ಆ್ಯಪ್ನಗರ

ನಾನಾ ಬೇಡಿಕೆ ಈಡೇರಿಸಲು ಆಗ್ರಹ

ಕೇಂದ್ರ ಸರಕಾರದ ಕೆಲ ನಿಯಮ ಜಾರಿಗೆ ವಿರೋಧಿಸಿ ಹಾಗೂ ಕಾರ್ಮಿಕರ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇವದುರ್ಗದಲ್ಲಿಸಿಐಟಿಯು ತಾಲೂಕು ಸಮಿತಿ ಗುರುವಾರ ಪ್ರತಿಭಟನೆ ಮೆರವಣಿಗೆ ನಡೆಸಿತು.

Vijaya Karnataka 7 Sep 2019, 5:00 am
ದೇವದುರ್ಗ : ಕೇಂದ್ರ ಸರಕಾರದ ಕೆಲ ನಿಯಮ ಜಾರಿಗೆ ವಿರೋಧಿಸಿ ಹಾಗೂ ಕಾರ್ಮಿಕರ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇವದುರ್ಗದಲ್ಲಿಸಿಐಟಿಯು ತಾಲೂಕು ಸಮಿತಿ ಗುರುವಾರ ಪ್ರತಿಭಟನೆ ಮೆರವಣಿಗೆ ನಡೆಸಿತು.
Vijaya Karnataka Web protest for fulfill of demands
ನಾನಾ ಬೇಡಿಕೆ ಈಡೇರಿಸಲು ಆಗ್ರಹ


ಸ್ಥಳೀಯ ಸಾರ್ವಜನಿಕ ಕ್ಲಬ್‌ ಮೈದಾನದಿಂದ ಮಿನಿ ವಿಧಾನ ಸೌಧದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮಿನಿ ವಿಧಾನ ಸೌಧ ಎದುರು ಕೆಲ ಸಮಯ ಧರಣಿ ಕುಳಿತರು. ಪ್ರತಿಭಟನೆ ಉದ್ದೇಶಿಸಿ ಸಿಐಟಿಯು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರಕಾರದ ಕೆಲ ನೀತಿಗಳಿಂದ ದೇಶದ ಆರ್ಥಿಕತೆ ಕುಸಿಯುತ್ತಿದೆ. ದುಡಿವ ವರ್ಗಗಳನ್ನು ಕಡೆಗಣಿಸಿ ಬಂಡವಾಳ ಶಾಹಿಗಳ ಹಿತ ಕಾಪಾಡುತ್ತಿರುವುದರಿಂದ ದೇಶದಲ್ಲಿಬಡತನ ಹೆಚ್ಚಿದೆ ಎಂದು ಆರೋಪಿಸಿದರು.

ಅಸಂಘಟಿತ ಕಾರ್ಮಿಕರಿಗೆ 18 ಸಾವಿರ ವೇತನ ನೀಡಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಕಾಯಂ ಪದ್ಧತಿ ಜಾರಿಗೆ ತರಬೇಕು. ಬ್ಯಾಂಕ್‌ ವಿಮೆ ಶಿಕ್ಷಣ, ಆರೋಗ್ಯ ಇವುಗಳಲ್ಲಿಸರಕಾರದ ಬಂಡವಾಳ ಮುಂದುವರಿಯಬೇಕು. ಐಸಿಡಿಎಸ್‌ ಯೋಜನೆ ಬಲಪಡಿಸಬೇಕು. ನೆರೆ ಸಂತ್ರಸ್ತರಿಗೆ ನವ ಜೀವನ ಕಟ್ಟಿಕೊಳ್ಳುವ ಸವಲತ್ತುಗಳು ಸರಕಾರ ಒದಗಿಸಿಕೊಡಬೇಕು. 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸಬೇಕು, ಋುಣಮುಕ್ತ ಕಾಯಿದೆ ಜಾರಿಗೆ ತರಬೇಕು ಹಾಗೂ ರೈತ ಕಾರ್ಮಿಕರ ಚಳವಳಿಗಳನ್ನು ಹತ್ತಿಕ್ಕುವ ಹುನ್ನಾರ ಕೈಬಿಡಬೇಕು ಎಂಬುದು ಸೇರಿ ಇನ್ನಿತರ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಸೀಲ್ದಾರ್‌ ಮಂಜುನಾಥ ಮುಖಾಂತರ ಕೇಂದ್ರ ಗೃಹಮಂತ್ರಿಗಳಿಗೆ ರವಾನಿಸಲಾಯಿತು.

ಶಕುಂತಲಾ ದೇಸಾಯಿ, ನರಸಣ್ಣ ನಾಯಕ, ಹನುಮಂತ ಮಂಡಲಗುಡ್ಡ, ರಂಗಮ್ಮ ಅನ್ವರ, ರಮಾದೇವಿ, ಮರಿಯಮ್ಮ,

ಶ್ರೀಲೇಖಾ, ಸಾವಿತ್ರಿ, ಮಕ್ತುಂಬಿ, ಗುರುನಾಯಕ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ