ಆ್ಯಪ್ನಗರ

ಪ್ರಶ್ನೆ ಪತ್ರಿಕೆ ಬಯಲು: ಪರೀಕ್ಷೆ ರದ್ದು

ಗುಲ್ಬರ್ಗ ವಿವಿಯ ಬಿಕಾಂ ಮೂರನೇ ಸೆಮಿಸ್ಟರ್ ‘ಕ್ವಾಂಟಿಟೇಟಿವ್ ಟೆಕ್ನಿಕ್ಸ್’ ವಿಷಯದ ಪ್ರಶ್ನೆ ಪತ್ರಿಕೆ, ಮಂಗಳವಾರ ಪರೀಕ್ಷೆ ಮೂರು ತಾಸು ಮುನ್ನವೇ ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ವಿವಿ ಆಡಳಿತ, ಪರೀಕ್ಷೆ ರದ್ದುಗೊಳಿಸಿ ಆದೇಶಿಸಿತು.

Vijaya Karnataka 8 Nov 2017, 7:53 am
ರಾಯಚೂರು: ಗುಲ್ಬರ್ಗ ವಿವಿಯ ಬಿಕಾಂ ಮೂರನೇ ಸೆಮಿಸ್ಟರ್ ‘ಕ್ವಾಂಟಿಟೇಟಿವ್ ಟೆಕ್ನಿಕ್ಸ್’ ವಿಷಯದ ಪ್ರಶ್ನೆ ಪತ್ರಿಕೆ, ಮಂಗಳವಾರ ಪರೀಕ್ಷೆ ಮೂರು ತಾಸು ಮುನ್ನವೇ ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ವಿವಿ ಆಡಳಿತ, ಪರೀಕ್ಷೆ ರದ್ದುಗೊಳಿಸಿ ಆದೇಶಿಸಿತು.
Vijaya Karnataka Web question paper cancel the exam
ಪ್ರಶ್ನೆ ಪತ್ರಿಕೆ ಬಯಲು: ಪರೀಕ್ಷೆ ರದ್ದು


ಮಧ್ಯಾಹ್ನ 2ಕ್ಕೆ ಪರೀಕ್ಷೆ ಸಮಯ ನಿಗದಿಯಾಗಿತ್ತು. ಆದರೆ, ವಿವಿ ವ್ಯಾಪ್ತಿಯ ಬಹುತೇಕರ ಮೊಬೈಲ್‌ಗಳಲ್ಲಿ ಬೆಳಗ್ಗೆ 11ರ ಸುಮಾರಿಗೆ ಪ್ರಶ್ನೆಪತ್ರಿಕೆ ಹರಿದಾಡತೊಡಗಿತ್ತು. ಈ ಬಗ್ಗೆ ಹಲವು ಕಾಲೇಜುಗಳ ಮುಖ್ಯಸ್ಥರು, ವಿವಿ ಆಡಳಿತದ ಗಮನಕ್ಕೆ ತಂದರು. ತಕ್ಷಣ ಕಾರ್ಯಪ್ರವೃತ್ತವಾದ ವಿವಿ ಆಡಳಿತ, ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡಿದ ಪ್ರಶ್ನೆಪತ್ರಿಕೆ ಮತ್ತು ಮೂಲ ಪ್ರಶ್ನೆ ಪತ್ರಿಕೆ ಪರಿಶೀಲಿಸಿತು. ಬಹುತೇಕ ಪುಟಗಳು ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಬಿಕಾಂ ಮೂರನೇ ಸೆಮಿಸ್ಟರ್‌ನ ‘ಕ್ವಾಂಟಿಟೇಟಿವ್ ಟೆಕ್ನಿಕ್ಸ್’ ವಿಷಯದ ಪರೀಕ್ಷೆಯನ್ನು ರದ್ದುಗೊಳಿಸಿತು.

ಮಂಗಳವಾರ ಮಧ್ಯಾಹ್ನದ ಪರೀಕ್ಷೆ ರದ್ದಾದ ಮಾಹಿತಿಯಿಲ್ಲದೇ ಹಲವು ವಿದ್ಯಾರ್ಥಿಗಳು ಎಂದಿನ ಉತ್ಸಾಹದಿಂದ ಮಧ್ಯಾಹ್ನ 1.30ಕ್ಕೆ ಸಂಬಂಧಿಸಿದ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದರು. ಕಾಲೇಜುಗಳ ಉಪನ್ಯಾಸಕರು ಪರೀಕ್ಷೆ ರದ್ದತಿ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ವಾಪಸ್‌ಕಳಿಸಿದರು. ಪರೀಕ್ಷೆ ರದ್ದಾಗಿದ್ದರಿಂದ ವಿದ್ಯಾರ್ಥಿಗಳು ತೀವ್ರ ನಿರಾಸೆ ಅನುಭವಿಸುವಂತಾಯಿತು.

ಸೋರಿಕೆ ಪತ್ತೆಗೆ ತನಿಖೆ: ಮಧ್ಯಾಹ್ನ ಅವಧಿಯ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ವಿವಿ ಆಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸುಸೂತ್ರವಾಗಿ ನಡೆದಿದ್ದ ಪರೀಕ್ಷಾ ಪ್ರಕ್ರಿಯೆಯಲ್ಲಿ ಮಂಗಳವಾರ ಪ್ರಶ್ನೆಪತ್ರಿಕೆಯ ಸೋರಿಕೆ ಗೊಂದಲ ಮೂಡಿಸಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸುವುದಾಗಿ ವಿವಿ ಪರೀಕ್ಷಾಂಗ ತಿಳಿಸಿದೆ. ಆದರೆ, ಸದ್ಯ ಪ್ರಶ್ನೆ ಪತ್ರಿಕೆ ಯಾವ ಕಾಲೇಜಿನಿಂದ ಸೋರಿಕೆಯಾಗಿದೆ ಎಂಬುದರ ಜಾಡು ಪತ್ತೆಗೆ ವಿವಿ ಮುಂದಾಗಿದೆ. ಈ ನಿಟ್ಟಿನಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ವಿವಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

.............

ಬಿಕಾಂ ಮೂರನೇ ಸೆಮಿಸ್ಟರ್‌ನ ಕ್ಯೂ.ಟಿ. ಪತ್ರಿಕೆ ಬಯಲಾಗಿರುವುದು ಬೆಳಗ್ಗೆ 11.15ಕ್ಕೆ ಗಮನಕ್ಕೆ ಬಂತು. ವಾಟ್ಸ್ ಆ್ಯಪ್‌ನಲ್ಲಿ ಹರಿದಾಡಿದ ಪ್ರಶ್ನೆಪತ್ರಿಕೆ ಪರಿಶೀಲಿಸಿದಾಗ ಒಟ್ಟು 7 ಪುಟಗಳಲ್ಲಿ ಐದು ಪುಟಗಳು ತಾಳೆಯಾದವು. ಈ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು ಸಮಗ್ರ ತನಿಖೆಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ.

-ಪ್ರೊ.ಡಿ.ಎಂ.ಮದರಿ, ಕುಲಸಚಿವರು, ಪರೀಕ್ಷಾಂಗ ವಿಭಾಗ, ಗುಲ್ಬರ್ಗ ವಿವಿ, ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ