ಆ್ಯಪ್ನಗರ

ಬಿಸಿಲ ಝಳ: ರಾಯಚೂರಲ್ಲಿ ಕಾರ್ಮಿಕ ಸಾವು

ಗಾಣದಾಳ ಗ್ರಾಪಂ ವ್ಯಾಪ್ತಿಯ ಕೆರೆಹೂಳೆತ್ತುವ ಕಾಮಗಾರಿ ಯಲ್ಲಿ ದಾವೀದಪ್ಪ ಮಧ್ಯಾಹ್ನ ಕೆಲಸ ಮಾಡುತ್ತಿದ್ದ ವೇಳೆ ಬಿಸಿಲಿನ ತಾಪಕ್ಕೆ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ. ಕೆಲವು ಕ್ಷಣಗಳ ನಂತರ ಕೊನೆಯುಸಿರೆಳೆದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Vijaya Karnataka Web 15 Mar 2019, 6:46 pm
ರಾಯಚೂರು: ಬಿಸಿಲ ತಾಪಕ್ಕೆ ಅಸ್ವಸ್ಥಗೊಂಡು ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
Vijaya Karnataka Web ಬಿಸಿಲ ಝಳಕ್ಕೆ ಸಾವು
ಬಿಸಿಲ ಝಳಕ್ಕೆ ಸಾವು


ದಾವೀದಪ್ಪ (53) ಮೃತ ಕೂಲಿಕಾರ್ಮಿಕ.

ರಾಯಚೂರು ತಾಲೂಕಿನ ಗಾಣದಾಳ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಗಾಣದಾಳ ಗ್ರಾಪಂ ವ್ಯಾಪ್ತಿಯ ಕೆರೆಹೂಳೆತ್ತುವ ಕಾಮಗಾರಿ ಯಲ್ಲಿ ದಾವೀದಪ್ಪ ಮಧ್ಯಾಹ್ನ ಕೆಲಸ ಮಾಡುತ್ತಿದ್ದ ವೇಳೆ ಬಿಸಿಲಿನ ತಾಪಕ್ಕೆ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ. ಕೆಲವು ಕ್ಷಣಗಳ ನಂತರ ಕೊನೆಯುಸಿರೆಳೆದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಳೆದ ತಿಂಗಳ 27 ರಂದು ಇದೇ ರೀತಿ ತಾಲೂಕಿನ ಬಿಚ್ವಾಲಿ ಗ್ರಾಪಂ ವ್ಯಾಪ್ತಿಯಲ್ಲಿ ಬಿಸಿಲಿನ ತಾಪಕ್ಕೆ ಬುಡ್ಡೆಪ್ಪ ಎಂಬುವವರು ಕೊನೆಯುಸಿರೆಳೆದಿದ್ದರು.

ಕಾಮಗಾರಿ ಸ್ಥಳದಲ್ಲೇ ಹೋರಾಟ. ಬೇಸಿಗೆ ಹಿನ್ನೆಲೆ ಸ್ಥಳದಲ್ಲಿ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಕೆಲಸ ನಿರ್ವಹಿಸುವ ಕೆಲಸದ ಅವಧಿ ಬೇಸಿಗೆ ಹಿನ್ನೆಲೆ‌ ಸರಕಾರದಿಂದ ಕಡಿತವಿಲ್ಲ ಹಾಗಾಗಿ ಕಾರ್ಮಿಕನ ಸಾವು ಸಂಭವಿಸಿದೆ. ಕೂಡಲೇ ಸೂಕ್ತ ಪರಿಹಾರ ಒದಗಿಸಿ, ಸೌಲಭ್ಯಗಳನ್ನು ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ