ಆ್ಯಪ್ನಗರ

ಶಾಲೆಯೊಳಗೆ ಮಳೆ ನೀರು

ತಾಲೂಕಿನ ಹಿರೇದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇದಿನ್ನಿ ಕ್ಯಾಂಪಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬುಧವಾರ ರಾತ್ರಿ ಸುರಿದ ಮಳೆಗೆ ಸೋರಿದ್ದರಿಂದ ಶಾಲೆಯೊಳಗೆ ಮಳೆ ನೀರುನಿಂತು ಸಮಸ್ಯೆ ಸೃಷ್ಟಿಯಾಯಿತು.

Vijaya Karnataka 25 Oct 2019, 3:16 pm
ಮಸ್ಕಿ: ತಾಲೂಕಿನ ಹಿರೇದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇದಿನ್ನಿ ಕ್ಯಾಂಪಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬುಧವಾರ ರಾತ್ರಿ ಸುರಿದ ಮಳೆಗೆ ಸೋರಿದ್ದರಿಂದ ಶಾಲೆಯೊಳಗೆ ಮಳೆ ನೀರುನಿಂತು ಸಮಸ್ಯೆ ಸೃಷ್ಟಿಯಾಯಿತು.
Vijaya Karnataka Web rain water inside the school
ಶಾಲೆಯೊಳಗೆ ಮಳೆ ನೀರು


ಹಿರೇದಿನ್ನಿ ಕ್ಯಾಂಪಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಸುಮಾರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಚಾವಣಿ ಹಾಳಾಗಿ ಸೋರುವುದರಿಂದ ಶಾಲೆಯೊಳಗೆ ನೀರು ನಿಲ್ಲುವುದು ಸಾಮಾನ್ಯವಾಗಿದೆ. 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳು ಕಳೆದ 15 ದಿನಗಳಿಂದ ಮಳೆ ಹಿನ್ನೆಲೆಯಲ್ಲಿತೊಂದರೆ ಎದುರಿಸುತ್ತಿದ್ದಾರೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದಿರುವ ಕಾರಣ ಹಾಸು ಬಂಡೆಗಳ ಮೇಲೆ ಕುಳಿತು ಪಾಠ ಕೇಳುವ ಸ್ಥಿತಿ ಇದೆ. ಕೊಠಡಿ ಸೋರಿದಾಗ ನಿಲ್ಲುವ ನೀರನ್ನು ಹೊರಹಾಕುವುದೇ ಇಲ್ಲಿಯವರಿಗೆ ಕೆಲಸವಾಗಿದೆ. ಈ ಸಮಸ್ಯೆ ಸರಿಪಡಿಸುವಂತೆ ಹಲವಾರು ಬಾರಿ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ಗ್ರಾ.ಪಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದರೂ ಯಾವೊಬ್ಬ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷತ್ರ್ಯವಹಿಸುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಬಸಪ್ಪ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ಮತ್ತು ಸದಸ್ಯರು ಆರೋಪಿಸಿದ್ದಾರೆ. ಮೇಲಧಿಕಾರಿಗಳು ಗಮನಹರಿಸಿ ಚಾವಣಿ ಸರಿಪಡಿಸಲು ಕ್ರಮ ವಹಿಸಬೇಕು ಎಂದು ಬಸವರಾಜ ಹಿರೇದಿನ್ನಿ, ದೇವರಾಜ ಹಿರೇದಿನ್ನಿ, ಯಲ್ಲಪ್ಪ ಪೂಜಾರಿ, ಗಂಗಪ್ಪ ತೋರಣದಿನ್ನಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ