ಆ್ಯಪ್ನಗರ

ನಾನಾ ಕಡೆ ಮಳೆ: ಜನರಿಗೆ ಹರ್ಷ

ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಮಂಗಳವಾರ ಮಳೆ ಸುರಿಯಿತು. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ವಿವಿಧೆಡೆ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಸುರಿಯುತ್ತಿರುವುದರಿಂದ ಜನರು ಹರ್ಷಗೊಂಡಿದ್ದಾರೆ.

Vijaya Karnataka 17 Jul 2019, 5:00 am
ರಾಯಚೂರು : ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಮಂಗಳವಾರ ಮಳೆ ಸುರಿಯಿತು. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ವಿವಿಧೆಡೆ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಸುರಿಯುತ್ತಿರುವುದರಿಂದ ಜನರು ಹರ್ಷಗೊಂಡಿದ್ದಾರೆ. ಇದೇ ವೇಳೆ ಕಳೆದೆರಡು ದಿನಗಳಿಂದ ಸುರಿದ ಸಾಧಾರಣ ಮಳೆಗೆ ನಗರದಲ್ಲಿನ ರಸ್ತೆಗಳು ಜಲಾವೃತಗೊಂಡವು. ನಗರದ ಟಿಪ್ಪು ಸುಲ್ತಾನ್‌, ಭಂಗಿಕುಂಟ, ಸಿಯಾತಲಾಬ್‌ ರಸ್ತೆ ಸೇರಿ ನಾನಾಕಡೆ ಮಳೆ ನೀರು ಸರಾಗವಾಗಿ ಹರಿಯದೇ ಅವಾಂತರ ಸೃಷ್ಟಿಯಾಯಿತು. ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು.
Vijaya Karnataka Web rain people are excited
ನಾನಾ ಕಡೆ ಮಳೆ: ಜನರಿಗೆ ಹರ್ಷ


ಮಳೆಯ ಪ್ರಮಾಣ: ಜಿಲ್ಲೆಯ ನಾನಾಕಡೆ ಸೋಮವಾರ ಸುರಿದ ಮಳೆ ಪೈಕಿ ರಾಯಚೂರು ನಗರದಲ್ಲಿ 5.2ಮಿ.ಮೀ, ಯರಮರಸ್‌ನಲ್ಲಿ 11.8ಮಿ.ಮೀ, ದೇವಸುಗೂರಿನಲ್ಲಿ 12.6ಮಿ.ಮೀ, ಚಂದ್ರಬಂಡಾದಲ್ಲಿ 2.1ಮಿ.ಮೀ, ಕಲ್ಮಲಾದಲ್ಲಿ 7ಮಿ.ಮೀ, ಯರಗೇರಾದಲ್ಲಿ 1.4ಮಿ.ಮೀ, ಗಿಲ್ಲೆಸುಗೂರಿನಲ್ಲಿ 2ಮಿ.ಮೀ, ಮಾನ್ವಿ ತಾಲೂಕಿನ ಕುರ್ಡಿಯಲ್ಲಿ 13.3ಮಿ.ಮೀ, ಸಿಂಧನೂರು ಪಟ್ಟಣದಲ್ಲಿ 7.2ಮಿ.ಮೀ, ಗುಡದೂರಿನಲ್ಲಿ 15.3ಮಿ.ಮೀ, ವಲ್ಕಂದಿನ್ನಿಯಲ್ಲಿ 3.4ಮಿ.ಮೀ, ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ವಾಡಿಕೆ ಮಳೆ 3.16 ಮಿ.ಮೀ ಪೈಕಿ 3.92ಮಿ.ಮೀ ಮಳೆಯಾಗಿದೆ. ಶೇ.24ರಷ್ಟು ಮಳೆ ಸುರಿದಿದೆ. ಜೂ.1ರಿಂದ 16ರವರೆಗೆ ವಾಡಿಕೆ ಮಳೆ 128.26 ಮಿ.ಮೀ ನಿರೀಕ್ಷಿಸಲಾಗಿತ್ತು. ಆದರೆ 87.72ಮಿ.ಮೀ ವಾಸ್ತವ ಮಳೆಯಾಗಿದ್ದು, ಶೇ.37ರಷ್ಟು ಮಳೆ ಕೊರತೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ