ಆ್ಯಪ್ನಗರ

ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಪಟ್ಟಣದ ಮೋಮಿನಪೂರ ಬಡಾವಣೆಯಲ್ಲಿರುವ ಬಾಳೆಕಾಯಿ ರೈಸ್‌ ಮಿಲ್‌ನಲ್ಲಿರುವ ಮುರಾರ್ಜಿ ದೇಸಾಯಿ (ಬಿಸಿಎಂ) ವಸತಿ ಶಾಲೆಯ ತರಗತಿ ಕೊಠಡಿಗಳ ಮಳೆಗೆ ಸೋರುತ್ತಿರುವದರಿಂದ ವಿದ್ಯಾರ್ಥಿಗಳು ತರಗತಿಗಳನ್ನು ಬಷ್ಕರಿಸಿ ಬುಧವಾರ ಪ್ರತಿಭಟನೆ ನಡೆಸಿದರು.

Vijaya Karnataka 18 Jul 2019, 5:00 am
ಮಸ್ಕಿ : ಪಟ್ಟಣದ ಮೋಮಿನಪೂರ ಬಡಾವಣೆಯಲ್ಲಿರುವ ಬಾಳೆಕಾಯಿ ರೈಸ್‌ ಮಿಲ್‌ನಲ್ಲಿರುವ ಮುರಾರ್ಜಿ ದೇಸಾಯಿ (ಬಿಸಿಎಂ) ವಸತಿ ಶಾಲೆಯ ತರಗತಿ ಕೊಠಡಿಗಳ ಮಳೆಗೆ ಸೋರುತ್ತಿರುವದರಿಂದ ವಿದ್ಯಾರ್ಥಿಗಳು ತರಗತಿಗಳನ್ನು ಬಷ್ಕರಿಸಿ ಬುಧವಾರ ಪ್ರತಿಭಟನೆ ನಡೆಸಿದರು.
Vijaya Karnataka Web RAC-RCH17MSK01


ಶಾಲಾ ಕೊಠಡಿಗಳ ಟಿನ್‌ಶೀಟ್‌ಗಳು ಅಲ್ಲಲ್ಲಿ ಕಿತ್ತು ಹೋಗಿರುವುದರಿಂದ ಮಳೆಯ ನೀರು ಕೊಠಡಿಯೊಳಗೆ ತುಂಬುಕೊಳ್ಳುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಕೊಠಡಿಗಳ ಈ ಅವಸ್ಥೆಯಿಂದಾಗಿ ತರಗತಿಗಳು ಸಹ ಸರಿಯಾಗಿ ನಡೆಯವುದಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೊಡಿಕೊಂಡರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕರ ಪುತ್ರ ಪ್ರಸನ್ನ ಪಾಟೀಲ್‌ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ, ರೈಸ್‌ಮಿಲ್‌ ಮಾಲೀಕರನ್ನು ಕರೆಯಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮೂರು ದಿನಗಳವೊಳಗಾಗಿ ಸರಿಪಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ಮೂರು ದಿನಗಳ ಕಾಲವಕಾಶದಲ್ಲಿ ರೈಸ್‌ ಮಿಲ್‌ ಮಾಲಿಕರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಶಿಕ್ಷ ಕರು ವಿದ್ಯಾರ್ಥಿಗಳ ಮನವೊಲಿಸಿ ತರಗತಿಗಳಿಗೆ ಕಳುಹಿಸಲಾಯಿತು.

ಶ್ರೀಧರ ಪಾಟೀಲ್‌ ಹಿರೇಕಡಬೂರು, ಪ್ರಾಂಶುಪಾಲ ಯಂಕೋಬ್‌ ದೇವಾಪೂರು, ಪ್ರಭಾರಿ ನಿಲಯಪಾಲಕಿ ಶರೀಫಾಬೇಗಂ, ಶಿಕ್ಷ ಕರಾದ ಸುಭಾಷಚಂದ್ರ, ಇಬ್ರಾಹಿಂಬಾಷಾ, ಚಂದ್ರಪ್ಪ.ಟಿ.ಆರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ