ಆ್ಯಪ್ನಗರ

ವಿವಿಧ ಬೇಡಿಕೆಗೆ ಆಗ್ರಹಿಸಿ ಧರಣಿ

ನರೇಗಾದಡಿ 100 ದಿನಕ್ಕೆ ಸೀಮಿತಗೊಳಿಸಿದ ಕೂಲಿಯನ್ನು 150ದಿನಕ್ಕೆ ಹೆಚ್ಚಿಸುವುದು ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಾಗೃತ ರೈತ ಸಂಘ ಹಾಗೂ ಯುವ ಜನರಂಗದ ಕಾರ್ಯಕರ್ತರು ಗುರುವಾರ ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.

Vijaya Karnataka 9 Aug 2019, 5:00 am
ಲಿಂಗಸುಗೂರು : ನರೇಗಾದಡಿ 100 ದಿನಕ್ಕೆ ಸೀಮಿತಗೊಳಿಸಿದ ಕೂಲಿಯನ್ನು 150ದಿನಕ್ಕೆ ಹೆಚ್ಚಿಸುವುದು ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಾಗೃತ ರೈತ ಸಂಘ ಹಾಗೂ ಯುವ ಜನರಂಗದ ಕಾರ್ಯಕರ್ತರು ಗುರುವಾರ ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.
Vijaya Karnataka Web protest for demands
ವಿವಿಧ ಬೇಡಿಕೆಗೆ ಆಗ್ರಹಿಸಿ ಧರಣಿ


ನರೇಗಾ ಕೂಲಿಯನ್ನು 300ರೂ.ಗೆ ಹೆಚ್ಚಿಸಬೇಕು. ಗೆಜ್ಜಲಗಟ್ಟಾದಲ್ಲಿ ಕೂಲಿಕಾರರಿಗೆ ಎರಡು ತಿಂಗಳಿಂದ ಕೂಲಿ ನೀಡಿಲ್ಲ. ಕೂಡಲೇ ವೇತನ ಪಾವತಿಸಬೇಕು. ಗೆಜ್ಜಲಗಟ್ಟಾದಲ್ಲಿ ಕುಡಿವ ನೀರಿನ ಸಮಸ್ಯೆಯಿದ್ದು, ನೀರಿನ ವ್ಯವಸ್ಥೆ ಮಾಡಬೇಕು. ಗೆಜ್ಜಲಗಟ್ಟಾ ಪಿಡಿಒ ಕರ್ತವ್ಯಲೋಪ ಎಸಗಿದ್ದು ಈ ಬಗ್ಗೆ ತನಿಖೆ ನಡೆಸಿ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಸಲ್ಲಿಸಿದರು.

ಸಂಘಟನೆಗಳ ಮುಖಂಡರಾದ ಚೆನ್ನಬಸವ ಕರ್ನಾಟಗಿ, ಆರ್‌.ಎಸ್‌.ಗುತ್ತೇದಾರ್‌, ಶರಣಪ್ಪ ಸಾಲಿ, ಅಮರಪ್ಪ ದಳಪತಿ, ವಿನಾಯಕ ಕುಮಾರ, ಆದಮ್ಮ, ರೇಣುಕಮ್ಮ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ