60ವರ್ಷಕ್ಕೆ ನಿವೃತ್ತಿಯಾಗಿರುವ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರೂ.6ಸಾವಿರ ಪಿಂಚಣಿಯನ್ನು ಕೊಡಲು ಮುಂಬರುವ ಆಯ-ವ್ಯಯದಲ್ಲಿ ಜಾರಿಗೆ ತರಬೇಕೆಂಬ ಹಲವು ಬೇಡಿಕೆ ಈಡೇರಿಕೆಗೆ ಧರಣಿ ನಿರತರು ಒತ್ತಾಯಿಸಿದರು.

ಎಐಟಿಯುಸಿ ಮುಖಂಡರಾದ ಭಾಷುಮೀಯಾ, ತಿಪ್ಪಯ್ಯಶೆಟ್ಟಿ ಹಾಗೂ ಗಿರಿಜಮ್ಮ, ಆದಿಲಕ್ಷ್ಮಿ, ಲಕ್ಷ್ಮಿ, ಸುನಿತಾ ಗಾಂಧಿನಗರ, ಸುಧಾ ರೌಡಕುಂದಾ, ಲಾಲಮ್ಮ ಸಿದ್ರಾಂಪುರ, ರತ್ನಮ್ಮ ದೇವರಗುಡಿ, ನಾಗವೇಣಿ ಸೇರಿ ಹಲವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ